Bengaluru Rains: ಮೇ ತಿಂಗಳಲ್ಲಿ ಸಾರ್ವಕಾಲಿಕ ದಾಖಲೆ ಮಳೆ, 307.9 ಮಿಮೀ ವರ್ಷಧಾರೆ!

Kannadaprabha News   | Kannada Prabha
Published : May 27, 2025, 08:13 AM ISTUpdated : May 27, 2025, 10:31 AM IST
Bengaluru rains

ಸಾರಾಂಶ

ಮುಂಗಾರು ಪೂರ್ವ ಮತ್ತು ಮುಂಗಾರು ಮಳೆಯಿಂದಾಗಿ ಬೆಂಗಳೂರಿನಲ್ಲಿ ಮೇ ತಿಂಗಳಲ್ಲಿ ದಾಖಲೆಯ 307.9 ಮಿಮೀ ಮಳೆಯಾಗಿದೆ. 2023ಕ್ಕಿಂತ ಹೆಚ್ಚು ಮಳೆಯಾಗಿದ್ದು, ಮುಂದಿನ ದಿನಗಳಲ್ಲಿ ಮಳೆ ಕಡಿಮೆಯಾಗುವ ಸಾಧ್ಯತೆಗಳಿವೆ.

ಬೆಂಗಳೂರು (ಮೇ.27) : ಮುಂಗಾರು ಪೂರ್ವ ಮತ್ತು ಮುಂಗಾರು ಮಳೆಯ ಅಬ್ಬರದಿಂದಾಗಿ ಬೆಂಗಳೂರಿನಲ್ಲಿ ಮೇ ತಿಂಗಳ ದಾಖಲೆಯ 307.9 ಮಿಮೀ ಮಳೆಯಾಗಿದೆ.

ಅರಬ್ಬಿ ಸಮುದ್ರದಲ್ಲಿ ವಾಯಭಾರ ಕುಸಿತ, ಪೂರ್ವ ಮುಂಗಾರಿನ ಜತೆಗೆ ಇದೀಗ ಮುಂಗಾರಿನ ಕಾರಣದಿಂದಾಗಿ ಕಳೆದ 10 ದಿನಗಳಿಂದ ಬೆಂಗಳೂರಿನಲ್ಲಿ ಸತತವಾಗಿ ಮಳೆಯಾಗಿದೆ. ಅದರಲ್ಲೂ ಕಳೆದ ಮೇ 18-19ರಂದು ಸುರಿದ ಭಾರೀ ಮಳೆಯಿಂದಾಗಿ ಬೆಂಗಳೂರು ತತ್ತರಿಸಿದೆ. ಅದಾದ ನಂತರವೂ ನಿರಂತರವಾಗಿ ಮಳೆಯಾಗಿದೆ. ಹೀಗೆ ನಿರೀಕ್ಷೆಗೂ ಮೀರಿ ಮಳೆಯಾದ ಪರಿಣಾಮ ಈ ಬಾರಿಯ ಮೇ ತಿಂಗಳಲ್ಲಿ ಈ ಹಿಂದಿಗಿಂತ ಅತಿ ಹೆಚ್ಚಿನ ಮಳೆ ದಾಖಲಾಗಿದೆ.

ಈ ಹಿಂದೆ 2023ರ ಮೇ ತಿಂಗಳಲ್ಲಿ 305.4 ಮಿಮೀ ಮಳೆ ಸುರಿದಿದ್ದೇ ಅತಿಹೆಚ್ಚಿನ ಪ್ರಮಾಣವಾಗಿತ್ತು. ಅದಕ್ಕೂ ಮುಂಚೆ 2022ರಲ್ಲಿ 270.2 ಮಿಮೀ ಮಳೆ ಸುರಿದಿತ್ತು. ಅದನ್ನು ಹೊರತುಪಡಿಸಿದರೆ ಯಾವುದೇ ವರ್ಷದ ಮೇ ತಿಂಗಳಲ್ಲಿ ಮಳೆಯ ಪ್ರಮಾಣ 250 ಮಿಮೀ ದಾಟಿರಲಿಲ್ಲ. ಈ ವರ್ಷ ಮೇ 1ರಿಂದ ಮೇ 26ರವರೆಗೆ ಒಟ್ಟು 307.9 ಮಿಮೀ ಮಳೆ ಸುರಿದಿದೆ. ಮೇ ತಿಂಗಳ ಅಂತ್ಯಕ್ಕೆ ಇನ್ನೂ 5 ದಿನಗಳಿರುವ ಕಾರಣ ಮಳೆಯ ಪ್ರಮಾನ ಮತ್ತಷ್ಟು ಹೆಚ್ಚುವ ಸಾಧ್ಯತೆಗಳಿವೆ.

ಇಂದಿನಿಂದ ಬಿಡುವು ನೀಡಲಿರುವ ಮಳೆ

ಬೆಂಗಳೂರಿನಲ್ಲಿ ಸತತ 10 ದಿನಗಳವರೆಗೆ ಭಾರೀ ಮಳೆಯಾದ ನಂತರ ಮಂಗಳವಾರದಿಂದ ಮಳೆಯ ಪ್ರಮಾಣ ಕಡಿಮೆಯಾಗುವ ಸಾಧ್ಯತೆಗಳಿವೆ. ಮುಂದಿನ 7 ದಿನಗಳಲ್ಲಿ ಬುಧವಾರ ಸಾಧಾರಣ ಮಳೆಯಾಗುವ ಸಾಧ್ಯತೆಗಳಿದ್ದು, ಅದನ್ನು ಹೊರತುಪಡಿಸಿದರೆ ಉಳಿದ ದಿನಗಳಲ್ಲಿ ಮಳೆಯಾಗುವುದಿಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ. ಆದರೆ, ಈ ಏಳು ದಿನಗಳ ಕಾಲ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿರಲಿದ್ದು, ಅದನ್ನು ಹೊರತುಪಡಿಸಿ ತುಂತುರು ಮಳೆಯಾಗುವ ನಿರೀಕ್ಷೆಯಿದೆ.

ಈವರೆಗೆ ಮೇ ತಿಂಗಳಲ್ಲಿ ಅತಿಹೆಚ್ಚು ಮಳೆ ಸುರಿದ ವರದಿ

ವರ್ಷ ಮಳೆಯ ಪ್ರಮಾನ

  • 2025 ಮೇ 307.9 ಮಿಮೀ
  • 2023 ಮೇ 305.4 ಮಿಮೀ
  • 2022 ಮೇ 270.4 ಮಿಮೀ
  • 2017 ಮೇ 241.9 ಮಿಮೀ
  • 2018 ಮೇ 239.8 ಮಿಮೀ
  • 2024 ಮೇ 181.5 ಮಿಮೀ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!
ಐಷಾರಾಮಿ ಕಾರ್ಟಿಯರ್ ವಾಚ್‌: ಲೋಕಾಯುಕ್ತ ಅಫಿಡವಿಟ್ ರಿವೀಲ್ ಮಾಡಿದ ಡಿ.ಕೆ. ಶಿವಕುಮಾರ್!