ಪ್ರಧಾನಿ ಮೋದಿ ಆಗಮನಕ್ಕೆ BBMP ಖರ್ಚು ಮಾಡಿದ್ದಿಷ್ಟು...!

Published : Jun 21, 2022, 12:40 PM ISTUpdated : Jun 21, 2022, 12:48 PM IST
 ಪ್ರಧಾನಿ ಮೋದಿ ಆಗಮನಕ್ಕೆ BBMP ಖರ್ಚು ಮಾಡಿದ್ದಿಷ್ಟು...!

ಸಾರಾಂಶ

* ಕರ್ನಾಟಕ ಪ್ರವಾಸ ಮುಗಿಸಿ ವಾಸಪ್ ದೆಹಲಿಗೆ ತೆರಳಿದ ಮೋದಿ * ಸೋಮವಾರ ಬೆಂಗಳೂರಿಗೆ ಬಂದಿದ್ದ ಮೋದಿ ಮಂಗಳವಾರ ಮೈಸೂರಿನಿಂದ ವಾಪಸ್ * ಇನ್ನು ನರೇಂದ್ರ ಮೋದಿಗಾಗಿ ಬಿಬಿಎಂಪಿ ಖರ್ಚು ಮಾಡಿದ್ದೇಷ್ಟು ಗೊತ್ತಾ?  

ಬೆಂಗಳೂರು, (ಜೂನ್.21): ಪ್ರಧಾನಿ ನರೇಂದ್ರ ಮೋದು ಅವರ ಎರಡು ದಿನದ ಕರ್ನಾಟಕ ಪ್ರವಾಸ ಅಂತ್ಯವಾಗಿದ್ದು, ಇಂದು(ಮಂಗಳವಾರ) ಮೈಸೂರಿನಿಂದ ನವದೆಹಲಿಗೆ ತೆರಳಿದರು.

ನಿನ್ನೆ (ಸೋಮವಾರ) ಬೆಂಗಳೂರಿಗೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿ ಅವರು ಸಂಜೆ ಮೈಸೂರಿಗೆ ಹೋದ್ರು. ಇನ್ನು ಒಂದು ದಿನ ಬೆಂಗಳೂರಿನಲ್ಲಿ  ಇದ್ದ ಮೋದಿಗಾಗಿ ಹತ್ತಾರು ಕೋಟೆ ಖರ್ಚಾಗಿದೆ.

ಮೋದಿ ಅವರು ಕೇವಲ 4 ಗಂಟೆ ಮಾತ್ರ ಬೆಂಗಳೂರಿನಲ್ಲಿದ್ದರು. ಇದಕ್ಕೆ ಬಿಬಿಎಂಪಿ ಬರೋಬ್ಬರಿ 14 ಕೋಟಿ ಖರ್ಚು ಮಾಡಿದೆ   ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಆಗಮಿಸುವುದಕ್ಕೆ ಭರ್ಜರಿ ಸಿದ್ದತೆ ನಡೆಸಲಾಗಿತ್ತು. ಸಿಟಿಯ ಪ್ರತಿ ರಸ್ತೆ ರಸ್ತೆಗಳನ್ನು ರಿಪೇರಿ ಮಾಡಿ ಪಳ-ಪಳ ಹೊಳೆಯುವಂತೆ ಮಾಡಲಾಗಿದೆ. ಇದರಿಂದ ಕೋಟಿ-ಕೋಟಿ ಖರ್ಚು ಮಾಡಲಾಗಿದೆ.

2 ದಿನದ ರಾಜ್ಯ ಪ್ರವಾಸ ಅಂತ್ಯ: ಮೈಸೂರಿನಿಂದ ಕೇರಳ ಬದಲಿಗೆ ದೆಹಲಿಯತ್ತ ಹೊರಟ ಮೋದಿ

ಈ ಬಗ್ಗೆ ಮಾಹಿತಿ ನೀಡಿದ  ಬಿಬಿಎಂಪಿ ಆಯುಕ್ತರ ತುಷಾರ್‌ ಗಿರಿನಾಥ್‌, ಪ್ರಧಾನಿ ರಾಜ್ಯಕ್ಕೆ ಬರುತ್ತಿರೋದೆ ನಮಗೆಲ್ಲ ಸಂತೋಷದ ವಿಚಾರವಾಗಿದೆ. ಆ ನಿಟ್ಟಿನಲ್ಲಿ ತುರ್ತು ಸಂದರ್ಭದಲ್ಲಿ ಅನುದಾನ ಬಳಸಬಹುದಾದ ʻವಿವೇಚನ ಅನುದಾನದಡಿʼ ಫುಟ್‌ಫಾಥ್‌ ರಸ್ತೆ, ಕಾಮಗಾರಿ, ಡಾಂಬರೀಕರಣ, ಚರಂಡಿ, ಊಟ, ವಸತಿ ಕಲ್ಪಿಸಲು ನಿಟ್ಟಿನಲ್ಲಿ ಬರೊಬ್ಬರಿ 14 ಕೋಟಿ ಖರ್ಚು ಮಾಡಲಾಗಿದೆ ಎಂದು ತಿಳಿಸಿದರು.

ಇನ್ನೂ ಮೈಸೂರಿನಲ್ಲೂ ರಸ್ತೆಗಳಿಗೆ ಹೊಸ ರೂಪವನ್ನೆ ನೀಡಲಾಗಿತ್ತು. ವಸತಿ, ಯೋಗ ಕಾರ್ಯಕ್ರಮಗಳ ಸಿದ್ಧತೆ ಉಪಹಾರ ಸೇರಿದಂತೆ ಬರೊಬ್ಬರಿ 20 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಒಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕದಲ್ಲಿ ಒಟ್ಟು 20 ಗಂಟೆಗಳ ಕಾಲ ಇದ್ದು, ಇದಕ್ಕೆ 34 ಕೋಟೆ ರೂಪಾಯಿಗಳನ್ನ ಖರ್ಚು ಮಾಡಲಾಗಿದೆ.

ನಿನ್ನೆ(ಸೋಮವಾರ) ಬೆಂಗಳೂರಿಗೆ ಬಂದಿದ್ದ ಮೋದಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸಂಜೆ ಮೈಸೂರಿಗೆ ಭೇಟಿ ನೀಡಿದ್ರು. ಮೈಸೂರಿನಲ್ಲೂ ಸಹ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು.  ಬಹುಸಾವಿರ ಕೋಟಿ ರೂ.ಗಳ ಮೊತ್ತದ ಯೋಜನೆಗಳಿಗೆ ಅಡಿಗಲ್ಲು ಮತ್ತು ಉದ್ಘಾಟನೆಗಳನ್ನು ಮಾಡಿದ್ರು. ಅಲ್ಲದೇ ಇಂದು ಯೋಗದಲ್ಲಿ ಭಾಗವಹಿಸಿ  ವಿಶೇಷ ವಿಮಾನದಲ್ಲಿ ದೆಹಲಿಗೆ ತೆರಳಿದರು.

ಜೂನ್ 20 ಮಧ್ಹಾನ 12ಕ್ಕೆ ಯಲಹಂಕದ ವಾಯುನೆಲೆಗೆ ಬಂದಿಳಿದಿದ್ದರು.ಬಳಿಕ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಇನ್ನು ಮೋದಿ ಆಗಮನಕ್ಕೂ ಒಂದು ವಾರಕ್ಕೂ ಮೊದಲೇ ಬಿಬಿಎಂಪಿ ಆಯಾ ರಸ್ತೆಗಳಳನ್ನ ರಿಪೇರಿ ಮಾಡಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಿರಿಯಾನಿ ಹೋಟೆಲ್ ಕುಟುಂಬದ ಸಾಮೂಹಿಕ ಆತ್ಮ*ಹತ್ಯೆ ಕೇಸಿಗೆ ಟ್ವಿಸ್ಟ್; ವಿಷ ಸೇವಿಸದ ಅಜ್ಜಿ ಸತ್ತಿದ್ಹೇಗೆ!
'ಏಯ್, ಹಾಗೆಲ್ಲಾ ನಾಟಿ ಕೋಳಿ ಬಿಡಬಾರದು, ಏನೂ ಆಗೊಲ್ಲ ತಿನ್ನಬೇಕು': ಆರ್. ಅಶೋಕ್‌ಗೆ ಸಿದ್ದರಾಮಯ್ಯ ಕಿವಿಮಾತು!