ಝಾಲಾಚ ಪಾಯಿಜೇ ಎಂದವರಿಗೆ ಶ್.....ಎಂದ ಪವಾರ್!

Published : Jan 12, 2019, 06:55 PM ISTUpdated : Jan 12, 2019, 06:56 PM IST
ಝಾಲಾಚ ಪಾಯಿಜೇ ಎಂದವರಿಗೆ ಶ್.....ಎಂದ ಪವಾರ್!

ಸಾರಾಂಶ

ಇದಕ್ಕಿಂತ ಮುಖಭಂಗ ಇನ್ನೇನು ಆಗ್ಬೇಕು?| ಶರದ್ ಪವಾರ್ ಮುಂದೆ ನಾಡ ವಿರೋಧಿ ಘೋಷಣೆ ಕೂಗಿದ ಎಂಇಎಸ್ ನಾಯಕರು| ಬೆಳಗಾವಿಗೆ ಬಂದಿದ್ದ ಎನ್ ಸಿಪಿ ಮುಖ್ಯಸ್ಥ ಶರದ ಪವಾರ್| ಕಡೋಲಿ ಗ್ರಾಮದಲ್ಲಿ ಶಿವಾಜಿ ಪುತ್ಥಳಿ ಅನಾವರಣ ಕಾರ್ಯಕ್ರಮ| ಘೋಷಣೆ ಕೂಗಲೆತ್ನಿಸಿದ ಎಂಇಎಸ್ ನಾಯಕರ ಮೇಲೆ ಪವಾರ್ ಗರಂ

ಬೆಳಗಾವಿ(ಜ.12): ಬೆಳಗಾವಿಯಲ್ಲಿ ಏರ್‌ಪೋರ್ಟ್ ನಲ್ಲಿ ಎಂಇಎಸ್ ನಾಯಕರು ಉದ್ಘಟತನ ಮೆರೆದಿದ್ದು, ಬೆಳಗಾವಿ ಏರ್‌ಪೋರ್ಟ್ ಗೆ ಬಂದಿಳಿದ ಎನ್‌ಸಿಪಿ ಮುಖ್ಯಸ್ಥ ಶರದ ಪವಾರ್ ಮುಂದೆ ನಾಡದ್ರೋಹಿ ಘೋಷಣೆ ಕೂಗಲು ಪ್ರಯತ್ನಿಸಿದ್ದಾರೆ.

ಆದರೆ ಉದ್ಘಟತನ ಪ್ರದರ್ಶಿಸಲು ಮುಂದಾದ ಎಂಇಎಸ್ ನಾಯಕರು ಶರದ ಪವಾರ್ ಅವರಿಂದಲೇ ಮುಖಭಂಗ ಅನುಭವಿಸಿದ್ದಾರೆ.

"

ಬೆಳಗಾವಿ ಸಮೀಪದ ಕಡೋಲಿ ಗ್ರಾಮದಲ್ಲಿ ಶಿವಾಜಿ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಂದಿರುವ ಶರದ ಪವಾರ್, ಏರ್‌ಪೋರ್ಟ್ ಗೆ ಬಂದಿಳಿಯುತ್ತಿದ್ದಂತೇ ನಾಡ ವಿರೋಧಿ ಘೋಷಣೆ ಕೂಗಿದ ಎಂಇಎಸ್ ನಾಯಕರು ಮುಂದಾಗಿದ್ದಾರೆ. ನಾಯಕರು ಘೋಷಣೆ ಕೂಗುತ್ತಿದ್ದಂತೆ ಗರಂ ಆದ ಶರದ ಪವಾರ್, ಘೋಷಣೆ ನಿಲ್ಲಿಸುವಂತೆ ಕೈ ಸನ್ನೆ ಮಾಡಿ ಸುಮ್ಮನಾಗಿಸಿದ್ದಾರೆ.

ಬೆಳಗಾವಿ, ನಿಪ್ಪಾಣಿ,ಕಾರವಾರ, ಬೀದರ, ಬಾಲ್ಕಿ ಸಂಯುಕ್ತ ಮಹಾರಾಷ್ಟ್ರ ಝಾಲಾಚ ಪಾಯಿಜೇ ಎಂದು ಘೋಷಣೆ ಕೂಗುತ್ತಿದ್ದ ಎಂ.ಇ.ಎಸ್ ನಾಯಕರು, ಪವಾರ್ ಸೂಚನೆ ಮೇರೆಗೆ ಸುಮ್ಮನಾದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಬೆಂಗಳೂರು ಏರ್ಪೋರ್ಟ್ ಹೊಸ ಪಿಕ್‌ಅಪ್‌, ಪಾರ್ಕಿಂಗ್ ರೂಲ್ಸ್; ಪ್ರಯಾಣಿಕರ ಸಮಸ್ಯೆ 30 ದಿನಗಳೊಳಗೆ ನಿವಾರಣೆ
ಚಿನ್ನದ ಬೆಲೆ ಲಕ್ಷ ದಾಟಿದ ಬೆನ್ನಲ್ಲೇ ಕರ್ನಾಟಕದ ಈ ಜಿಲ್ಲೆಗೆ ಜಾಕ್‌ಪಾಟ್‌, ಭಾರೀ ಪ್ರಮಾಣದ ಚಿನ್ನದ ನಿಕ್ಷೇಪ ಪತ್ತೆ!