
ತುಮಕೂರು (ನ.21): ಪಾದಯಾತ್ರೆ ಮಾಡಿ ದಣಿದು ಬಂದಿದ್ದ ರಾಹುಲ್ ಗಾಂಧಿಗೆ ಸೌತೆಕಾಯಿ ನೀಡಿ ಸಂತೈಸಿದ್ದ ಅಜ್ಜಿ ಚಿಕ್ಕನಾಯಕನಹಳ್ಳಿಯ ಶಾರದಮ್ಮ(78) ನಿಧನರಾಗಿದ್ದಾರೆ.
ಇಳಿವಯಸ್ಸಿನಲ್ಲಿ ಫುಟ್ಪಾತ್ನಲ್ಲಿ ತರಕಾರಿ ಮಾರಾಟ ಮಾಡಿ ಸ್ವಾವಲಂಬಿ ಜೀವನ ಸಾಗಿಸುತ್ತಿದ್ದ ವೃದ್ಧೆ ಶಾರದಮ್ಮ. ಆದರೆ ವಯೋ ಸಹಜ ಅನಾರೋಗ್ಯದಿಂದ ನಿನ್ನೆ ನಿಧನರಾಗಿದ್ದಾರೆ.
ಬಿರುಬಿಸಲಲ್ಲೂ ದೇಶಾದ್ಯಂತ ಹಲವು ರಾಜ್ಯಗಳಲ್ಲಿ ಪಾದಾಯತ್ರೆ ನಡೆಸಿ ಕಳೆದ ವರ್ಷ 2022ರ ಅಕ್ಟೋಬರ್ ತಿಂಗಳಲ್ಲಿ ತುಮಕೂರು ತಲುಪಿ ಚಿಕ್ಕನಾಯಕನಹಳ್ಳಿ ಮಾರ್ಗವಾಗಿ ಭಾರತ್ ಜೋಡೋ ಯಾತ್ರೆಗೆ ಹೊರಟಿದ್ದ ರಾಹುಲ್ ಗಾಂಧಿ. ತುಮಕೂರಿನ ಚಿಕ್ಕನಾಯಕನಹಳ್ಳಿ ಮಾರ್ಗವಾಗಿ ಹೊರಟಿದ್ದ ವೇಳೆ ರಾಹುಲ್ ಗಾಂಧಿಗೆ ಸೌತೆಕಾಯಿ ನೀಡಿ ಸಂತೈಸಿದ್ದ ಶಾರದಮ್ಮ.
ಧೂಮ್ ಸರಣಿ ಚಿತ್ರಗಳ ನಿರ್ದೇಶಕ ಸಂಜಯ್ ಗಧ್ವಿ ತೀವ್ರ ಹೃದಯಾಘಾತದಿಂದ ನಿಧನ
ಪಾದಯಾತ್ರೆ ಮಾಡಿ ದಣಿದು ಬಂದಿದ್ದ ರಾಹುಲ್ ಗಾಂಧಿಯನ್ನು ತಬ್ಬಿ ಸಂತೈಸಿ ಆಶೀರ್ವಾದ ಮಾಡಿದ್ದರು. ಇದೇ ವೇಳೆ ಇಂದಿರಾಗಾಂಧಿಯನ್ನು ವೃದ್ಧೆ ಶಾರದಮ್ಮ ಹಾಡಿಹೊಗಳಿದ್ದರು. ಶಾರದಮ್ಮಳ ಮಮತೆಗೆ ಮನಸೋತಿದ್ದ ರಾಹುಲ್ ಗಾಂಧಿ. ಅಜ್ಜಿ ಕೊಟ್ಟ ಸೌತೆಕಾಯಿ ತಿಂದು ಪಾದಾಯಾತ್ರೆ ಮುಂದುವರಿಸಿದ್ದರು. ವೃದ್ಧೆ ಶಾರದಮ್ಮ ವಯೋಸಹಜ ಅನಾರೋಗ್ಯದಿಂದ ನಿಧನರಾದ ಸುದ್ದಿ ತಿಳಿದು ಗಣ್ಯರು, ಊರಿನ ಹಿರಿಯರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.
ಸುಬ್ರತಾ ರಾಯ್ ನಿಧನ, ಹಂಚಿಕೆಯಾಗದೇ ಉಳಿದ 25 ಸಾವಿರ ಕೋಟಿ ರೂಪಾಯಿಯ ಕಥೆಯೇನು?
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ