
ಬೆಂಗಳೂರು( ನ. 18) ಐಪಿಎಸ್ ಆಫೀಸರ್ ಡಿ ರೂಪಾ ಸೋಶಿಯಲ್ ಮೀಡಿಯಾದಲ್ಲಿ ಟೀಕೆಗೆ ಗುರಿಯಾಗಿದ್ದಾರೆ. ಪಟಾಕಿ ಸಿಡಿಸುವುದು ಹಿಂದು ಸಂಪ್ರದಾಯ ಅಲ್ಲ. ಪಟಾಕಿ ಬಗ್ಗೆ ಪುರಾಣದಲ್ಲಿ ಉಲ್ಲೇಖ ಇಲ್ಲ ಎಂದು ಬರೆದುಕೊಂಡಿದ್ದು ಎಲ್ಲ ಕತೆಗಳಿಗೆ ಕಾರಣ..
ವೇದಗಳ ಕಾಲದಲ್ಲಿ ಪಟಾಕಿ ಉಲ್ಲೇಖ ಇರಲಿಲ್ಲ. ಯುರೋಪಿಯನ್ನರ ಕಾರಣಕ್ಕೆ ನಮ್ಮ ದೇಶಕ್ಕೆ ಪಟಾಕಿ ಆಗಮನ ಆಯಿತು ಎಂದು ರೂಪಾ ಬರೆದಿದ್ದರು.
ಬೆಂಗಳೂರು ರೈಲ್ವೆ ವಿಭಾಗದ ಐಜಿಪಿಯಾಗಿರುವ ರೂಪಾ ಹೇಳಿಕೆಗೆ ವಿರೋಧದ ಅಭಿಪ್ರಾಯಗಳು ಬಂದಿವೆ. ದೀಪಾವಳಿಯನ್ನು ಹೇಗೆ ಆಚರಣೆ ಮಾಡಬೇಕು ಎಂಬುದನ್ನು ನೀವು ನಮಗೆ ಹೇಳಿಕೊಡಬೇಕಿಲ್ಲ ಎಂದು ರೂಪಾಗೆ ಅನೇಕರು ಉತ್ತರ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ