ಹಳ್ಳಿಯಿಂದ ದಿಲ್ಲಿಗೆ ಕರಾವಳಿ ಮಕ್ಕಳ ವಿಜ್ಞಾನ ಸ್ವಚ್ಛತಾ ದೀವಿಗೆ!

Published : Jan 12, 2019, 08:34 PM ISTUpdated : Jan 12, 2019, 08:54 PM IST
ಹಳ್ಳಿಯಿಂದ ದಿಲ್ಲಿಗೆ ಕರಾವಳಿ ಮಕ್ಕಳ ವಿಜ್ಞಾನ ಸ್ವಚ್ಛತಾ ದೀವಿಗೆ!

ಸಾರಾಂಶ

ರಾಷ್ಟ್ರ ಮಟ್ಟದಲ್ಲಿ ಕರುನಾಡಿನ ಮಕ್ಕಳ ಯಶೋಗಾಥೆ| ರಾಷ್ಟ್ರೀಯ ವಿಜ್ಞಾನ ನಾಟಕೋತ್ಸವದಲ್ಲಿ ಪ್ರಶಸ್ತಿ| ಕೇಂದ್ರ ಸರ್ಕಾರದ ಸಂಸ್ಕೃತಿ‌ ಸಚಿವಾಲಯ ಮತ್ತು ನ್ಯಾಶನಲ್ ಕೌನ್ಸಿಲ್ ಫಾರ್ ಸೈನ್ಸ್ ‌ಮ್ಯೂಸಿಯಂ‌| "ಕನಸ ಕಂಗಳು" ನಾಟಕವನ್ನು ಪ್ರಸ್ತುತ ಪಡಿಸಿದ ಉಪ್ಪಿನಂಗಡಿಯ ಇಂದ್ರಪ್ರಸ್ಥ ವಿದ್ಯಾಲಯದ ವಿದ್ಯಾರ್ಥಿಗಳು| ಸ್ವಚ್ಛತೆಯ ಸಂದೇಶ ನಾಟಕದ ತಿರುಳು| ಮಕ್ಕಳ ಅಭಿನಯಕ್ಕೆ ತಲೆಬಾಗಿದ ಪ್ರೇಕ್ಷಕರು.

ಉಪ್ಪಿನಂಗಡಿ(ಜ.12): ಕನ್ನಡ ಮತ್ತು ಕರ್ನಾಟಕ ಇವೆರಡು ದೇಶದ ಎಲ್ಲಾ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿರುತ್ತವೆ. ಈ ನೆಲದ ಗುಣವೇ ಅಂತದ್ದು. ಇಲ್ಲಿ ಹುಟ್ಟುವ ಪ್ರತಿಯೊಬ್ಬರೂ ದೇಶ ಮತ್ತು ವಿದೇಶವನ್ನು ತಮ್ಮ ವಿದ್ವತ್ತಿನಿಂದ ಸೆಳೆಯಬಲ್ಲ ಶಕ್ತಿ ಇರುವವರು.

ಇನ್ನು ಕನ್ನಡದ ಮಕ್ಕಳೆಂದರೆ ಕೇಳಬೇಕೆ?. ಕನ್ನಡಾಂಬೆಯ ಆರ್ಶೀವಾದದಿಂದ ಕರುಣಾಡಿನ ಕೀರ್ತಿ ಪತಾಕೆಯನ್ನು ದೇಶ, ವಿದೇಶಗಳಲ್ಲಿ ರಾರಾಜಿಸುವಂತೆ ಮಾಡುತ್ತವೆ ಈ ಪುಟಾಣಿಗಳು. 

ಅದರಂತೆ ಕೇಂದ್ರ ಸರ್ಕಾರದ ಸಂಸ್ಕೃತಿ‌ ಸಚಿವಾಲಯ ಮತ್ತು ನ್ಯಾಶನಲ್ ಕೌನ್ಸಿಲ್ ಫಾರ್ ಸೈನ್ಸ್ ‌ಮ್ಯೂಸಿಯಂ‌ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಆಯೋಜಿಸಿದ ರಾಷ್ಟ್ರೀಯ ವಿಜ್ಞಾನ ನಾಟಕೋತ್ಸವದಲ್ಲಿ ಕರುನಾಡಿನ ಮಕ್ಕಳು ಮಿಂಚಿದ್ದಾರೆ.

ಕರ್ನಾಟಕದ ದ.ಕ. ಜಿಲ್ಲೆಯ ಉಪ್ಪಿನಂಗಡಿಯ ಇಂದ್ರಪ್ರಸ್ಥ ವಿದ್ಯಾಲಯದ ವಿದ್ಯಾರ್ಥಿಗಳು "ಕನಸ ಕಂಗಳು" ನಾಟಕವನ್ನು ಪ್ರಸ್ತುತ ಪಡಿಸಿ ಪ್ರಶಸ್ತಿ ಪಡೆದಿದ್ದಾರೆ.

28 ನಿಮಿಷದ ಈ ನಾಟಕದಲ್ಲಿ ಎಂಟು ಮಕ್ಕಳು ಪಾತ್ರಧಾರಿಗಳಿದ್ದು, ಸ್ವಚ್ಛತೆಯ ಸಂದೇಶ ನಾಟಕದ ತಿರುಳಾಗಿತ್ತು. ಮನಸ್ಸಿನ, ದೇಹದ, ಪರಿಸರದ‌ ಕೊಳಕು ನಿವಾರಿಸಿ ಮನಸ್ಸು, ದೇಹ, ಪರಿಸರವನ್ನು ಶುದ್ಧಗೊಳಿಸುವ ಸಂದೇಶದ ಕಥಾವಸ್ತುವನ್ನು ಈ  ನಾಟಕ ನಿರೂಪಿಸುತ್ತದೆ.

ತಂಡದಲ್ಲಿ ತನ್ವೀ ಜಿ.ಕೆ, ಶಿವಾನಿ, ವರ್ಷಿಣಿ‌ ರೈ, ಶರಣ್ಯ ನಾಯಕ್, ಲಿಪಿ ಗೌಡ, ಅನ್ವಿತಾ, ಸಮರ್ಥ ಮೂಡಾಜೆ ಮತ್ತು ಅನುಪಮ್ ಎಂಬ ವಿದ್ಯಾರ್ಥಿಗಳಿದ್ದು, ಮಕ್ಕಳ ಅಭಿನಯ ಮತ್ತು ನಾಟಕದ ಸಂದೇಶವನ್ನು ಪ್ರೇಕ್ಷಕರು ಬಹುವಾಗಿ ಮೆಚ್ಚಿಕೊಂಡರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಏಷ್ಯಾನೆಟ್ ಕನ್ನಡಪ್ರಭ ಸುವರ್ಣ ನ್ಯೂಸ್ ವತಿಯಿಂದ ಮಡಿಕೇರಿಯಲ್ಲಿ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ
ಉತ್ತರ ಕನ್ನಡ: ಯುವಜನತೆಯಲ್ಲಿ ಹೆಚ್ಚುತ್ತಿದೆ ಹೆಚ್‌ಐವಿ ಸೋಂಕು, ಜೆನ್ ಝೀ ಕಿಡ್‌ ಗಳಲ್ಲೇ ಅತೀ ಹೆಚ್ಚು!