Omicron Threat: ಸಕ್ರಿಯ ಕೇಸ್‌: ಬೆಂಗ್ಳೂರು ದೇಶಕ್ಕೇ ನಂ.1..!

Kannadaprabha News   | Asianet News
Published : Dec 25, 2021, 04:17 AM ISTUpdated : Dec 25, 2021, 04:21 AM IST
Omicron Threat:  ಸಕ್ರಿಯ ಕೇಸ್‌: ಬೆಂಗ್ಳೂರು ದೇಶಕ್ಕೇ ನಂ.1..!

ಸಾರಾಂಶ

*  ಒಂದು ವಾರದಿಂದ ನಿತ್ಯ ಸರಾಸರಿ 240 ಮಂದಿಗೆ ಸೋಂಕು *  ದೆಹಲಿ, ಹೈದರಾಬಾದ್‌ಗಿಂತ 10 ಪಟ್ಟು ಅಧಿಕ *  ದೈನಂದಿನ ಕೊರೋನಾ ಕೇಸಲ್ಲೂ ದಕ್ಷಿಣ ಭಾರತದಲ್ಲೇ ನಂ.2  

ಜಯಪ್ರಕಾಶ್‌ ಬಿರಾದಾರ್‌

ಬೆಂಗಳೂರು(ಡಿ.25):  ದೇಶದ(India)  ನಗರ ಮತ್ತು ಮಹಾನಗರಗಳ ಪೈಕಿ ಸದ್ಯ ಅತಿ ಹೆಚ್ಚು ಕೊರೋನಾ ಸಕ್ರಿಯ ಸೋಂಕಿತರಿರುವ ನಗರ ನಮ್ಮ ಸಿಲಿಕಾನ್‌ ಸಿಟಿ ಬೆಂಗಳೂರು! ಹೌದು. ದೆಹಲಿ, ಮುಂಬೈ, ಪುಣೆ, ಚೆನ್ನೈ, ಹೈದರಾಬಾದ್‌ಗೆ ಹೋಲಿಸಿದರೆ ಅತಿ ಹೆಚ್ಚು 5,866 ಕೊರೋನಾ ಸಕ್ರಿಯ ಸೋಂಕಿತರು ಬೆಂಗಳೂರಿನಲ್ಲಿದ್ದು(Bengaluru), ಆಸ್ಪತ್ರೆ ಮತ್ತು ಮನೆಗಳಲ್ಲಿ ಚಿಕಿತ್ಸೆ/ ಆರೈಕೆಯಲ್ಲಿದ್ದಾರೆ. ಅಲ್ಲದೆ, ಕಳೆದ ಒಂದು ವಾರದಿಂದ ಹೊಸ ಪ್ರಕರಣಗಳು ಹೆಚ್ಚಳವಾಗುತ್ತಿದ್ದು, ಈ ಅವಧಿಯಲ್ಲಿ ದೆಹಲಿ, ಹೈದರಾಬಾದ್‌, ಚೆನ್ನೈಗಿಂತಲೂ ಹೆಚ್ಚು ಜನರಿಗೆ ಬೆಂಗಳೂರಿನಲ್ಲಿ ಸೋಂಕು ತಗುಲಿದೆ.

ನವೆಂಬರ್‌ನಲ್ಲಿ ನಿತ್ಯ ಸರಾಸರಿ 160 ಮಂದಿಯಲ್ಲಿ ಕೊರೋನಾ(Coronavirus) ಸೋಂಕು ದೃಢಪಡುತ್ತಿತ್ತು. ಆದರೆ, ಡಿಸೆಂಬರ್‌ನಲ್ಲಿ ಸೋಂಕು ಹೆಚ್ಚಳವಾಗಿದ್ದು, ನಿತ್ಯ ಸರಾಸರಿ 210 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಇದರಿಂದಾಗಿ ಸಕ್ರಿಯ ಸೋಂಕು ಪ್ರಕರಣಗಳು ಆರು ಸಾವಿರ ಗಡಿಗೆ ಹೆಚ್ಚಳವಾಗಿವೆ. ಮಹಾನಗರಗಳಿಗೆ ಹೋಲಿಸಿದರೆ ದೆಹಲಿ ಮತ್ತು ಹೈದರಾಬಾದ್‌ಗಿಂತಲೂ ಹತ್ತು ಪಟ್ಟು, ಚೆನ್ನೈಗಿಂತ ನಾಲ್ಕು ಪಟ್ಟು, ಮುಂಬೈ ಮತ್ತು ಪುಣೆಗಿಂತ ದುಪ್ಪಟ್ಟು ಸಕ್ರಿಯ ಸೋಂಕಿತರು ಬೆಂಗಳೂರಿನಲ್ಲಿ ಇದ್ದಾರೆ. ಇನ್ನು ಕೊರೋನಾ ಎರಡನೇ ಅಲೆಯಲ್ಲಿ ಮೂರು ಲಕ್ಷಕ್ಕೂ ಅಧಿಕ ಸಕ್ರಿಯ ಸೋಂಕಿತರನ್ನು ಹೊಂದುವ ಮೂಲಕ ಒಂದು ತಿಂಗಳ ಮಟ್ಟಿಗೆ ಬೆಂಗಳೂರು ಮೊದಲ ಸ್ಥಾನದಲ್ಲಿತ್ತು.

Corona Update: ಕರ್ನಾಟಕದಲ್ಲಿ ಹೆಚ್ಚಾಯ್ತು ಕೊರೋನಾ, ಇಲ್ಲಿದೆ ಡಿ.24ರ ಅಂಕಿ-ಸಂಖ್ಯೆ

ಸೋಂಕು ಪ್ರಕರಣಗಳು ಹೆಚ್ಚು:

ಕಳೆದ ಒಂದು ವಾರದಿಂದ ದೆಹಲಿಯಲ್ಲಿ ನಿತ್ಯ ಸರಾಸರಿ 140, ಹೈದರಾಬಾದ್‌ನಲ್ಲಿ 80, ಚೆನ್ನೈನಲ್ಲಿ 150 ಪ್ರಕರಣ ವರದಿಯಾಗುತ್ತಿವೆ. ಆದರೆ ಬೆಂಗಳೂರಿನಲ್ಲಿ ಇದು 240ರ ಆಸುಪಾಸಿನಲ್ಲಿದೆ. ಇವುಗಳನ್ನು ಹೊರತುಪಡಿಸಿ ತಿರುವನಂತಪುರದಲ್ಲಿ ನಿತ್ಯ ಸರಾಸರಿ 450, ಮುಂಬೈನಲ್ಲಿ 350, ಪುಣೆಯಲ್ಲಿ 400 ಪ್ರಕರಣಗಳು ವರದಿಯಾಗುತ್ತಿವೆ. ಈ ಮೂಲಕ ಬೆಂಗಳೂರಿನಲ್ಲಿ ದಕ್ಷಿಣ ಭಾರತದಲ್ಲಿ(South India) ಎರಡನೇ ಅತಿ ಹೆಚ್ಚು, ದೇಶದಲ್ಲಿ ನಾಲ್ಕನೇ ಅತಿ ಹೆಚ್ಚು ಪ್ರಕರಣಗಳು ಪತ್ತೆಯಾಗುತ್ತಿವೆ.

ಕೇವಲ 23 ಮಂದಿ ಆಸ್ಪತ್ರೆಯಲ್ಲಿ:

ಬಿಬಿಎಂಪಿ(BBMP) ವಾರ್‌ರೂಂ ಅಂಕಿ- ಅಂಶ ಪ್ರಕಾರ, ರಾಜಧಾನಿಯಲ್ಲಿರುವ 5,866 ಸಕ್ರಿಯ ಸೋಂಕಿತರಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ(Treatment) ಪಡೆಯುತ್ತಿರುವವರ ಸಂಖ್ಯೆ 23 ಮಾತ್ರ. ಇದರಲ್ಲಿ 18 ಮಂದಿ ಆಕ್ಸಿಜನ್‌ ಹಾಸಿಗೆಯಲ್ಲಿ, ಮೂರು ಮಂದಿ ತುರ್ತು ನಿಗಾ ಘಟಕದಲ್ಲಿದ್ದಾರೆ. ಮಿಕ್ಕ 5843 ಸೋಂಕಿತರು ಹೋಂ ಐಸೋಲೇಷನ್‌ನಲ್ಲಿ ಆರೈಕೆಯಲ್ಲಿದ್ದಾರೆ. ಸೋಂಕಿತರ ಪೈಕಿ ಬಹುತೇಕರಿಗೆ ಸೋಂಕಿನ ಲಕ್ಷಣಗಳಿಲ್ಲ. ಹೀಗಾಗಿಯೇ ಆಸ್ಪತ್ರೆ ದಾಖಲಾತಿಗಳು ಕಡಿಮೆ ಇವೆ ಎನ್ನುತ್ತಾರೆ ಬಿಬಿಎಂಪಿ ಆರೋಗ್ಯ ಅಧಿಕಾರಿಗಳು.

ಶೇ.70ರಷ್ಟು ಕೇಸ್‌ ಬೆಂಗಳೂರಿನಲ್ಲಿ ಪತ್ತೆ:

ರಾಜ್ಯದಲ್ಲಿ(Karnataka) ನಿತ್ಯ ಪತ್ತೆಯಾಗುವ ಕೊರೋನಾ ಹೊಸ ಸೋಂಕಿತರಲ್ಲಿ ಶೇ.70ರಷ್ಟುಬೆಂಗಳೂರು ಒಂದರಲ್ಲಿಯೇ ಪತ್ತೆಯಾಗುತ್ತಿವೆ. ರಾಜ್ಯದಲ್ಲಿ ಕಳೆದ ಒಂದು ವಾರದಿಂದ 300 ಪ್ರಕರಣಗಳು ಪತ್ತೆಯಾದರೆ ಇದರಲ್ಲಿ 220-230 ಬೆಂಗಳೂರಿಗೆ ಸೇರಿವೆ. ಇನ್ನು ರಾಜ್ಯದ ಒಟ್ಟಾರೆ ಸಕ್ರಿಯ ಸೋಂಕಿತರ ಸಂಖ್ಯೆ 7251 ಇದೆ. ಇದರಲ್ಲಿ 1385 ಇತರೆ 29 ಜಿಲ್ಲೆಗಳಲ್ಲಿದ್ದು, 5866 (ಶೇ. 80ರಷ್ಟು) ಬೆಂಗಳೂರು ನಗರವೊಂದರಲ್ಲಿಯೇ ಇವೆ.

Delmicron Variant: ಪಾಶ್ಚಿಮಾತ್ಯ ದೇಶಗಳಲ್ಲಿ ಹೊಸ ರೂಪಾಂತರಿ: ಕೋವಿಡ್‌ ಹೆಚ್ಚಳಕ್ಕೆ ಡೆಲ್ಮಿಕ್ರೋನ್ ಕಾರಣ!

ಟೆಕ್ಕಿಗಳು ಹೆಚ್ಚಿರುವ ಹೊರವಲಯದಲ್ಲಿ ಕೊರೋನಾ ಅಧಿಕ

ಬೆಂಗಳೂರು ನಗರದ ಕೇಂದ್ರ ಭಾಗಗಳಿಗಿಂತಲೂ ಹೊರವಲಯಗಳಾದ ಎಲೆಕ್ಟ್ರಾನಿಕ್‌ ಸಿಟಿ, ಬೇಗೂರು, ಸಿಂಗಸಂದ್ರ, ಬೆಳ್ಳಂದೂರು, ವರ್ತೂರು, ವೈಟ್‌ಫೀಲ್ಡ್‌, ಮಹದೇವಪುರದಲ್ಲಿ ಹೆಚ್ಚು ಕೊರೋನಾ ಸೋಂಕು ಪ್ರಕರಣಗಳು ವರದಿಯಾಗುತ್ತಿವೆ. ಈ ಪ್ರದೇಶಗಳಲ್ಲಿ ಟೆಕ್ಕಿಗಳು ಹೆಚ್ಚು ವಾಸವಿದ್ದು, ಹೊರದೇಶ ಮತ್ತು ಹೊರರಾಜ್ಯಗಳೊಂದಿಗೆ ಸಂಪರ್ಕ ಹೆಚ್ಚಿರುತ್ತದೆ. ಹೀಗಾಗಿಯೇ ಹೆಚ್ಚು ಮಂದಿ ಕೊರೋನಾ ಸೋಂಕಿಗೊಳಗಾಗುತ್ತಿದ್ದಾರೆ ಎಂದು ಸ್ಥಳೀಯ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.

ಎಲ್ಲಿ ಎಷ್ಟು ಕೇಸ್‌?

ಬೆಂಗಳೂರು - 5,866
ತಿರುವನಂತಪುರ - 4,800
ಮುಂಬೈ - 2,813
ಪುಣೆ - 1,813
ಚೆನ್ನೈ - 1,320
ದೆಹಲಿ - 610
ಹೈದರಾಬಾದ್‌ - 577

ಕಳೆದ ಒಂದು ತಿಂಗಳಿಂದ ನಿತ್ಯ 200 ಆಸುಪಾಸಿನಲ್ಲಿ ಕೊರೋನಾ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಹೀಗಾಗಿಯೇ ಸಕ್ರಿಯ ಸೋಂಕಿತರ ಸಂಖ್ಯೆ ಐದು ಸಾವಿರಕ್ಕಿಂತ ಹೆಚ್ಚಿದೆ. ಇವರಲ್ಲಿ ಶೇ.98ರಷ್ಟುಮಂದಿ ಹೆಚ್ಚಿನ ಸೋಂಕು ಲಕ್ಷಣಗಳಿಲ್ಲದೆ, ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ ಅಂತ ಬಿಬಿಎಂಪಿ (ಆರೋಗ್ಯ) ವಿಶೇಷ ಆಯುಕ್ತ ಡಾ.ತ್ರಿಲೋಕ್‌ಚಂದ್ರ ತಿಳಿಸಿದ್ದಾರೆ.  
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದಶದಿಕ್ಕುಗಳಿಂದ ಕರ್ನಾಟಕಕ್ಕೆ ಡ್ರಗ್ಸ್‌ ಗಂಡಾಂತರ
Karnataka News Live: ರಾಮನಗರದ ರೇವಣಸಿದ್ದೇಶ್ವರ ಬೆಟ್ಟದಲ್ಲಿ ದುರಂತ - ದೇವರ ದರ್ಶನಕ್ಕೂ ಮುನ್ನವೇ ಕಂದಕ ಸೇರಿದ ಭಕ್ತ!