
ರಾಮನಗರ (ಆ.1): ಟೋಲ್ನಿಂದ ಬಚಾವ್ ಆಗಲು ಚಾಲಕನೊಬ್ಬ ಸಾರಿಗೆ ಬಸ್ ಅನ್ನು ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇನ ಮಧ್ಯದಲ್ಲಿಯೇ ಯೂ ಟರ್ನ್ ಮಾಡಿ ರಾಂಗ್ ಸೈಡಿನಲ್ಲಿ ಸಂಚರಿಸಿ ವಾಹನ ಸವಾರರಲ್ಲಿ ಆತಂಕ ಸೃಷ್ಟಿಸಿದ ಘಟನೆ ಬಿಡದಿ ಸಮೀಪ ನಡೆದಿದೆ.
ಬೆಳಗ್ಗೆ 8 ಗಂಟೆ ಸಮಯದಲ್ಲಿ ಕೆ.ಎ.42, ಎಫ್ - 2233 ನಂಬರಿನ ಕೆಎಸ್ಆರ್ಟಿಸಿ ಬಸ್ ಅನ್ನು ಚಾಲಕ ಎಕ್ಸ್ಪ್ರೆಸ್ ವೇ ಮಧ್ಯದಲ್ಲಿ ಯೂ ಟರ್ನ್ ಮಾಡಿಕೊಂಡು ಸಂಚರಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಟೋಲ…ನ ಹಣ ಉಳಿಸುವ ಕಾರಣಕ್ಕೆ ಬಸ್ ಅನ್ನು ಯೂ ಟರ್ನ್ ಮಾಡಲಾಗಿದೆ ಎನ್ನಲಾಗುತ್ತಿದೆ. ಆದರೆ, ಪ್ರಯಾಣಿಕರ ಪ್ರಾಣ ಸಂಕಟಕ್ಕೆ ತಳ್ಳಿದ ಡ್ರೈವರ್ ವಿರುದ್ಧ ಜನರು ಕಿಡಿಕಾರಿದ್ದಾರೆ. ಜೊತೆಗೆ ಬಸ್ ಹಿಂದೆ ಬರುತ್ತಿದ್ದ ಇತರೆ ವಾಹನ ಸವಾರರಲ್ಲಿಯೂ ಇದು ಆತಂಕ ಮೂಡಿಸಿದೆ.
ಇಂದಿನಿಂದ ಬೈಕ್, ರಿಕ್ಷಾಗೆ ಬೆಂ-ಮೈ ಹೈವೇಲಿ ನಿಷೇಧ: ನಿಯಮ ಮೀರಿದ್ರೆ 500 ರೂ. ದಂಡ
ಸದ್ಯ ಸಾಮಾಜಿಕ ಜಾಲತಾಣ(Social media)ದಲ್ಲಿ ವಾಹನ ಸವಾರರು ವಿಡಿಯೋ ಹಂಚಿಕೊಂಡಿದ್ದಾರೆ. ನರಸಿಂಹ ಉಪಾಧ್ಯಾಯ ಈ ಘಟನೆ ಕುರಿತಾಗಿ ಟ್ವೀಚ್ ಮಾಡಿದ್ದು, ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ(Bengaluru mysuru expressway)ನಲ್ಲಿ ಸಂಭವಿಸುತ್ತಿರುವ ಅನೇಕ ಅಪಘಾತಗಳಿಗೆ ಯಾರು ಜವಾಬ್ದಾರರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಥವಾ ಇಂತಹ ಅರ್ಥಹೀನ ಚಾಲಕರಾ ಎಂದು ಪ್ರಶ್ನಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ