
ಸಂಕ್ರಾಂತಿ ಬಳಿಕ ನಡೆಯುತ್ತಾ ಸಿಂಹಾಸನ ಕ್ರಾಂತಿ? ಕನಕಪುರದ ಅಪೂರ್ವ ಸಹೋದರರ ಮರ್ಮ ಸಂದೇಶ! ಪ್ರಾರ್ಥನೆಯ ಬಲ. ಪ್ರಯತ್ನದ ಪವರ್. ಸಿಂಹಾಸನಕ್ಕೆ ರಹದಾರಿ. ಪಟ್ಟ ಪ್ರಾಪ್ತಿಗೆ ಬಂಡೆ ಬ್ರದರ್ಸ್ ಡಬಲ್ ಬ್ಯಾರೆಲ್.ಅರಸೊತ್ತಿಗೆ ಅಖಾಡ. ವಿಮಾನ ನಿಲ್ದಾಣದಲ್ಲಾಯ್ತಾ ಮಹಾ ನಿರ್ಧಾರ? ವರುಣವೀರ. ಕನಕಾಧಿಪತಿ. ಯಾರಿಗೆ ಅಧಿನಾಯನಕನ ಅಭಯ? ವರ್ಷದ ಮೊದಲ ಹಬ್ಬದ ಬಳಿಕ ಸಿದ್ದು-ಡಿಕೆ ಭವಿಷ್ಯದಲ್ಲಾಗೋ ಬದಲಾವಣೆ ಏನು? ಯಾರ ಜೊತೆಗಿದೆ ಗ್ರಹಬಲದ ಶಕ್ತಿ.?
ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಮಂಗಳವಾರ ಭೇಟಿಯಾಗಿ ಪ್ರತ್ಯೇಕ ಮಾತುಕತೆ ನಡೆಸಿದ ಬೆನ್ನಲ್ಲೇ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಅವರ ಸಹೋದರ, ಮಾಜಿ ಸಂಸದ ಡಿ.ಕೆ. ಸುರೇಶ್ ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಕುತೂಹಲ ಮೂಡಿಸುವ ಪೋಸ್ಟರ್ ಹಾಕಿದ್ದಾರೆ. ಡಿ.ಕೆ.ಶಿವಕುಮಾರ್ ತಮ್ಮ ಎಕ್ಸ್ ಖಾತೆಯಲ್ಲಿ, ‘ಪ್ರಯತ್ನ ವಿಫಲವಾದರೂ ಪ್ರಾರ್ಥನೆ ವಿಫಲವಾಗುವುದಿಲ್ಲ’ ಎಂಬ ಪೋಸ್ಟರ್ ಹಂಚಿಕೊಂಡಿದ್ದಾರೆ. ಅವರಂತೆಯೇ ಸಹೋದರ ಡಿ.ಕೆ.ಸುರೇಶ್ ಅವರು, ‘ಯಶಸ್ಸಿನ ಮೊದಲ ಹೆಜ್ಜೆಯೇ ಪ್ರಯತ್ನ. ಸತತ ಪ್ರಯತ್ನದ ಫಲವೇ ಯಶಸ್ಸು’ ಎಂಬ ಪೋಸ್ಟರ್ ಹಾಕಿದ್ದಾರೆ.
ಕಾಂಗ್ರೆಸ್ ಪಕ್ಷ ದೇವಸ್ಥಾನ ಇದ್ದ ಹಾಗೆ. ಕಾಂಗ್ರೆಸ್ ಪಕ್ಷದ ಕಚೇರಿಗೆ ಹೋದಾಗ ಕೈ ಮುಗಿದು ಬರ್ತಾ ಇರ್ತೇವೆ. ಮುಖ್ಯಮಂತ್ರಿ ಸಿಂಹಾಸನವನ್ನು ತಮ್ಮದಾಗಿಸಿಕೊಳ್ಳೋಕೆ ಡಿಕೆಶಿ ಎಲ್ಲಿ ಯಾರ ಬಳಿ ಪ್ರಾರ್ಥನೆ ಮಾಡಿಕೊಳ್ತಾ ಇದ್ದಾರೆ ಅನ್ನೋದಕ್ಕೆ ಇಷ್ಟು ಸಾಕು. ಒಂದು ಕಡೆ ಅಣ್ಣ ಪ್ರಾರ್ಥನೆಯ ದಾಳ ಉರುಳಿಸಿದ್ರೆ ತಮ್ಮ ಡಿಕೆ ಸುರೇಶ್ ಪ್ರಯತ್ನದ ದಾಳ ಉರುಳಿಸಿದ್ದಾರೆ.
ಹಾಗಿದ್ರೆ ಕರುನಾಡಿನ ಸಿಂಹಾಸನ ಸಮರದ ಮುಂದಿನ ಭವಿಷ್ಯವೇನು? ಇನ್ನೆಷ್ಟು ತಿಂಗಳು ಈ ಜಿದ್ದಾಜಿದ್ದಿ ಹೀಗೆ ಇರುತ್ತೆ? ಈ ಬಗ್ಗೆ ಜೋತಿಷ್ಯ ಹೇಳ್ತಾ ಇರೋದೇನು?
ವರುಣವೀರ ಸಿದ್ದರಾಮಯ್ಯ. ಕನಕಾಧಿಪತಿ ಡಿ.ಕೆ.ಶಿವಕುಮಾರ್. ಜಿದ್ದಿಗೆ ಬಿದ್ದವರಲ್ಲಿ ಯಾರ ಜೊತೆಗಿದೆ ಗ್ರಹಬಲದ ಶಕ್ತಿ? ಸಿಂಹಾಸನ ಸಂಘರ್ಷ ಕಾರ್ಮೋಡವು ತಿಳಿಯಾಗೋದು ಯಾವಾಗ? ಅದನ್ನ ತಿಳಿಯಾಗಿಸೋಕೆ ಇರೋ ಮಾರ್ಗ ಯಾವುದು? ಸಂಕ್ರಾಂತಿ ನಂತ್ರ ಹೇಗಿದೆ ಸಿಎಂ, ಡಿಸಿಎಂ ಭವಿಷ್ಯ.?
ಹಾಗಿದ್ರೆ, ಏರ್ಪೋರ್ಟ್ನಲ್ಲಿ ಸಿದ್ದು-ಡಿಕೆ ಇಬ್ಬರಿಗೂ ರಾಗಾ ಕೊಟ್ಟ ಸಂದೇಶವೇನು? ಮೈಸೂರು ಏರ್ಪೋರ್ಟ್ನಲ್ಲಿ ರಾಹುಲ್ ಗಾಂಧಿಯೆದುರು ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರು ಹಾಕಿರೋ ಪಟ್ಟುಗಳೇನು? ಕೆಲವೇ ಕೆಲವು ನಿಮಿಷಗಳಲ್ಲಿ ನಡೆದ ಮಾತುಕತೆಯಾದ್ರೂ ಏನು.? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೈಲ್ಸ್.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ