59ನೇ ವರ್ಷಕ್ಕೆ ಕಂಟಕ: ಅಪ್ಪನೇ ನುಡಿದಿದ್ದರು ಸಾವಿನ ಭವಿಷ್ಯ!

Published : Nov 13, 2018, 08:36 AM ISTUpdated : Nov 13, 2018, 12:53 PM IST
59ನೇ ವರ್ಷಕ್ಕೆ ಕಂಟಕ: ಅಪ್ಪನೇ ನುಡಿದಿದ್ದರು ಸಾವಿನ ಭವಿಷ್ಯ!

ಸಾರಾಂಶ

‘ಒಮ್ಮೆ ನನ್ನ ತಂದೆ ನಾರಾಯಣ ಶಾಸ್ತ್ರಿಗಳು ಮಗನೇ ನಿನಗೆ ರಾಜಯೋಗವಿದೆ ಎಂದು ಹೇಳಿದ್ದರು. ಆದರೆ, 59ನೇ ವರ್ಷಕ್ಕೆ ಒಂದು ಕಂಟಕವಿದೆ. ಅದರಿಂದ ಪಾರಾದರೆ ಮಾತ್ರ ಬಹುಕಾಲ ಬದುಕುತ್ತೀಯಾ ಎಂದು ಹೇಳಿದ್ದರು’ ಎಂದು ಸ್ವತಃ ಅನಂತಕುಮಾರ್‌ ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದರು.

ಅನಂತ್ ಕುಮಾರ್‌ ಅವರ ತಂದೆ ರೈಲ್ವೆ ಉದ್ಯೋಗಿಯಾಗಿದ್ದರೂ, ಮನೆತನದ ಪರಂಪರೆಯಂತೆ ಜ್ಯೋತಿಷ್ಯ ಕೂಡ ಹೇಳುತ್ತಿದ್ದರು. ಅವರೇ ಒಮ್ಮೆ ಮಗನ ಜಾತಕ ನೋಡಿ ‘ನಿನಗೆ 59ನೇ ವರ್ಷಕ್ಕೆ ಕಂಟಕವಿದೆ’ ಎಂದು ಹೇಳಿದ್ದರು. ಅದರಂತೆ 59ನೇ ವರ್ಷಕ್ಕೆ ಅನಂತಕುಮಾರ್‌ ವಿಧಿವಶರಾಗಿದ್ದಾರೆ.

‘ಒಮ್ಮೆ ನನ್ನ ತಂದೆ ನಾರಾಯಣ ಶಾಸ್ತ್ರಿಗಳು ಮಗನೇ ನಿನಗೆ ರಾಜಯೋಗವಿದೆ ಎಂದು ಹೇಳಿದ್ದರು. ಆದರೆ, 59ನೇ ವರ್ಷಕ್ಕೆ ಒಂದು ಕಂಟಕವಿದೆ. ಅದರಿಂದ ಪಾರಾದರೆ ಮಾತ್ರ ಬಹುಕಾಲ ಬದುಕುತ್ತೀಯಾ ಎಂದು ಹೇಳಿದ್ದರು’ ಎಂದು ಸ್ವತಃ ಅನಂತ್ ಕುಮಾರ್‌ ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದರು.

"

ಇನ್ನು, ಅನಂತ್ ಕುಮಾರ್‌ ಅವರ ತಾಯಿ ಗಿರಿಜಾ ಶಾಸ್ತ್ರಿ ಕೂಡ ಮಗ ಕೇಂದ್ರ ಸಚಿವನಾಗುತ್ತಾನೆ ಎಂದು ಭವಿಷ್ಯ ನುಡಿದಿದ್ದರು! ಅನಂತಕುಮಾರ್‌ 1989ರಲ್ಲಿ ತೇಜಸ್ವಿನಿ ಅವರನ್ನು ಪ್ರೀತಿಸಿ ವಿವಾಹ ಆಗಲು ನಿಶ್ಚಯಿಸಿದಾಗ, ತಾಯಿ ಗಿರಿಜಾ ಶಾಸ್ತ್ರಿ ಬೀಗರ ಎದುರು ಹೋಗಿ ‘ಚಿಂತೆ ಮಾಡಬೇಡಿ, ನನ್ನ ಮಗ ಕೇಂದ್ರದಲ್ಲಿ ಮಂತ್ರಿ ಆಗುತ್ತಾನೆ’ ಎಂದು ಹೇಳಿದ್ದರು ಎಂದು ಆಪ್ತರು ನೆನಪಿಸಿಕೊಳ್ಳುತ್ತಾರೆ.

ಮದುವೆ ಆದ ನಂತರ ಅನಂತ್‌ ಬಿಜೆಪಿ ಕಟ್ಟಲು ಊರೂರು ಅಲೆಯುತ್ತಿದ್ದರೆ, ತೇಜಸ್ವಿನಿ ಕುಟುಂಬ ನಡೆಸಲು ನೌಕರಿ ಮಾಡುತ್ತಿದ್ದರು. 1996ರಲ್ಲಿ ಸಂಸದರಾದ ಅನಂತ್‌ ಮಂತ್ರಿ ಆಗಿದ್ದು 39ನೇ ವರ್ಷಕ್ಕೆ. ತಾಯಿ ಗಿರಿಜಾ ಶಾಸ್ತ್ರಿ ಕೊಟ್ಟಭಗವದ್ಗೀತೆ ಪುಸ್ತಕವನ್ನು ಜತನದಿಂದ ಇಟ್ಟುಕೊಂಡಿದ್ದ ಅನಂತ್‌, ಆಸ್ಪತ್ರೆಯ ಕೊನೆಯ ದಿನಗಳವರೆಗೂ ಅದನ್ನು ತಪ್ಪದೆ ಓದುತ್ತಿದ್ದರು.

-ಪ್ರಶಾಂತ್‌ ನಾತು, ನವದೆಹಲಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಬಿರಿಯಾನಿ ಹೋಟೆಲ್ ಕುಟುಂಬದ ಸಾಮೂಹಿಕ ಆತ್ಮ*ಹತ್ಯೆ ಕೇಸಿಗೆ ಟ್ವಿಸ್ಟ್; ವಿಷ ಸೇವಿಸದ ಅಜ್ಜಿ ಸತ್ತಿದ್ಹೇಗೆ!
'ಏಯ್, ಹಾಗೆಲ್ಲಾ ನಾಟಿ ಕೋಳಿ ಬಿಡಬಾರದು, ಏನೂ ಆಗೊಲ್ಲ ತಿನ್ನಬೇಕು': ಆರ್. ಅಶೋಕ್‌ಗೆ ಸಿದ್ದರಾಮಯ್ಯ ಕಿವಿಮಾತು!