
ಮಲ್ಲಿಕಾರ್ಜುನ ಹೊಸಮನಿ
ಬಾಗಲಕೋಟೆ(ಜ.31): ಇಲ್ಲಿನ ಜಿಪಂ ಸಾಮಾನ್ಯ ಸಭೆಯಲ್ಲಿ ಲಂಚದ ಆಡಿಯೋ ರಿಲೀಸ್ ಆಗಿದ್ದು, ಜಿಪಂ ಸದಸ್ಯ ಪುಂಡಲೀಕ ಪಾಲಬಾವಿ, ಆಯುಷ್ ಇಲಾಖೆಯಲ್ಲಿ ನಡೆದ ಲಂಚಾವತಾರ ಬಯಲು ಮಾಡಿದ್ದಾರೆ.
ಡಿ ದಜೆ೯ ನೌಕರರ ಸಂಬಳ ನೀಡಲು ಶಿವಾನಂದ ಎಂಬ ಜಿಲ್ಲಾ ಅಯುಷ್ ಅಧಿಕಾರಿ ಲಂಚ ಕೇಳಿದ ಆಡಿಯೋ ರಿಲೀಸ್ ಮಾಡಲಾಯಿತು.
ಕೆಳಗಿನ ಹಂತದ ಸಿಬ್ಬಂದಿ ಕಳಿಸಿ ಸಾಮಾನ್ಯ ಸಭೆಗೆ ಗೈರು ಉಳಿದುಕೊಂಡಿದ್ದ ಅಧಿಕಾರಿ ಶಿವಾನಂದ ವಿರುದ್ದ ಸೂಕ್ತ ಕ್ರಮಕ್ಕೆ ಜಿಪಂ ಸದಸ್ಯರು ಪಟ್ಟು ಹಿಡಿದರು.
"
ಈ ವೇಳೆ ಸಭೆಗೆ ಅಧಿಕಾರಿ ಕರೆಯಿಸುವಂತೆ ಜಿಪಂ ಅದ್ಯಕ್ಷೆ ವೀಣಾ ಕಾಶಪ್ಪನವರ್ ಮತ್ತು ಮತ್ತು ಸಿಇಓ ಗಂಗೂಬಾಯಿ ಮಾನಕರ್ ಸೂಚನೆ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ