ಭಾರತ್‌ ಜೋಡೋ ಯಾತ್ರೆ ವೇಳೆ ಡಿಕೆಶಿಗೆ ಸಿಬಿಐ ಶಾಕ್‌..!

Published : Sep 29, 2022, 05:38 AM ISTUpdated : Sep 29, 2022, 12:15 PM IST
ಭಾರತ್‌ ಜೋಡೋ ಯಾತ್ರೆ ವೇಳೆ ಡಿಕೆಶಿಗೆ ಸಿಬಿಐ ಶಾಕ್‌..!

ಸಾರಾಂಶ

ಆದಾಯ ಮೀರಿದ ಸಂಪತ್ತಿನ ಪ್ರಕರಣಕ್ಕೆ ಸಂಬಂಧಿಸಿ ಇತ್ತೀಚೆಗಷ್ಟೇ ಇ.ಡಿ ವಿಚಾರಣೆ ಎದುರಿಸಿ ಬಂದಿದ್ದ ಡಿ.ಕೆ.ಶಿವಕುಮಾರ್‌ ನಿವಾ​ಸದ ಮೇಲೆ ಬುಧವಾರ ದಿಢೀರ್‌ ದಾಳಿ ನಡೆಸಿ, ಆಸ್ತಿ ವಿವರಗಳನ್ನು ಕಲೆ ಹಾಕಿದ ಸಿ​ಬಿ​ಐ

ರಾಮನಗರ(ಸೆ.29):  ಕಾಂಗ್ರೆಸ್‌ ವರಿಷ್ಠ ರಾಹುಲ್‌ ಗಾಂಧಿ ನೇತೃ​ತ್ವ​ದ ಭಾರತ್‌ ಜೋಡೋ ಯಾತ್ರೆ ಕರ್ನಾ​ಟಕ ಪ್ರವೇ​ಶಿ​ಸುತ್ತಿರುವ ಹೊತ್ತಿನಲ್ಲೇ ಕೆಪಿ​ಸಿಸಿ ಅಧ್ಯಕ್ಷ ಡಿ.ಕೆ.​ಶಿ​ವ​ಕು​ಮಾರ್‌ ಅವರಿಗೆ ಕೇಂದ್ರ ತನಿಖಾ ದಳ (ಸಿಬಿಐ) ಶಾಕ್‌ ನೀಡಿದೆ. ಆದಾಯ ಮೀರಿದ ಸಂಪತ್ತಿನ ಪ್ರಕರಣಕ್ಕೆ ಸಂಬಂಧಿಸಿ ಇತ್ತೀಚೆಗಷ್ಟೇ ಜಾರಿ ನಿರ್ದೇಶನಾಲಯ(ಇ.ಡಿ.)ದ ವಿಚಾರಣೆ ಎದುರಿಸಿ ಬಂದಿದ್ದ ಡಿ.ಕೆ.ಶಿವಕುಮಾರ್‌ ಅವರ ನಿವಾ​ಸದ ಮೇಲೆ ಸಿ​ಬಿ​ಐ ಅಧಿಕಾರಿಗಳು ಬುಧವಾರ ದಿಢೀರ್‌ ದಾಳಿ ನಡೆಸಿ, ಆಸ್ತಿ ವಿವರಗಳನ್ನು ಕಲೆ ಹಾಕಿದ್ದಾರೆ.

ಕನ​ಕ​ಪು​ರಕ್ಕೆ ಬೆಳಗ್ಗೆ 10 ರಿಂದ 11 ಗಂಟೆ ವೇಳೆಗೆ ಆಗ​ಮಿ​ಸಿದ ಸಿಬಿ​ಐನ ಏಳರಿಂದ ಎಂಟು ಮಂದಿ ಇದ್ದ ಅಧಿ​ಕಾ​ರಿ​ಗಳ ತಂಡ ತಹ​ಸೀ​ಲ್ದಾರ್‌ ವಿಶ್ವ​ನಾಥ್‌ ಅವ​ರೊಂದಿಗೆ ಡಿ.ಕೆ.​ಶಿ​ವ​ಕು​ಮಾರ್‌ ಅವ​ರಿಗೆ ಸೇರಿದ ಮನೆ, ಜಮೀನು ಮತ್ತಿ​ತ​ರ​ರ ಸ್ಥಳ​ಗ​ಳಿಗೆ ಭೇಟಿ ನೀಡಿ ದಾಖ​ಲೆ​ಗ​ಳನ್ನು ಪರಿ​ಶೀ​ಲನೆ ನಡೆಸಿ ವಶಕ್ಕೆ ಪಡೆ​ದು​ಕೊಂಡಿ​ದೆ.

Operation Megha Chakra: 20 ರಾಜ್ಯಗಳ 56 ಸ್ಥಳಗಳ ಚೈಲ್ಡ್ ಪೋರ್ನೊಗ್ರಫಿ ದಂಧೆಯ ಮೇಲೆ ಸಿಬಿಐ ದಾಳಿ!

ಡಿ.ಕೆ.​ಶಿ​ವ​ಕು​ಮಾರ್‌ ಅವ​ರಿಗೆ ಸೇರಿದ ಕನ​ಕ​ಪುರ ನಗರದ ಮೈಸೂರು ರಸ್ತೆ​ಯ​ಲ್ಲಿ​ ಹೆಂಚಿನ ಫ್ಯಾಕ್ಟರಿ ಬಳಿ​ಯಿರುವ ಮನೆ, ದೊಡ್ಡಾ​ಲ​ಹಳ್ಳಿಯ ಹಳೇ ಮನೆ ಹಾಗೂ ಸಂತೆ ಕೋಡಿ​ಹಳ್ಳಿಯಲ್ಲಿ​ ಫಾಮ್‌ರ್‍ ಹೌಸ್‌ ಹಾಗೂ ಜಮೀನು ಮತ್ತಿ​ತರ ಸ್ಥಳ​ಗ​ಳಿಗೆ ಸಿಬಿಐ ​ಅ​ಧಿ​ಕಾ​ರಿ​ಗ​ಳು ಭೇಟಿ ನೀಡಿದರು.

ದೆಹಲಿ ತಲುಪಿದ ಸಿಎಂ ಗೆಹ್ಲೋಟ್‌, ಇತ್ತ ಸಹೋದರನ ಮನೆ ಮೇಲೆ ಸಿಬಿಐ ದಾಳಿ!

ಡಿ.ಕೆ.ಶಿವಕುಮಾರ್‌ ನಿವಾಸಗಳಲ್ಲಿ ದಾಖಲೆಗಳ ಪರಿಶೀಲನೆ ಮಾತ್ರವಲ್ಲದೆ, ಜಿಲ್ಲೆ​ಯ ಬೇರೆಡೆ ಡಿ.ಕೆ.ಶಿವಕುಮಾರ್‌, ಅವರ ಕುಟುಂಬಸ್ಥರು ಮತ್ತು ಸಂಬಂಧಿಕರ ಹೆಸ​ರಿ​ನಲ್ಲಿರುವ ಭೂ ದಾಖಲೆಗಳ ಬಗ್ಗೆಯೂ ತಹಸೀಲ್ದಾರ್‌ ಅವರಿಂದ ಮಾಹಿತಿ ಪಡೆ​ದು​ಕೊಂಡರು ಎನ್ನಲಾಗಿದೆæ. ಪೊಲೀ​ಸರು ಸೇರಿ​ ಯಾರಿಗೂ ಮಾಹಿತಿ ನೀಡದೆ ದಾಳಿ ನಡೆ​ಸಿ​ರುವ ಸಿಬಿಐ ಅಧಿ​ಕಾ​ರಿ​ಗಳು ಮಧ್ಯಾಹ್ನ 3.30ರವ​ರೆಗೂ ದಾಖ​ಲೆ​ಗಳ ಪರಿಶೀಲನೆ ನಡೆಸಿದ್ದಲ್ಲದೆ, ಗೌಪ್ಯವಾಗಿಯೇ ಮಾಹಿತಿ ಕಲೆ ಹಾಕಿ ವಾಪ​ಸಾದರು.

ಈಗಾಗಲೇ ಅಕ್ರಮ ಹಣ ವರ್ಗಾವಣೆ, ಆಸ್ತಿ ಗಳಿಕೆ ಪ್ರಕರಣಗಳಲ್ಲಿ ಡಿ.ಕೆ.ಶಿವಕುಮಾರ್‌ ಅವರು ಆರೋಪಿಯಾಗಿದ್ದು, ಸದ್ಯ ಜಾಮೀನು ಮೇಲಿದ್ದಾರೆ.

ಶಾಕ್‌ ಮೇಲೆ ಶಾಕ್‌

- ಇತ್ತೀಚೆಗಷ್ಟೇ ಇ.ಡಿ. ವಿಚಾರಣೆಗೆ ಹಾಜರಾಗಿ ಬಂದಿದ್ದ ಡಿಕೆಶಿ
- ಈ ಹಿಂದೆಯೂ ತೆರಿಗೆ, ಸಿಬಿಐ, ಇ.ಡಿ. ದಾಳಿ ಎದುರಿಸಿದ್ದರು
- ತಹಶೀಲ್ದಾರ್‌ ಜೊತೆ ಬಂದು ಆಸ್ತಿ ದಾಖಲೆ ಸಂಗ್ರಹಿಸಿದ ಸಿಬಿಐ
- ಕನಕಪುರದ ಮನೆಗೆ ಬೆಳಿಗ್ಗೆ 10 ಗಂಟೆಗೆ 7-8 ಅಧಿಕಾರಿಗಳ ದಾಳಿ
- ನಂತರ ಡಿಕೆಶಿಯ ಇತರ ಮನೆ, ಫಾಮ್‌ರ್‍ಹೌಸ್‌, ಜಮೀನಿಗೆ ಭೇಟಿ
- ಸಂಬಂಧಿಕರ ಹೆಸರಿನಲ್ಲಿರುವ ಭೂದಾಖಲೆ ಬಗ್ಗೆಯೂ ವಿವರ ಸಂಗ್ರಹ
- ಪೊಲೀಸರಿಗೂ ಮಾಹಿತಿ ನೀಡದೆ ದಾಳಿ ನಡೆಸಿದ ಸಿಬಿಐ ಅಧಿಕಾರಿಗಳು
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Breaking ಮಂಡ್ಯ ಬಸ್ ಅಪಘಾತದಲ್ಲಿ 23 ಪ್ರಯಾಣಿಕರಿಗೆ ಗಾಯ, ಇಬ್ಬರು ಗಂಭೀರ
ಸಿಎಂ, ಡಿಸಿಎಂ ನಡುವೆ ಬೂದಿ ಮುಚ್ಚಿದ ಕೆಂಡದ ಪರಿಸ್ಥಿತಿ: ಸಂಸದ ಜಗದೀಶ್ ಶೆಟ್ಟರ್