
ಬೆಂಗಳೂರು (ಮಾ.17): ಬಿಜೆಪಿ ವಿರುದ್ಧ ಎಲೆಕ್ಟ್ರೋಲ್ ಬಾಂಡ್ ಆರೋಪ ಕೇಳಿ ಬಂದಿದೆ. ಕರ್ನಾಟಕದ ಎಲ್ಲಾ ಬಿಜೆಪಿ ಅಭ್ಯರ್ಥಿಗಳು ಹಾಗೂ ನಿರ್ಮಲಾ ಸೀತಾರಾಮನ್ ಎಲೆಕ್ಟ್ರೋಲ್ ಬಾಂಡ್ ಬಗ್ಗೆ ಉತ್ತರಿಸಬೇಕು ಎಂದು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ ಆಗ್ರಹಿಸಿದರು.
ಇಂದು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 20 ಸಾವಿರಕ್ಕಿಂತ ಹೆಚ್ಚು ದೇಣಿಗೆ ಕೊಟ್ಟವರ ವಿವರ ಬಹಿರಂಗ ಮಾಡ್ಬೇಕಿತ್ತು. ಬಿಜೆಪಿ ಚುನಾವಣಾ ಬಾಂಡ್ ನಲ್ಲಿ ಸಾಕಷ್ಟು ಹಗರಣ ಆಗಿದೆ. ಒಬ್ಬ ಕಾಮನ್ ಮ್ಯಾನ್ ತೆರಿಗೆ ವಿಳಂಬ ಮಾಡಿದ್ರೆ ಫೈನ್ ಹಾಕ್ತಾರೆ. ಕೋಟಿ ಕೋಟಿ ದೇಣಿಗೆ ನೀಡಿದವರ ಬಗ್ಗೆ ವಿವರ ನೀಡಿಲ್ಲ. ತೆರಿಗೆ ಕಟ್ಟಿಲ್ಲ ಎಂದು ಆರೋಪಿಸಿದರು.
Lok sabha election 2024: ಬಿಸಲುನಾಡು ಕಲಬುರಗಿ ಆಯ್ತು, ನಾಳೆ ಮಲೆನಾಡಿಗೆ ಪ್ರಧಾನಿ ಮೋದಿ!
ಬಿಜೆಪಿ ಸರ್ಕಾರ ಬಂದ ನಂತರ 4 ಆಕ್ಟ್ ತರ್ತಾರೆ. 10 ದಿನ ಮಾತ್ರ ಎಲೆಕ್ಟ್ರೋಲ್ ಬಾಂಡ್ ಒಪನ್ ಇರುತ್ತದೆ. ಎಲೆಕ್ಟ್ರೋಲ್ ಬಾಂಡ್ ಮೂಲಕ ಪಂಡ್ ಕೊಟ್ರೆ ಸುಪ್ರೀಂ ಕೋರ್ಟ್ ಸೇರಿದಂತೆ ಯಾರಿಗೂ ಹೇಳಲ್ಲ ಎಂದು ಬಿಜೆಪಿ ಹೇಳುತ್ತದೆ. ಆದರೆ ಚುನಾವಣಾ ಬಾಂಡ್ಗಳ ಬಗ್ಗೆ ಮಾ.17ಕ್ಕೆ ಸೂಕ್ತ ಉತ್ತರ ನೀಡುವಂತೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. ಬಿಜೆಪಿ ಪಕ್ಷಕ್ಕೆ 6 ಸಾವಿರ ಕೋಟಿ ದೇಣಿಗೆ ನೀಡಿದವರ ವಿವರ ನೀಡುವಂತೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. ಸ್ಯಾಂಟಿಯಾನೋ ಬಿಜೆಪಿಗೆ ದೇಣಿಗೆ ನೀಡಿದ್ದಾನೆ. ಈ ಬಗ್ಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ರಾಜ್ಯದ ಸಂಸದ ಅಭ್ಯರ್ಥಿಗಳು ಉತ್ತರ ನೀಡಬೇಕು. ಬಿಜೆಪಿ ನಾಯಕರಿಗೆ ಆಗ್ರಹಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ