ಕೆರೆಬಿಯನ್‌ ದ್ವೀಪದಲ್ಲಿ ನಿತ್ಯಾನಂದ ಗುಪ್ತ ವಾಸ?

Published : Jan 23, 2020, 08:14 AM ISTUpdated : Jan 23, 2020, 08:41 AM IST
ಕೆರೆಬಿಯನ್‌ ದ್ವೀಪದಲ್ಲಿ ನಿತ್ಯಾನಂದ ಗುಪ್ತ ವಾಸ?

ಸಾರಾಂಶ

ಕೆರೆಬಿಯನ್‌ ದ್ವೀಪದಲ್ಲಿ ನಿತ್ಯಾನಂದ?| ಬೆಲಿಝ್‌ ಪಾಸ್‌ಪೋರ್ಟ್‌ ಪಡೆದುಕೊಂಡಿರುವ ನಿತ್ಯಾನಂದ

ನವದೆಹಲಿ[ಜ.23]: ಅತ್ಯಾಚಾರ ಸೇರಿ ಹಲವು ಪ್ರಕರಣಗಳಲ್ಲಿ ಬೆಂಗಳೂರು ಹಾಗೂ ಗುಜರಾತ್‌ ಪೊಲೀಸರಿಗೆ ಬೇಕಾಗಿರುವ ಸ್ವಯಂ ಘೋಷಿತ ದೇವ ಮಾನವ ನಿತ್ಯಾನಂದ ಕೆರೀಬಿಯನ್‌ ದೇಶವೊಂದರಲ್ಲಿ ಬೀಡುಬಿಟ್ಟಿದ್ದಾನೆ ಎನ್ನಲಾಗಿದೆ. ಕ್ಯೂಬಾ ಮತ್ತು ಮೆಕ್ಸಿಕೋ ದೇಶಗಳ ನಡುವೆ ಬರುವ ಬೆಲಿಝ್‌ ಎಂಬ ಪುಟ್ಟದೇಶದ ಪಾಸ್‌ಪೋರ್ಟ್‌ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿರುವ ನಿತ್ಯಾನಂದ, ಬಳಿಕ ಕೆರೆಬಿಯನ್‌ ದೇಶವೊಂದರಲ್ಲಿ ತಲೆ ಮರೆಸಿಕೊಂಡಿದ್ದಾನೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ.

ನಿತ್ಯಾನಂದ ಎಲ್ಲಿದ್ದಾನೆಂದು ಪತ್ತೆಗೆ 'ಬ್ಲೂ' ಕಾರ್ನರ್ ನೊಟೀಸ್

ಭಾರತದಲ್ಲಿ ಬಂಧನಕ್ಕೊಳಗಾಗುವ ಭೀತಿಯಲ್ಲಿ ಕೆಲ ತಿಂಗಳ ಹಿಂದೆ ದೇಶ ತೊರೆದಿದ್ದ ನಿತ್ಯಾನಂದ, ಈಕ್ವೆಡಾರ್‌ನಲ್ಲಿ ನೆಲೆ ಕಂಡುಕೊಳ್ಳುವ ಯತ್ನ ಮಾಡಿದ್ದ. ಅಲ್ಲಿನ ದ್ವೀಪವೊಂದನ್ನು ಖರೀದಿಸಿ ಅದಕ್ಕೆ ಕೈಲಾಸ ಎಂದು ಹೆಸರಿಟ್ಟು ಹೊಸ ಹಿಂದೂ ದೇಶ ರಚನೆಯ ಘೋಷಣೆ ಮಾಡಿ, ವಿಡಿಯೋ ಬಿಡುಗಡೆ ಮಾಡಿದ್ದ. ಆದರೆ ನಿತ್ಯಾನಂದನಿಗೆ ದ್ವೀಪ ಮಾರಾಟ ಮಾಡಿದ ವರದಿಗಳನ್ನು ಈಕ್ವೆಡಾರ್‌ ದೇಶ ನಿರಾಕರಿಸಿತ್ತು. ಅಲ್ಲಿಂದ ಆತ ಹೈಟಿ ಎಂಬ ದೇಶಕ್ಕೆ ಪರಾರಿಯಾಗಿದ್ದಾನೆ ಎಂದು ವರದಿಗಳು ಹೇಳಿದ್ದವು.

ಅದರ ಬೆನ್ನಲ್ಲೇ ಇದೀಗ ಬೆಲಿಝ್‌ ದೇಶದ ಪಾಸ್‌ಪೋರ್ಟ್‌ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿರುವ ನಿತ್ಯಾನಂದ ಕೆರೆಬಿಯನ್‌ ದೇಶಗಳ ಪೈಕಿ ಯಾವುದೋ ಒಂದು ದ್ವೀಪದಲ್ಲಿ ತಂಗಿದ್ದಾನೆ ಎಂದು ಹೇಳಲಾಗಿದೆ.

ನಿತ್ಯಾನಂದನ ಕೈಲಾಸ ನಿರ್ಮಾಣಕ್ಕೆ ಹಣ ಕೊಟ್ಟಿದ್ದು ಶಿಷ್ಯೆ!

2 ವರ್ಷಗಳ ಹಿಂದೆ ಬೆಲಿಝ್‌ ದೇಶದ ವಿಶ್ವವಿದ್ಯಾಲಯವೊಂದು ನಿತ್ಯಾನಂದನಿಗೆ ಗೌರವ ಡಾಕ್ಟರೆಟ್‌ ಪದವಿ ನೀಡಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು
ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿಗೆ ಜೈಲೇ ಗತಿ, ಜಾಮೀನು ಅರ್ಜಿ ತಿರಸ್ಕೃತ