6ನೇ ದಿನಕ್ಕೆ ಕಾಲಿಟ್ಟ ಪಂಚಮಸಾಲಿ ಧರಣಿ: ರಾಜ್ಯ ಸರ್ಕಾರದ ವಿರುದ್ಧ ಮೋದಿಯವರಿಗೆ ಪತ್ರದ ಮೂಲಕ ದೂರು

Published : Jan 19, 2023, 12:39 PM IST
6ನೇ ದಿನಕ್ಕೆ ಕಾಲಿಟ್ಟ ಪಂಚಮಸಾಲಿ ಧರಣಿ: ರಾಜ್ಯ ಸರ್ಕಾರದ ವಿರುದ್ಧ ಮೋದಿಯವರಿಗೆ ಪತ್ರದ ಮೂಲಕ ದೂರು

ಸಾರಾಂಶ

ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ಮತ್ತೆ ಹೋರಾಟ ಮುಂದುವರೆದಿದ್ದು, ಬಸವಜಯ ಮೃತೃಂಜಯ ಸ್ವಾಮೀಜಿ ನೇತೃತ್ವದ ಧರಣಿ 6ನೇ ದಿನಕ್ಕೆ ಕಾಲಿಟ್ಟಿದೆ.   

ಹಾವೇರಿ (ಜ.19): ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ಮತ್ತೆ ಹೋರಾಟ ಮುಂದುವರೆದಿದ್ದು, ಬಸವಜಯ ಮೃತೃಂಜಯ ಸ್ವಾಮೀಜಿ ನೇತೃತ್ವದ ಧರಣಿ 6ನೇ ದಿನಕ್ಕೆ ಕಾಲಿಟ್ಟಿದೆ. ರಾಜ್ಯ ಸರ್ಕಾರದ ವಿರುದ್ಧ ಮೋದಿಯವರಿಗೆ ಪತ್ರದ ಮೂಲಕ ಸ್ವಾಮೀಜಿ ದೂರು ಕೊಟ್ಟಿದ್ದಾರೆ. ಜ.16ನೇ ತಾರೀಖು ಮೋದಿ, ಅಮಿತ್ ಶಾ, ನಡ್ಡಾರಿಗೆ ಲಿಖಿತ ಪತ್ರವನ್ನು ಸ್ವಾಮೀಜಿ ಬರೆದಿದ್ದಾರೆ. ರಾಜ್ಯ ಸರ್ಕಾರ ಸತತವಾಗಿ ನಮಗೆ ಮೋಸ ಮಾಡಿದ್ದಾರೆ. ನಮಗೆ ನರೇಂದ್ರ ಮೋದಿಯವರ ಬಗ್ಗೆ ನಂಬಿಕೆಯಿದೆ. ಪ್ರಧಾನಿಗಳಿಗೆ ಪತ್ರ ಬರೆದು ನಮ್ಮ ಬೇಡಿಕೆಯನ್ನ ತಿಳಿಸಿದ್ದೇವೆ. ಜೊತೆಗೆ 10 ಪ್ರಮುಖ ವಿಚಾರಗಳನ್ನ ಜಯಮೃತ್ಯುಂಜಯ ಸ್ವಾಮೀಜಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

1. ಲಿಂಗಾಯತ ಪಂಚಮಸಾಲಿ ಸಮಾಜ 1.30 ಲಕ್ಷ ಜನರಿರುವ ಸಮುದಾಯ 2a ಮೀಸಲಾತಿಗಾಗಿ ನಾವು ಎರಡು ವರ್ಷದಿಂದ ಹೋರಾಟ ಮಾಡುತ್ತಾ ಬಂದಿದ್ದೇವೆ. ಅದ್ರೆ ನಮ್ಮ ಹೋರಾಟಕ್ಕೆ ಬೆಲೆ ಸಿಕ್ಕಿಲ್ಲ. ಹಲವು ಬಾರಿ ನಮಗೆ ರಾಜ್ಯ ಸರ್ಕಾರ ಮೋಸ ಮಾಡಿದೆ.

ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಸಿಗಲಿ: ವಚನಾನಂದ ಸ್ವಾಮೀಜಿ

2. ಯಡಿಯೂರಪ್ಪರಿಗೆ ನಮ್ಮ ಸಮುದಾಯ ಬೆಂಬಲ ನೀಡಿದ್ವಿ, ನಂತರ ಬೊಮ್ಮಾಯಿಯವರಿಗೆ ಬೆಂಬಲ ನೀಡಿದ್ವಿ.

3. ಮುಂಬರುವ ವಿಧಾನಸಭಾ ಚುನಾವಣೆ ಮೇಲೆ ಪ್ರಭಾವವಾಗುತ್ತೆ.

4. ನಾವು ಕಳೆದ ಬಾರಿ ಬೆಜೆಪಿಗೆ ಬೆಂಬಲ ನೀಡಿದ್ವಿ. ಅದ್ರೆ ಈ ಬಾರಿಯ ಚುನಾವಣೆಯಲ್ಲಿ ನಾವು ಯಾರಿಗೆ ಬೆಂಬಲ‌ ನೀಡಬೇಕು ಎಂದು ನಿರ್ಧಾರ ಮಾಡ್ತೀವಿ.

5. ನೀವು ಮೀಸಲಾತಿ ಕಲ್ಪಿಸಿಲ್ಲ ಅಂದ್ರೆ ನಮ್ಮ ಹೋರಾಟ ತೀವ್ರವಾಗುತ್ತೆ.

6. ನಮ್ಮ ಸಮುದಾಯ ರಾಜ್ಯ ಸರ್ಕಾರದ ಮೇಲೆ ವಿಶ್ವಾಸ ಕಳೆದುಕೊಂಡಿದ್ದೇವೆ.

7. ಪ್ರಧಾನಿಗಳಾದ ನಿಮ್ಮ ಮೇಲೆ ನಮ್ಮ ಸಮುದಾಯ ನಂಬಿಕೆಯಿಟ್ಟಿದೆ.

8. ಈ ಪತ್ರದ ಮೂಲಕ ನಾವು‌ ನಮ್ಮ ಸಮುದಾಯದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದೇವೆ. ನೀವು ಕೂಡಲೇ ಇದಕ್ಕೆ ಸ್ಪಂದಿಸಬೇಕು.

9. ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುವ ಈ ಮೀಸಲಾತಿ ಬರುತ್ತೆ. ದಯವಿಟ್ಟು ಮುಖ್ಯಮಂತ್ರಿಗಳಿಗೆ ಪ್ರಧಾನಿಗಳಾದ ನೀವು ಸೂಚನೆ ನೀಡಿ.

10. 224 ಕ್ಷೇತ್ರಕ್ಕೆ ಹೋಗಿ ಜನರ ಬಳಿಗೆ ಹೋಗಿ ಯಾರಿಗೆ ಬೆಂಬಲ ಕೊಡಬೇಕು ಎಂದು ಚರ್ಚೆ ಮಾಡ್ತೀವಿ. 

ಮೀಸಲಾತಿ ನೀಡದಿದ್ದರೆ ಸಿಎಂ ನಿವಾಸ ಮುಂಭಾಗ ಧರಣಿ: ಜಯಮೃತ್ಯುಂಜಯ ಸ್ವಾಮೀಜಿ

ನಮ್ಮ ಸಮುದಾಯವನ್ನ ಕಡೆಗಣಿಸಿದ್ರೇ ನಾವು‌ ನಿಮ್ಮನ್ನ ಚುನಾವಣೆಯಲ್ಲಿ ಕಡೆಗಣಿಸುತ್ತೇವೆ. ಚುನಾವಣೆಯಲ್ಲಿ ನಮ್ಮ ಸಮುದಾಯ ನಿಮಗೆ ಉತ್ತರ ನೀಡುತ್ತೆ. ಕೂಡಲೇ ನಮ್ಮ ಬೇಡಿಕೆ ಈಡೇರಿಸಿ, ಇಲ್ಲ ನಮ್ಮ ದಾರಿ ನಾವು‌ ನೋಡಿಕೊಳ್ಳುತ್ತೇವೆ ಎಂದು ಪತ್ರದ ಮೂಲಕ ಸ್ವಾಮೀಜಿಗಳು ಎಚ್ಚರಿಕೆ ಕೊಟ್ಟಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಸೇರಿಯನ್‌ ಹೆರಿಗೆ ಹೆಚ್ಚಳ ಏಕೆ ಎಂದು ತಿಳಿಯಲು ಆಡಿಟ್‌: ಸಚಿವ ದಿನೇಶ್‌ ಗುಂಡೂರಾವ್
ಪ್ರಧಾನಿಗೆ ಪತ್ರ ಬರೆಯುವುದರಲ್ಲಿ ಸಿದ್ದರಾಮಯ್ಯ, ಡಿಕೆಶಿ ನಿಸ್ಸೀಮರು: ಬಿ.ವೈ.ವಿಜಯೇಂದ್ರ