ಬೆಂಗಳೂರಿಗರಿಂದ ಉತ್ತಮ ಸಹಕಾರ: ಭಾಸ್ಕರ್‌ ರಾವ್‌ ಸ್ಮರಣೆ

Kannadaprabha News   | Asianet News
Published : Aug 01, 2020, 07:45 AM IST
ಬೆಂಗಳೂರಿಗರಿಂದ ಉತ್ತಮ ಸಹಕಾರ: ಭಾಸ್ಕರ್‌ ರಾವ್‌ ಸ್ಮರಣೆ

ಸಾರಾಂಶ

ನಾನು ಆಯುಕ್ತ ಹುದ್ದೆಯ ಜವಾಬ್ದಾರಿಯನ್ನು ನನ್ನ ಮಿತ್ರ ಮತ್ತು ಬ್ಯಾಚ್‌ಮೇಟ್‌ ಆಗಿರುವ ಕಮಲ್‌ ಪಂತ್‌ ಅವರಿಗೆ ಹಸ್ತಾಂತರಿಸುತ್ತಿದ್ದೇನೆ: ಭಾಸ್ಕರ್‌ ರಾವ್‌| ಈವೊಂದು ವರ್ಷದ ಅವಧಿಯಲ್ಲಿ ನನಗೆ ಬೆಂಗಳೂರಿನ ಪ್ರತಿಯೊಬ್ಬ ನಾಗರಿಕನ ಅಪಾರವಾದ ಸಹಕಾರ, ಪ್ರೀತಿ ಹಾಗೂ ವಿಶ್ವಾಸ ಸಿಕ್ಕಿದೆ| ನಾವೆಲ್ಲರೂ ಒಟ್ಟಿಗೆ ಎದುರಾದ ಎಲ್ಲ ರೀತಿಯ ಸಮಸ್ಯೆಗಳನ್ನು ಧೈರ್ಯವಾಗಿ ಎದುರಿಸಿದ್ದೇವೆ. ಬೆಂಗಳೂರು ಸುರಕ್ಷಿತವಾಗಿದೆ| 

ಬೆಂಗಳೂರು(ಆ.01): ತಾವು ಪೊಲೀಸ್‌ ಆಯುಕ್ತರಾಗಿ ಒಂದು ವರ್ಷದ ಅವಧಿಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲು ಸಹಕರಿಸಿದ ಬೆಂಗಳೂರಿನ ನಾಗರಿಕರಿಗೆ ನಿಗರ್ಮಿತ ಆಯುಕ್ತ ಎಸ್‌.ಭಾಸ್ಕರ್‌ ರಾವ್‌ ಧನ್ಯವಾದ ಹೇಳಿದ್ದಾರೆ.

ನಾನು ಆಯುಕ್ತ ಹುದ್ದೆಯ ಜವಾಬ್ದಾರಿಯನ್ನು ನನ್ನ ಮಿತ್ರ ಮತ್ತು ಬ್ಯಾಚ್‌ಮೇಟ್‌ ಆಗಿರುವ ಕಮಲ್‌ ಪಂತ್‌ ಅವರಿಗೆ ಹಸ್ತಾಂತರಿಸುತ್ತಿದ್ದೇನೆ. ಈವೊಂದು ವರ್ಷದ ಅವಧಿಯಲ್ಲಿ ನನಗೆ ಬೆಂಗಳೂರಿನ ಪ್ರತಿಯೊಬ್ಬ ನಾಗರಿಕನ ಅಪಾರವಾದ ಸಹಕಾರ, ಪ್ರೀತಿ ಹಾಗೂ ವಿಶ್ವಾಸ ಸಿಕ್ಕಿದೆ. ನಾವೆಲ್ಲರೂ ಒಟ್ಟಿಗೆ ಎದುರಾದ ಎಲ್ಲ ರೀತಿಯ ಸಮಸ್ಯೆಗಳನ್ನು ಧೈರ್ಯವಾಗಿ ಎದುರಿಸಿದ್ದೇವೆ. ಬೆಂಗಳೂರು ಸುರಕ್ಷಿತವಾಗಿದೆ. ಪೌರತ್ವ ಕಾಯ್ದೆ ವಿರೋಧಿ ಹೋರಾಟ (ಸಿಎಎ), ಕೊರೋನಾ ಹಾಗೂ ವಲಸೆ ಕಾರ್ಮಿಕರ ಸಮಸ್ಯೆಗಳಲ್ಲಿ ಪೊಲೀಸರ ಜತೆ ನಾಗರಿಕರು ಕೈ ಜೋಡಿಸಿದ್ದನ್ನು ಮರೆಯಲಾಗದು ಎಂದು ಸ್ಮರಿಸಿದ್ದಾರೆ.

ಭಾಸ್ಕರ್ ರಾವ್ ಜಾಗಕ್ಕೆ ಕಮಲ್ ಪಂಥ್, ಬೆಂಗಳೂರಿಗೆ ಹೊಸ ಕಮಿಷನರ್

ವಿಶೇಷವಾಗಿ ಸಿವಿಲ್‌ ಪೊಲೀಸ್‌ ವಾರ್ಡನ್‌ ಹಾಗೂ ಟ್ರಾಫಿಕ್‌ ವಾರ್ಡನ್‌ ನೇಮಕಾತಿಗೆ ಜನರು ತುಂಬಾ ಚೆನ್ನಾಗಿ ಸ್ಪಂದಿಸಿದ್ದಾರೆ. ಅಹಿತಕರ ಘಟನೆಗಳು ನಡೆಯದಂತೆ ಜನರು ನೋಡಿಕೊಂಡಿದ್ದಾರೆ. ಪೊಲೀಸರ ನಿರ್ಬಂಧನೆಗಳಿಂದ ವೈಯಕ್ತಿಕ ಅನಾನುಕೂಲವಾದರೂ ನಾಗರಿಕರು ಸಹಿಸಿದ್ದಾರೆ. ಸಮಸ್ಯೆಯನ್ನು ಅರ್ಥ ಮಾಡಿಕೊಂಡು ಪೊಲೀಸ್‌ ತಂಡಕ್ಕೆ ಸಹಕಾರ ನೀಡಿದ್ದರು. ಪ್ರತಿಯೊಬ್ಬ ಕಾನ್‌ಸ್ಟೇಬಲ್‌ಗೂ ಪ್ರೀತಿ ತೋರಿಸಿದ್ದಾರೆ. ಇದೇ ಸಹಕಾರ ಮುಂದೆ ಸಹ ನೀಡಬೇಕು ಎಂದು ಭಾಸ್ಕರ್‌ ರಾವ್‌ ವಿನಂತಿಸಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!
2.84 ಲಕ್ಷ ಹುದ್ದೆ ಖಾಲಿ ಇದ್ರೂ, ಶೇ.9 ಹುದ್ದೆಗಳ ನೇಮಕಾತಿಯನ್ನೇ ಪ್ರಚಾರಕ್ಕೆ ಬಳಸಿಕೊಂಡ ಸರ್ಕಾರ!