ಸ್ವಾಮೀಜಿ ಮಾತಿಗೆ ಸಿಎಂ ಸಹಮತ: ಹಾಗಾದ್ರೆ ಮದ್ಯ ನಿಷೇಧವಾಗುತ್ತಾ?

Published : Jan 14, 2020, 09:05 PM IST
ಸ್ವಾಮೀಜಿ ಮಾತಿಗೆ ಸಿಎಂ ಸಹಮತ: ಹಾಗಾದ್ರೆ ಮದ್ಯ ನಿಷೇಧವಾಗುತ್ತಾ?

ಸಾರಾಂಶ

ರಾಜ್ಯದಲ್ಲಿ ಮದ್ಯಪಾನ ನಿಷೇಧ ಮಾಡುವ ಬಗ್ಗೆ ಪರ-ವಿರೋಧದ ಚರ್ಚೆಗಳು ನಡೆದಿವೆ. ಮದ್ಯಪಾನದಿಂದ ಬರುವ ಆದಾಯದಿಂದಲೇ  ರಾಜ್ಯ ಸರ್ಕಾರದ ಬೊಕ್ಕಸ ತುಂಬುತ್ತಿದೆ. ಈ ಹಿನ್ನೆಲೆಯಲ್ಲಿ ಮದ್ಯ ನಿಷೇಧ ಕಷ್ಟ ಸಾಧ್ಯ. ಆದ್ರೆ, ಮದ್ಯ ನಿಷೇಧಕ್ಕೆ ಸ್ವಾಮೀಜಿಗಳ ಮಾತಿಗೆ ಸಿಎಂ ಅವರು ಸಹಮತ ವ್ಯಕ್ತಪಡಿಸಿದ್ದಾರೆ. ಏನದು..? ಮುಂದೆ ನೋಡಿ..ಆದ್ರೆ 

ಚಿಕ್ಕಮಗಳೂರು, [ಜ.14]:  ಮದ್ಯಪಾನ ನಿಷೇಧದ ಬಗ್ಗೆ  ಸಿರಿಗೆರೆ ಸ್ವಾಮೀಜಿಗಳ ಮಾತಿಗೆ ಸಿಎಂ ಬಿಎಸ್ ಯಡಿಯೂರಪ್ಪ ಅವರು ಸಹಮತ ವ್ಯಕ್ತಪಡಿಸಿದ್ದಾರೆ.

 ಚಿಕ್ಕಮಗಳೂರಿನ ಸೊಲ್ಲಾಪುರ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಿರೆಗೆರೆ ಸ್ವಾಮೀಜಿಗಳು ತಮ್ಮ ಭಾಷಣದಲ್ಲಿ ರಾಜ್ಯದಲ್ಲಿ‌ ಮದ್ಯಪಾನ ನಿಷೇಧ ಮಾಡಬೇಕೆಂದು ಮನವಿ ಮಾಡಿದರು. ಅಷ್ಟೇ ಅಲ್ಲದೇ ನೀರಾವರಿಗೆ ಹೆಚ್ಚಿನ ಆದ್ಯತೆ ನೀಡುವಂತೆ ಸಿಎಂ ಶ್ರೀಗಳು ಮನವಿ ಮಾಡಿ ಮಾತು ಮುಗಿಸಿದರು.

ಮದ್ಯ ವಹಿವಾಟಿಗೆ ಶುಕ್ರದೆಸೆ! ಮಾರಾಟ ಹೆಚ್ಚಳ

ತದನಂತ ಭಾಷಣ ಮಾಡಿ ಸಿಎಂ ಯಡಿಯೂರಪ್ಪ, ಸ್ವಾಮೀಜಿಗಳು ಹೇಳಿದ ಮಾತುಗಳನ್ನು ಕೇಳಿದ್ದೇನೆ. ರೈತರ ಬದುಕು ಹಸನುಗೊಳಿಸುವುದೇ ಸರ್ಕಾರದ ಗುರಿಯಾಗಿದೆ.

ಸ್ವಾಮೀಜಿ ಹೇಳಿದ  ಮಾತುಗಳನ್ನು ಕೇಳಿದ್ದೇನೆ. ಆದ್ರೆ, ನಾನು ಯಾವುದೇ ಭರವಸೆ ನೀಡುವುದಿಲ್ಲ. ಬದಲಾಗಿ ಹಂತ ಹಂತವಾಗಿ ಎಲ್ಲಾವನ್ನು ಜಾರಿಗೊಳಿಸುವುದಾಗಿ ಎಂದು ಹೇಳುವ ಮೂಲಕ ಶ್ರೀಗಳ  ಮಾತಿಗೆ ಗೌರವ ನೀಡಿದರು. 

ಮದ್ಯಪಾನದಿಂದಲೇ ರಾಜ್ಯ ಸರ್ಕಾರಕ್ಕೆ ಹೆಚ್ಚಾಗಿ ಆದಾಯ ಬರುತ್ತಿದೆ. ಹಾಗಾಗಿ ರಾಜ್ಯದಲ್ಲಿ ಮದ್ಯಪಾನ ನಿಷೇಧಿಸುವುದು ಕಷ್ಟ ಸಾಧ್ಯ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

‘ಋತುಚಕ್ರ ರಜೆ’ಗೆ ತಡೆ ನೀಡಿ ಹಿಂಪಡೆದ ಹೈಕೋರ್ಟ್‌
ಎಂಎಸ್ಪಿ ಅಡಿಯಲ್ಲಿ ತೊಗರಿ ಖರೀದಿ ಆರಂಭಿಸಿ: ಪ್ರಧಾನಿ ಮೋದಿಗೆ ಸಿಎಂ ಸಿದ್ದರಾಮಯ್ಯ ಪತ್ರ