'ಅರೇ ಮಿಸ್ಟರ್ ಲೋಫರ್ ಸಮೀರ್..' ಧರ್ಮಸ್ಥಳ ವಿರುದ್ಧ ಅಪಪ್ರಚಾರ, ರಾಯಚೂರಲ್ಲಿ ಮಲ್ಲಿಕಾರ್ಜುನ ಬಾಳೆಕಾಯಿ ತೀವ್ರ ವಾಗ್ದಾಳಿ

Published : Sep 01, 2025, 11:38 AM IST
Mallikarjun balekayi raichur

ಸಾರಾಂಶ

ಧರ್ಮಸ್ಥಳ ಸೇರಿದಂತೆ ಹಿಂದೂ ಧಾರ್ಮಿಕ ಕೇಂದ್ರಗಳ ವಿರುದ್ಧದ ಅಪಪ್ರಚಾರವನ್ನು ಖಂಡಿಸಿ ಬಿಜೆಪಿ ನಾಯಕ ಡಾ.ಮಲ್ಲಿಕಾರ್ಜುನ ಬಾಳೆಕಾಯಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಯೂಟ್ಯೂಬರ್ ಸಮೀರ್ ಮುಲ್ಲಾ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಕಾಂಗ್ರೆಸ್ ಸರ್ಕಾರದ ನಿಷ್ಕ್ರಿಯತೆಯನ್ನು ಟೀಕಿಸಿದ್ದಾರೆ.

ರಾಯಚೂರು (ಸೆ.1): ಧರ್ಮಸ್ಥಳ ಸೇರಿದಂತೆ ವಿವಿಧ ಹಿಂದೂ ಧಾರ್ಮಿಕ ಕೇಂದ್ರಗಳ ವಿರುದ್ಧ ನಡೆಯುತ್ತಿರುವ ಅಪಪ್ರಚಾರದ ವಿರೋಧಿಸಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಮಲ್ಲಿಕಾರ್ಜುನ ಬಾಳೆಕಾಯಿ, ತೀವ್ರ ವಾಗ್ದಾಳಿ ನಡೆಸಿದರು.

ರಾಯಚೂರಿನ ವೀರ್ ಸಾವರ್ಕರ್ ಅಸೋಸಿಯೇಶನ್ ಆಯೋಜಿಸಿದ್ದ ಗಣೇಶ ವಿಸರ್ಜನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹಿಂದೂ ಧಾರ್ಮಿಕ ಶ್ರದ್ಧಾ ಕೇಂದ್ರಗಳಾದ ಶಬರಿಮಲೈ, ತಿರುಪತಿ, ಮತ್ತು ಧರ್ಮಸ್ಥಳದಂತಹ ಪವಿತ್ರ ಸ್ಥಳಗಳ ವಿರುದ್ಧ ಕೆಲವರು ಕಳಂಕ ತರುವ ಯತ್ನ ಮಾಡುತ್ತಿದ್ದಾರೆ. ಈ ಷಡ್ಯಂತ್ರದಲ್ಲಿ ಕೆಲವು ಹಿಂದೂಗಳೇ ಒಡನಾಡಿಯಾಗಿರುವುದು ದುರಂತ ಎಂದರು.

ಧರ್ಮಾಧಿಕಾರಿಗಳ ಚಪ್ಪಲಿಗೆ ಇವರು ಸಮಾನರಲ್ಲ:

ಧರ್ಮಸ್ಥಳದ ಬಗ್ಗೆ ಹೇಳಿಕೆ ನೀಡಲು ಇವರಿಗೆ ಯಾವ ನೈತಿಕತೆ ಇದೆ? ಧರ್ಮಾಧಿಕಾರಿಗಳ ಚಪ್ಪಲಿಗೂ ಇವರು ಸಮಾನರಲ್ಲ! ಎಂದು ಕಿಡಿಕಾರಿದರು.ಡಾ.ಮಲ್ಲಿಕಾರ್ಜುನ ಬಾಳೆಕಾಯಿ, ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗಡೆಯವರ ಕೊಡುಗೆಗಳನ್ನು ಶ್ಲಾಘಿಸಿದರು. ವೀರೇಂದ್ರ ಹೆಗಡೆಯವರು ಸಾವಿರಾರು ದೇವಾಲಯಗಳಿಗೆ ಅನುದಾನ ನೀಡಿದ್ದಾರೆ, ಭಜನಾ ಕೇಂದ್ರಗಳನ್ನು ತೆರೆದಿದ್ದಾರೆ, ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡಿದ್ದಾರೆ. ಆದರೆ ಕೆಲವು ಕ್ರಿಮಿಕೀಟಗಳು ಮತ್ತು ನರಿನಾಯಿಗಳು ಧರ್ಮಸ್ಥಳದ ಹೆಸರನ್ನು ಕೆಡಿಸಲು ಯತ್ನಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯುಟ್ಯೂಬರ್ ಸಮೀರ್‌ಗೆ 'ಮಿಸ್ಟರ್ ಲೋಫರ್' ಎಂದ ಬಾಳೆಕಾಯಿ:

ಧರ್ಮಸ್ಥಳ ಅಪಪ್ರಚಾರದ ಹಿಂದೆ ಕ್ರಿಶ್ಚಿಯನ್ ಸಂಸ್ಥೆಗಳ ಕೈವಾಡವಿದೆ ಎಂದು ಆರೋಪಿಸಿದ ಅವರು, ಯೂಟ್ಯೂಬರ್ ಸಮೀರ್ ಮುಲ್ಲಾ ಅವರನ್ನು 'ಮಿಸ್ಟರ್ ಲೋಫರ್' ಎಂದು ಕರೆದು, ಅರೇ ಮಿಸ್ಟರ್ ಲೋಫರ್ ಸಮೀರ್.. ಬೆಳಗಾವಿಯಲ್ಲಿ ನಿಮ್ಮ ಧಾರ್ಮಿಕ ಮುಖಂಡ ಅಪ್ರಾಪ್ತೆ ಮೇಲೆ ಅತ್ಯಾ೧ಚಾರ ಮಾಡೋ ಯತ್ನ ಮಾಡಿದ್ದ. ಆಗ ಯಾಕೆ ನೀನು ಹೊರಗಡೆ ಬರಲಿಲ್ಲ ಮಗನೇ ಎಂದು ಪ್ರಶ್ನಿಸಿದರು.

ಇವರ ರಕ್ತದಲ್ಲಿ ಹರಿಯುತ್ತಿರುವುದು ಯಾವ ರಕ್ತ? ಕಾಂಗ್ರೆಸ್ ವಿರುದ್ಧ ಕಿಡಿ:

ಬೆಂಗಳೂರಿನ ಡಿಜೆ ಹಳ್ಳಿ-ಕೆಜಿಹಳ್ಳಿಯಲ್ಲಿ ಒಂದೇ ಪೋಸ್ಟ್‌ಗೆ ಕಾಂಗ್ರೆಸ್ ಶಾಸಕರ ಮನೆಗೆ ಬೆಂಕಿ ಹಚ್ಚಲಾಯಿತು. ಆದರೆ ಧರ್ಮಸ್ಥಳದ ಬಗ್ಗೆ ಸಾವಿರಾರು ಪೋಸ್ಟ್‌ಗಳಿದ್ದರೂ, ಕಾಂಗ್ರೆಸ್ ಸರ್ಕಾರಕ್ಕೆ ಒಂದೇ ಒಂದು ಸುಮೋಟೊ ಕೇಸ್ ಹಾಕುವ ತಾಕತ್ತಿಲ್ಲ! ಇವರ ರಕ್ತದಲ್ಲಿ ಹಿಂದೂ ರಕ್ತವೇ ಹರಿಯುತ್ತಿದ್ದರೆ, ಒಂದೊಂದು ಪೋಸ್ಟ್‌ಗೂ ಕೇಸ್ ಹಾಕಬೇಕಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹೊರಗಿನ ಶತ್ರುಗಳನ್ನು ಸೈನಿಕರು ನೋಡಿಕೊಳ್ಳುತ್ತಾರೆ, ಆದರೆ ಒಳಗಿನ ಶತ್ರುಗಳಿಗೆ ಉತ್ತರ ಕೊಡುವವರು ಯಾರು? ಎಂದು ಪ್ರಶ್ನಿಸಿದ ಅವರು, ಧರ್ಮಸ್ಥಳದ ನಂತರ ಮಂತ್ರಾಲಯವೂ ಗುರಿಯಾಗಬಹುದು ಎಂದು ಎಚ್ಚರಿಕೆ ನೀಡಿದರು. ಈ ಹೇಳಿಕೆಯು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದು, ರಾಜಕೀಯ ಮತ್ತು ಧಾರ್ಮಿಕ ವಲಯಗಳಲ್ಲಿ ವಿವಿಧ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!
ಐಷಾರಾಮಿ ಕಾರ್ಟಿಯರ್ ವಾಚ್‌: ಲೋಕಾಯುಕ್ತ ಅಫಿಡವಿಟ್ ರಿವೀಲ್ ಮಾಡಿದ ಡಿ.ಕೆ. ಶಿವಕುಮಾರ್!