ಇಂದಿನಿಂದ ಬೈಕ್‌, ರಿಕ್ಷಾಗೆ ಬೆಂ-ಮೈ ಹೈವೇಲಿ ನಿಷೇಧ: ನಿಯಮ ಮೀರಿದ್ರೆ 500 ರೂ. ದಂಡ

Published : Aug 01, 2023, 02:40 AM IST
ಇಂದಿನಿಂದ ಬೈಕ್‌, ರಿಕ್ಷಾಗೆ ಬೆಂ-ಮೈ ಹೈವೇಲಿ ನಿಷೇಧ: ನಿಯಮ ಮೀರಿದ್ರೆ 500 ರೂ. ದಂಡ

ಸಾರಾಂಶ

ಬೆಂಗ​ಳೂರು-ಮೈಸೂರು ರಾಷ್ಟ್ರೀಯ ಹೆದ್ದಾ​ರಿ​ಯಲ್ಲಿ ಮಂಗಳವಾರದಿಂದ ದ್ವಿಚಕ್ರ, ತ್ರಿಚಕ್ರ ಸೇರಿ ಕೆಲ ವಾಹ​ನ​ಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ. ನಿಯಮ ಉಲ್ಲಂಘಿಸಿ ಹೈವೇಗೆ ಇಳಿದರೆ ವಾಹನ ಸವಾರರಿಗೆ 500 ದಂಡ ಬೀಳ​ಲಿದೆ.   

ರಾಮ​ನ​ಗರ (ಆ.01): ಬೆಂಗ​ಳೂರು-ಮೈಸೂರು ರಾಷ್ಟ್ರೀಯ ಹೆದ್ದಾ​ರಿ​ಯಲ್ಲಿ ಮಂಗಳವಾರದಿಂದ ದ್ವಿಚಕ್ರ, ತ್ರಿಚಕ್ರ ಸೇರಿ ಕೆಲ ವಾಹ​ನ​ಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ. ನಿಯಮ ಉಲ್ಲಂಘಿಸಿ ಹೈವೇಗೆ ಇಳಿದರೆ ವಾಹನ ಸವಾರರಿಗೆ 500 ದಂಡ ಬೀಳ​ಲಿದೆ. ಹೆದ್ದಾರಿಯಲ್ಲಿ ಅಪಘಾತಗಳ ತಡೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈ ನಿರ್ಧಾರ ಕೈಗೊಂಡಿದ್ದು, ಈ ಬಗ್ಗೆ ಜು.12ರಂದೇ ಗೆಜೆಟ್‌ ಅಧಿ​ಸೂ​ಚನೆ ಹೊರ​ಡಿ​ಸ​ಲಾ​ಗಿದೆ. ಆ.1ರ ಮಂಗಳವಾರದಿಂದ ಈ ಕುರಿತು ಆದೇಶ ಜಾರಿಗೆ ಬರಲಿದೆ. 

ಈ ಬಗ್ಗೆ ಸೋಮವಾರ ಮಾಹಿತಿ ನೀಡಿದ ರಾಮನಗರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಾರ್ತಿಕ್‌ ರೆಡ್ಡಿ, ನಿಷೇಧಿತ ವಾಹನ ಸವಾರರು ಎಕ್ಸ್‌ಪ್ರೆಸ್‌ ವೇಗೆ ಇಳಿ​ಯ​ದೆ ಕಡ್ಡಾ​ಯ​ವಾಗಿ ನಿಯಮ ಪಾಲನೆ ಮಾಡಿ, ಸರ್ವಿಸ್‌ ರಸ್ತೆ​ಯಲ್ಲಿ ಸಂಚಾರ ಮಾಡ​ಬೇಕು. ಹಾಗೊಂದು ವೇಳೆ ನಿಯಮ ಉಲ್ಲಂಘನೆ ಮಾಡಿ​ದಲ್ಲಿ ದಂಡ ವಿಧಿಸಲಾಗುವುದು ಎಂದು ಎಚ್ಚ​ರಿಕೆ ನೀಡಿದ್ದಾರೆ. ಈ ಬಗ್ಗೆ ಈಗಾಗಲೇ ಹೆಜ್ಜಾಲ ಸಮೀಪದ ಕಣಿಮಿಣಿಕೆ ಟೋಲ್‌ ಸಂಗ್ರಹ ಪ್ಲಾಜಾ ಮುಂದೆ ಸೂಚನಾ ಫಲಕಗಳನ್ನು ಹಾಕಲಾಗಿದೆ. ಅಲ್ಲದೆ, ನಿಷೇಧಿತ ವಾಹನಗಳು ಹೆದ್ದಾರಿಗೆ ಪ್ರವೇಶಿಸದಂತೆ ಪೊಲೀಸರು ಕಾವಲು ಕಾಯಲಿದ್ದಾರೆ ಎಂದು ಅವರು ತಿಳಿಸಿದರು.

ಚಾಮರಾಜನಗರದಲ್ಲಿ ಮಕ್ಕಳನ್ನು ಭಾದಿಸುತ್ತಿದೆ ವಿಚಿತ್ರ ಚರ್ಮರೋಗ!

ಸಾರ್ವಜನಿಕರ ಆಕ್ರೋಶ: ಈ ಮಧ್ಯೆ, ಹೆದ್ದಾರಿ ಪ್ರಾಧಿಕಾರದ ಈ ಆದೇಶಕ್ಕೆ ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಕ್ಸ್‌ಪ್ರೆಸ್‌ ವೇ ನಿರ್ಮಾ​ಣ ಸಮ​ಯ​ದಲ್ಲಿ ನಾಲ್ಕು ಪಥದ ಸರ್ವಿಸ್‌ ರಸ್ತೆ​ಗ​ಳನ್ನು ಕೇವಲ ಕಾಟಾ​ಚಾ​ರಕ್ಕೆ ಎಂಬಂತೆ ನಿರ್ಮಿಸಲಾಗಿದೆ. ಸರ್ವಿಸ್‌ ರಸ್ತೆ​ಗ​ಳಲ್ಲಿ ಸುರ​ಕ್ಷತೆ ಕಡೆಗೆ ಸ್ವಲ್ಪವೂ ಗಮನ ಹರಿ​ಸಿಲ್ಲ. ಸರ್ವಿಸ್‌ ರಸ್ತೆ​ ನಿರ್ಮಾ​ಣ​ದಲ್ಲಿ ಗುಣ​ಮಟ್ಟ ಕಾಪಾಡಿಕೊಂಡಿಲ್ಲ. ಮಳೆ ನೀರು ಸರಾ​ಗ​ವಾಗಿ ಹರಿದು ಹೋಗಲು ಕ್ರಮ ವಹಿ​ಸಿ​ಲ್ಲ. ಮಳೆಗಾಲ​ದಲ್ಲಿ ಅಂಡರ್‌ಪಾಸ್‌ಗಳು ಜಲಾ​ವೃತ ಆಗು​ವುದು ತಪ್ಪಿಲ್ಲ. ಹೀಗಾಗಿ, ಇಲ್ಲಿ ವಾಹ​ನ​ಗಳು ಸಂಚಾರ ಮಾಡು​ವುದು ಕಷ್ಟ. ಅಲ್ಲದೆ, ಬಿಡದಿ ಹಾಗೂ ದೊಡ್ಡ​ಮ​ಳೂರು-ಕೋಟ​ಮಾ​ರ​ನ​ಹಳ್ಳಿ ​ಸ​ಮೀ​ಪ ರೇಲ್ವೆ ಅಂಡರ್‌ ಪಾಸ್‌ಗಳಲ್ಲಿ ಸಂಚಾರ ಮುಕ್ತ​ಗೊ​ಳಿ​ಸಿಯೇ ಇಲ್ಲ. ಹಲ​ವೆಡೆ ಸರ್ವಿಸ್‌ ರಸ್ತೆ​ಯೂ ಪರಿ​ಪೂ​ರ್ಣ​ಗೊಂಡಿಲ್ಲ ಎಂದು ಕಿಡಿ ಕಾರಿದ್ದಾರೆ.

ಹೊಸ ತಾಲೂಕುಗಳಿಗೆ ಹಂತ-ಹಂತವಾಗಿ ಮೂಲಸೌಕರ್ಯ ಕಲ್ಪಿಸಲು ಬದ್ಧ: ಸಚಿವ ಕೃಷ್ಣ ಬೈರೇಗೌಡ

ಯಾವ್ಯಾವ ವಾಹನ ನಿಷೇಧ?: ಮೋಟಾರ್‌ ಸೈಕಲ್‌, ಸ್ಕೂಟರ್‌ ಸೇರಿ ದ್ವಿಚಕ್ರ ವಾಹನ. ಆಟೋರಿಕ್ಷಾ ಸೇರಿ ತ್ರಿಚಕ್ರವಾಹನ. ಮೋಟಾರು ಅಲ್ಲದ ವಾಹನಗಳು. ಟ್ರ್ಯಾಕ್ಟರ್‌ ಸಹಿತ ಕೃಷಿ ಆಧರಿತ ವಾಹನಗಳು. ಮಲ್ಟಿಆ್ಯಕ್ಸೆಲ್‌ ಹೈಡ್ರಾಲಿಕ್‌ ವಾಹನಗಳು. ಸೈಕಲ್‌ಗಳು. ಎತ್ತಿನಗಾಡಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಿಟ್‌ಕಾಯಿನ್ ಹಗರಣ: ಶ್ರೀಕಿ ಸೇರಿ ಮೂವರ ವಿರುದ್ಧ 3,500 ಪುಟಗಳ ಚಾರ್ಜ್‌ಶೀಟ್! ಹ್ಯಾಕರ್‌ಗಳಿಗೆ ಬಿಗಿಯಾದ ಇಡಿ ಪಾಶ
KSR Bengaluru ರೈಲ್ವೆ ನಿಲ್ದಾಣ ಅಭಿವೃದ್ಧಿ ಯೋಜನೆ, ಬರೋಬ್ಬರಿ ₹1370 ಕೋಟಿ ವೆಚ್ಚದಲ್ಲಿ ನಿಲ್ದಾಣ ವಿಶ್ವದರ್ಜೆಗೆ!