
ಬೆಂಗಳೂರು (ಡಿ.13): ಡಿ.14ರಿಂದ ಡಿ.22ರವರೆಗೆ 20 ರೈಲು ಸೇವೆಯನ್ನು ಹಾಸನದಲ್ಲಿ ಯಾರ್ಡ್ ಪುನರ್ ನಿರ್ಮಾಣ ಕಾರ್ಯ ಹಿನ್ನೆಲೆಯಲ್ಲಿ ರದ್ದುಗೊಳಿಸಿರುವುದಾಗಿ ನೈಋತ್ಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ. ಡಿ.14ರಿಂದ ಡಿ.22ರವರೆಗೆ ಮೈಸೂರು - ಅರಸಿಕೆರೆ (06214), ಅರಸಿಕೆರೆ -ಮೈಸೂರು (06213), ಯಶವಂತಪುರ- ಮೈಸೂರು (16207), ಮೈಸೂರು - ಯಶವಂತಪುರ (16208), ಮೈಸೂರು-ತಾಳಗುಪ್ಪ (16222), ಮೈಸೂರು -ಅರಸಿಕೆರೆ (06268), ಅರಸಿಕೆರೆ -ಮೈಸೂರು (06267), ಮೈಸೂರು -ಸರ್.ಎಂ.ವಿ.ಬೆಂಗಳೂರು (06269) ರೈಲನ್ನು ರದ್ದುಗೊಳಿಸಲಾಗಿದೆ.
ಡಿ.15ರಿಂದ ಡಿ.23ರವರೆಗೆ ತಾಳಗುಪ್ಪ - ಮೈಸೂರು (16221), ಡಿ.16ರಿಂದ ಡಿ.20ರವರೆಗೆ ಕೆಎಸ್ಆರ್ ಬೆಂಗಳೂರು-ಕಣ್ಣೂರು (16511), ಡಿ.17ರಿಂದ ಡಿ.21ರವರೆಗೆಗೆ ಕಣ್ಣೂರು - ಕೆಎಸ್ಆರ್ ಬೆಂಗಳೂರು (16512), ಡಿ.16 ರಿಂದ ಡಿ.20ರವರೆಗೆ ಕೆಎಸ್ಆರ್ ಬೆಂಗಳೂರು - ಕಾರವಾರ (16595), ಡಿ.17ರಿಂದ ಡಿ.21ರವರೆಗೆ ಕಾರವಾರ - ಬೆಂಗಳೂರು (16596), ಡಿ.13ರಿಂದ ಡಿ.21ರವೆಗೆ ಎಸ್ಎಂವಿಟಿ ಬೆಂಗಳೂರು -ಮೈಸೂರು (16270) ರದ್ದುಗೊಳಿಸಲಾಗಿದೆ.
ಇದೇ ಕಾರಣಕ್ಕೆ ಬೆಂಗಳೂರಿನಲ್ಲಿ ಏಕಾಏಕಿ ಡೆಂಘೀ ಕೇಸ್ ಹೆಚ್ಚಳ!
ಡಿ.16ರಂದು ಯಶವಂತಪುರ - ಮಂಗಳೂರು ಜಂಕ್ಷನ್ (16539), ಡಿ.17ರಂದು ಮಂಗಳೂರು ಜಂಕ್ಷನ್ - ಯಶವಂತಪುರ (16540) ರೈಲು ಸಂಚಾರ ಇರುವುದಿಲ್ಲ. ಡಿ.14,17, 19 ಮತ್ತು 21ರಂದು ಯಶವಂತಪುರ - ಮಂಗಳೂರು ಜಂಕ್ಷನ್ (16575) ಹಾಗೂ ಡಿ.15, 18, 20 ಮತ್ತು 22ರಂದು ಮಂಗಳೂರು ಜಂಕ್ಷನ್ - ಯಶವಂತಪುರ (16576) ರೈಲು ರದ್ದುಗೊಳಿಸಲಾಗಿದೆ. ಯಶವಂತಪುರ - ಕಾರವಾರ ನಡುವೆ ಸಂಚರಿಸುವ (16515) ರೈಲನ್ನು ಡಿ.13, 15, 18, 20 ಮತ್ತು 22ರಂದು ರದ್ದುಗೊಳಿಸಲಾಗಿದೆ. ಕಾರವಾರ - ಯಶವಂತಪುರ ನಡುವೆ ಸಂಚರಿಸುವ (16516) ರೈಲನ್ನು ಡಿ.14, 16, 19, 21 ಹಾಗೂ 23 ರಂದು ಸಂಚಾರ ರದ್ದುಗೊಳಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ