ರಾಜ್ಯದಲ್ಲಿ 3ನೇ ಬಾರಿ 500ಕ್ಕೂ ಹೆಚ್ಚು ಸಾವು : ಹೆಚ್ಚಾದ ಆತಂಕ

Kannadaprabha News   | Asianet News
Published : May 13, 2021, 08:09 AM ISTUpdated : May 13, 2021, 08:39 AM IST
ರಾಜ್ಯದಲ್ಲಿ 3ನೇ ಬಾರಿ 500ಕ್ಕೂ ಹೆಚ್ಚು ಸಾವು : ಹೆಚ್ಚಾದ ಆತಂಕ

ಸಾರಾಂಶ

 ರಾಜ್ಯದಲ್ಲಿ ಮೂರನೇ ಬಾರಿಗೆ ಒಂದೇ ದಿನದಲ್ಲಿ 500ಕ್ಕಿಂತ ಹೆಚ್ಚು ಸಾವು ವರದಿ ಒಂದೇ ದಿನದಲ್ಲಿ 39,998 ಮಂದಿಯಲ್ಲಿ ಸೋಂಕು ದೃಢ  ಆರನೇ ದಿನ ಶೇ.1 ಮೀರಿದ ಮರಣ ದರ ದಾಖಲು

ಬೆಂಗಳೂರು (ಮೇ.13): ರಾಜ್ಯದಲ್ಲಿ ಬುಧವಾರ 517 ಮಂದಿ ಕೋವಿಡ್‌ನಿಂದ ಮೃತಪಟ್ಟಿದ್ದು, 39,998 ಮಂದಿಯಲ್ಲಿ ಸೋಂಕು ದೃಢ ಪಟ್ಟಿದೆ. ರಾಜ್ಯದಲ್ಲಿ ಮೂರನೇ ಬಾರಿಗೆ ಒಂದೇ ದಿನದಲ್ಲಿ 500ಕ್ಕಿಂತ ಹೆಚ್ಚು ಸಾವು ವರದಿಯಾಗಿದೆ. ಈ ಹಿಂದೆ ಮೇ 7ರಂದು 592, ಮೇ 10ರಂದು 596 ಮಂದಿ ಸಾವನ್ನಪ್ಪಿದ್ದರು. ಈ ಮಧ್ಯೆ ಶೇ. 1.29ರ ಮರಣ ದರ ದಾಖಲಾಗಿದ್ದು ಸತತ ಆರನೇ ದಿನ ಶೇ.1 ಮೀರಿದ ಮರಣ ದರ ದಾಖಲಾಗಿದೆ. ಬೆಂಗಳೂರು ನಗರದಲ್ಲಿ 275 ಮಂದಿ ಮರಣವನ್ನಪ್ಪಿದ್ದಾರೆ. ರಾಜ್ಯದಲ್ಲಿ ಈವರೆಗೆ 20,368 ಮಂದಿ ಅಸುನೀಗಿದ್ದಾರೆ.

ಒಂದು ಸಾವಿರ ‘ಆಶಾ’ಗಳಿಗೆ ಸೋಂಕು, ಐವರ ಸಾವು: ಸಂಕಷ್ಟದಲ್ಲಿ ಕೊರೋನಾ ವಾರಿಯರ್ಸ್‌ ...

ಐದು ದಿನಗಳ ಬಳಿಕ ಪಾಸಿಟಿವಿಟಿ ದರ ಶೇ.30ಕ್ಕಿಂತ ಕೆಳಗಿಳಿದಿದೆ. ಬುಧವಾರ ಶೇ.29.67 ಪಾಸಿಟಿವಿಟಿ ದರ ಇದೆ. 1.34 ಲಕ್ಷ ಕೋವಿಡ್‌ ಪರೀಕ್ಷೆ ನಡೆದಿದ್ದು ಕಳೆದೆರಡು ದಿನಗಳಿಗಿಂತ ಪರೀಕ್ಷೆ ಪ್ರಮಾಣದಲ್ಲಿ ತುಸು ಏರಿಕೆಯಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 5.92 ಲಕ್ಷಕ್ಕೆ ಏರಿದೆ. 34,752 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಗಿದ್ದು, ಈವರೆಗೆ ಒಟ್ಟು 14.40 ಲಕ್ಷ ಮಂದಿ ಗುಣಮುಖರಾಗಿದ್ದಾರೆ.

'ಬೆಂಗಳೂರಲ್ಲಿ ಸೋಂಕು 2-3 ವಾರದಲ್ಲಿ ಇಳಿಕೆ, ಇತರೆಡೆ ತೀವ್ರ ಏರಿಕೆ' ..

ಸಾವಿನ ವಿವರ :  ಶಿವಮೊಗ್ಗದಲ್ಲಿ 26, ಕಲಬುರಗಿ 23, ಹಾಸನ 19, ಬಳ್ಳಾರಿ 17, ತುಮಕೂರು 14, ಬೆಂಗಳೂರು ಗ್ರಾಮಾಂತರ, ಕೊಪ್ಪಳ ತಲಾ 12, ಮಂಡ್ಯ, ಕೊಡಗು ತಲಾ 10, ಮೈಸೂರು 9, ಚಾಮರಾಜನಗರ, ಧಾರವಾಡ, ಉತ್ತರ ಕನ್ನಡ, ವಿಜಯಪುರ ತಲಾ 8, ಚಿಕ್ಕಬಳ್ಳಾಪುರ, ಉಡುಪಿ ತಲಾ 6, ರಾಮನಗರ 5, ಗದಗ 4, ರಾಯಚೂರು 3, ಕೋಲಾರ, ದಕ್ಷಿಣ ಕನ್ನಡ, ಚಿತ್ರದುರ್ಗ, ಚಿಕ್ಕಮಗಳೂರು, ಬೆಳಗಾವಿ, ಬಾಗಲಕೋಟೆ ತಲಾ 2 ಮತ್ತು ದಾವಣಗೆರೆಯಲ್ಲಿ ಒಬ್ಬರು ಮೃತರಾಗಿದ್ದಾರೆ.

ತುಮಕೂರು 2,360, ಬಳ್ಳಾರಿ 1,823, ಮೈಸೂರು 1,773, ಹಾಸನ 1,572, ಮಂಡ್ಯ 1,223, ಬೆಂಗಳೂರು ಗ್ರಾಮಾಂತರ 1,138, ಶಿವಮೊಗ್ಗ 1,125, ದಕ್ಷಿಣ ಕನ್ನಡ 1,077 ಜಿಲ್ಲೆಗಳಲ್ಲಿ ಸಾವಿರ ಮೀರಿ ಪ್ರಕರಣ ದಾಖಲಾಗಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಡ್ರಗ್‌ ಪೆಡ್ಲರ್‌ಗಳಿಗೆ ಬೆಂಗಳೂರೇ ದೊಡ್ಡ ಟಾರ್ಗೆಟ್‌: ಚಾಕೋಲೆಟ್‌, ಕಾಫಿ ಪುಡಿ ಹೆಸರಲ್ಲಿ ಡ್ರಗ್ಸ್‌ ಸಾಗಾಟ
ಜ.8, 9ರವರೆಗೆ ಕಾಯಿರಿ : ಡಿಕೆ ಬಣದ ‘ತಿರುಗೇಟು’!