ಧಾರವಾಡ ಸಾಹಿತ್ಯ ಸಮ್ಮೇ​ಳ​ನದ ಲಾಂಛನ, ವೆಬ್‌ಸೈಟ್‌ ಬಿಡು​ಗ​ಡೆ

Published : Nov 17, 2018, 08:52 AM IST
ಧಾರವಾಡ ಸಾಹಿತ್ಯ ಸಮ್ಮೇ​ಳ​ನದ ಲಾಂಛನ, ವೆಬ್‌ಸೈಟ್‌ ಬಿಡು​ಗ​ಡೆ

ಸಾರಾಂಶ

 ಜ.4ರಿಂದ 6ರವರೆಗೆ ನಡೆಯಲಿರುವ 84ನೇ ಅಖಿತ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನವನ್ನು ಶುಕ್ರವಾರ ಲೋಕಾರ್ಪಣೆ ಮಾಡಲಾಯಿತು. 

ಧಾರ​ವಾ​ಡ :  ಧಾರವಾಡದಲ್ಲಿ ಜ.4ರಿಂದ 6ರವರೆಗೆ ನಡೆಯಲಿರುವ 84ನೇ ಅಖಿತ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನವನ್ನು ಶುಕ್ರವಾರ ಲೋಕಾರ್ಪಣೆ ಮಾಡಲಾಯಿತು. ಧಾರ​ವಾ​ಡದ ಗರಿಮೆಗಳಾದ ಕರ್ನಾ​ಟಕ ವಿದ್ಯಾ​ವ​ರ್ಧಕ ಸಂಘ, ಕರ್ನಾ​ಟಕ ವಿಶ್ವ​ವಿ​ದ್ಯಾ​ಲಯ, ಡಯಟ್‌ ಹಾಗೂ ಸಾಹಿತ್ಯ ಮತ್ತು ಸಂಗೀ​ತದ ಹಿನ್ನೆ​ಲೆಯ ಕಲ್ಪ​ನೆ​ಯಲ್ಲಿ ಕಲಾವಿದ ಮಹೇಶ ಪತ್ತಾರ ರಚಿ​ಸಿದ ಈ ಲಾಂಛನವನ್ನು ಶುಕ್ರ​ವಾರ ಕಂದಾಯ ಸಚಿವ ಆರ್‌.ವಿ. ದೇಶ​ಪಾಂಡೆ ಬಿಡು​ಗಡೆ ಮಾಡಿ​ದರು.

ಕನ್ನಡ ಸಾಹಿತ್ಯ ಪರಿ​ಷತ್‌ ಲಾಂಛನ ಸೇರಿ ಕನ್ನ​ಡದ ಬಾವುಟ, ಹುಬ್ಬ​ಳ್ಳಿಯ ಕಿತ್ತೂರು ಚೆನ್ನಮ್ಮನ ಪ್ರತಿಮೆ, ಪುಸ್ತ​ಕ​ಗಳ ಹೊತ್ತಿಗೆ, ಸಂಗೀ​ತದ ಪರಿ​ಕ​ರ​ಗ​ಳನ್ನು ಒಳ​ಗೊಂಡ ಲಾಂಛನ ಇದಾಗಿದೆ. ಲಾಂಛನ ಬಿಡುಗಡೆ ಜತೆಗೆ, ಸಮ್ಮೇ​ಳ​ನದ ಮಾಹಿತಿ ಇಡೀ ಜಗ​ತ್ತಿಗೆ ಪಸ​ರಿ​ಸಲು ಸಿದ್ಧ​ವಾದ ವೆಬ್‌​ಸೈಟ್‌(  (abkssdwd.org) ಅನ್ನು ಸಹ ಜಿ.ಪಂ. ಸಭಾಂಗ​ಣ​ದಲ್ಲಿ ನಡೆದ ಸಮ್ಮೇ​ಳ​ನದ ಪೂರ್ವ​ಭಾವಿ ಸಭೆ​ಯಲ್ಲಿ ಸಚಿ​ವರು ಲೋಕಾ​ರ್ಪ​ಣೆ​ಗೊ​ಳಿ​ಸಿ​ದರು.

ಮುಂದುವರಿದ ಗೊಂದಲ:  ಸಮ​ಯದ ಅಭಾ​ವ​ದಿಂದ ಈಗಾ​ಗಲೇ ಜನ​ವ​ರಿ ತಿಂಗ​ಳಿಗೆ ಮುಂದೂ​ಡಿ​ರುವ ಸಾಹಿತ್ಯ ಸಮ್ಮೇ​ಳನಕ್ಕೆ ಇದೀಗ ಸ್ಥಳ ನಿಗದಿ ಕುರಿ​ತಂತೆ ಮತ್ತಷ್ಟುಗೊಂದ​ಲ​ಗಳು ಸೃಷ್ಟಿ​ಯಾ​ಗಿ​ವೆ. ಆರಂಭ​ದಲ್ಲಿ ಶತ​ಮಾ​ನದ ಇತಿ​ಹಾಸ ಹೊಂದಿ​ರುವ ಕರ್ನಾ​ಟಕ ಕಾಲೇಜು ಆವ​ರ​ಣ​ದಲ್ಲಿ ಸಮ್ಮೇ​ಳನ ನಡೆ​ಸುವ ಚರ್ಚೆ​ಯಾಗಿ ಅಂತಿ​ಮವೂ ಆಗಿತ್ತು. ನಂತ​ರ ​ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವ ದೃಷ್ಟಿಯಿಂದ ಕೃಷಿ ವಿವಿಯಲ್ಲೇ ಸಮ್ಮೇಳನ ನಡೆಸಲು ಚಿಂತನೆ ನಡೆಯಿತು.

ಇದಕ್ಕೆ ಪೂರ​ಕ​ವಾಗಿ 2 ದಿನ​ಗಳ ಹಿಂದಷ್ಟೇ ಜಿಲ್ಲಾ​ಧಿ​ಕಾರಿಗಳ ಹಾಗೂ ​ಸಾ​ಹಿ​ತಿ​ಗಳ ಸಭೆ​ಯಲ್ಲಿ ಈ ವಿಚಾರ ತೀರ್ಮಾ​ನವೂ ಆಗಿತ್ತು. ಆದರೆ, ಶುಕ್ರ​ವಾರ ಮತ್ತೆ ಈ ಕುರಿತ ಗೊಂದಲ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ಶನಿವಾರ ಈ ಕುರಿತು ಅಂತಿಮ ತೀರ್ಮಾನ ತೆಗೆದುಕೊಳ್ಳಲು ನಿರ್ಧರಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಹೊಳೆನರಸೀಪುರದ ಲಕ್ಷ್ಮಿನರಸಿಂಹ ಸ್ವಾಮಿ ರಥೋತ್ಸವ: ರಥದ ಅಲಂಕಾರದಲ್ಲಿ ರಾಜಕೀಯ:ಶ್ರೇಯಸ್ ಪಟೇಲ್ ವಿರುದ್ಧ JDS ಕಾರ್ಯಕರ್ತರ ಆಕ್ರೋಶ
ಇರಾನ್ ದಾಳಿಯ ಸಾವಿನ ದವಡೆಯಿಂದ ಪಾರಾಗಿ ಬೆಂಗಳೂರಿಗೆ ಬಂದಿಳಿದ 230 ಕನ್ನಡಿಗರು; ಬಾಂಬ್ ಬೀಳುವ ಅನುಭವ ಬಿಚ್ಚಿಟ್ಟರು!