FSSAI ಅಡಿಯಲ್ಲಿ ಅಮೆಜಾನ್‌, ಫ್ಲಿಪ್‌ಕಾರ್ಟ್‌ನಲ್ಲಿ ಈ ಹಣ್ಣು ಮಾರಿದ್ರೆ ಲೈಸನ್ಸ್ ರದ್ದು: ಆಹಾರ ಇಲಾಖೆ ಎಚ್ಚರಿಕೆ!

Kannadaprabha News   | Kannada Prabha
Published : Aug 25, 2026, 06:41 AM IST
Datturi Fruit Notice FSSAI Warns Amazon Flipkart Sellers of Licence Cancellation if Selling the Fruit

ಸಾರಾಂಶ

ಅಮೆಜಾನ್‌, ಫ್ಲಿಪ್‌ಕಾರ್ಟ್‌ ಸೇರಿದಂತೆ ಇ-ಕಾಮರ್ಸ್‌ ತಾಣಗಳಲ್ಲಿ ವಿಷಕಾರಿ ದತ್ತೂರಿ ಹಣ್ಣು ಮತ್ತು ಬೀಜಗಳನ್ನು ಮಾರಾಟ ಮಾಡದಂತೆ ಆಹಾರ ಸುರಕ್ಷತೆ ಮತ್ತು ಔಷಧ ನಿಯಂತ್ರಣ ಇಲಾಖೆ ನೋಟಿಸ್ ನೀಡಿದೆ. ಈ ಹಣ್ಣುಗಳು ಮಾನವನ ಆರೋಗ್ಯಕ್ಕೆ ಅತ್ಯಂತ ಅಪಾಯಕಾರಿ. ಮಾರಾಟ ಮಾಡಿದ್ರೆ ಲೈಸೆನ್ಸ್ ರದ್ದು ಎಚ್ಚರಿಕೆ.

ಬೆಂಗಳೂರು (ಆ.25): ಅಮೆಜಾನ್‌, ಫ್ಲಿಪ್‌ಕಾರ್ಟ್‌ ಮಿನಿಟ್ಸ್‌ ಸೇರಿದಂತೆ ಇ-ಕಾಮರ್ಸ್‌ ತಾಣಗಳಲ್ಲಿ ವಿಷಕಾರಿ ದತ್ತೂರಿ ಹಣ್ಣು ಹಾಗೂ ಬೀಜಗಳನ್ನು ಮಾರಾಟ ಮಾಡದಂತೆ ಆಹಾರ ಸುರಕ್ಷತೆ ಮತ್ತು ಔಷಧ ನಿಯಂತ್ರಣ ಇಲಾಖೆಯು ನೋಟಿಸ್‌ ನೀಡಿರುವುದಾಗಿ ತಿಳಿದು ಬಂದಿದೆ.

ದತ್ತೂರಿ ಹಣ್ಣು ವಿಷಕಾರಿ ಹಾಗೂ ಮಾನವನ ಆರೋಗ್ಯಕ್ಕೆ ಅಪಾಯಕಾರಿ. ಇಂತಹ ಹಣ್ಣುಗಳು ಆನ್ಲೈನ್‌ನಲ್ಲಿ ಮಾರಾಟವಾಗುತ್ತಿರುವ ಬಗ್ಗೆ ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ದತ್ತೂರಿ ಹಣ್ಣು ಮಾರಾಟ ಮಾಡದಂತೆ ಇ ಕಾಮರ್ಸ್‌ ಫ್ಲಾಟ್‌ಫಾರಂಗಳಿಗೆ ನಿರ್ಬಂಧ ವಿಧಿಸಿದೆ. ಒಂದು ವೇಳೆ ಸೂಚನೆ ಉಲ್ಲಂಘಿಸಿದರೆ ಆಹಾರ ಪರವಾನಗಿ ರದ್ದುಪಡಿಸುವುದಾಗಿ ಎಚ್ಚರಿಸಿದೆ ಎಂದು ಮೂಲಗಳು ತಿಳಿಸಿವೆ.

ಅತ್ಯಂತ ವಿಷಕಾರಿ ಹಣ್ಣು:

ದತ್ತೂರಿ ಗಿಡಗಳು ಸಾಮಾನ್ಯವಾಗಿ ಎಲ್ಲೆಂದರೆ ಬೆಳೆಯುತ್ತವೆ. ಗಿಡದ ಮೇಲೆ ಬಿಳಿ ಹೂ ಸುಂದರವಾಗಿ ಕಂಡರೂ ಅದರದ್ದು ಕೆಟ್ಟ ವಾಸನೆ. ಕೈಕಾಲಿಗೆ ಸೋಕಿದರೂ ವಾಸನೆ. ಇಂಥ ವಿಷಯುಕ್ತ ಸಸ್ಯದ ಹಣ್ಣು ಬೀಜಗಳು ಇತ್ತೀಚೆಗೆ ಇ-ಕಾಮರ್ಸ್‌ನಲ್ಲಿ ಮಾರಾಟ ಮಾಡಲಾಗುತ್ತಿದೆ. ಈ ಹಣ್ಣು ಎಷ್ಟು ವಿಷಯುಕ್ತ ಎಂದರೆ ಅಪ್ಪಿತಪ್ಪಿ ತಿಂದರೆ ಮನುಷ್ಯನ ಸಾವು ಸಂಭವಿಸಬಹುದು. ಹೀಗಾಗಿ ಇದರ ಬೀಜ ಹಣ್ಣು ಮಾರಾಟಕ್ಕೆ ಆಹಾರ ಸುರಕ್ಷತಾ ಇಲಾಖೆ ನಿಷೇಧ ಹೇರಿದೆ. ಯಾವುದೇ ಅಧಿಕೃತ ಅನುಮತಿ ಇಲ್ಲದೆ ಇ-ಕಾಮರ್ಸ್ ವೆಬ್‌ಸೈಟ್‌ಗಳಲ್ಲಿ ಇವುಗಳ ಮಾರಾಟ ಹೆಚ್ಚಾದ ಹಿನ್ನೆಲೆಯಲ್ಲಿ ಆಹಾರ ಸುರಕ್ಷತಾ ಇಲಾಖೆ ಈ ಕ್ರಮ ಕೈಗೊಂಡಿದೆ. ಹೀಗಾಗಿ ಸಾರ್ವಜನಿಕರು ಇಂತಹ ಅಪಾಯಕಾರಿ ಹಣ್ಣು ಅಥವಾ ಬೀಜಗಳನ್ನು ಆನ್‌ಲೈನ್‌ನಲ್ಲಿ ಖರೀದಿಸಬಾರದು, ಸೇವಿಸಬಾರದು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

BJP Protest: ವಾಲ್ಮೀಕಿ ನಿಗಮ ಹಗರಣ: ನಾಗೇಂದ್ರ ತಲೆದಂಡಕ್ಕೆ ಗದ್ದಲ, 3 ದಿನ ಮೊದಲೇ ಕಲಾಪ ಖತಂ! ನಿನ್ನೆ ಏನೇನಾಯ್ತು?
ಕೃಷಿಹೊಂಡದಲ್ಲಿ ಮುಳುಗಿ ಬಾಲಕ ಸಾವು: 1.2 ಲಕ್ಷಕ್ಕೆ ಕೇಸ್ ಕ್ಲೋಸ್‌ಗೆ ಒಪ್ಪಿದ ಪೋಷಕರು! ಮದ್ಯಪ್ರವೇಶಿಸಿದ ಹೈಕೋರ್ಟ್ ಮಹತ್ವದ ತೀರ್ಪು!