
ಬೆಂಗಳೂರು (ಜು.15): ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಜಾಹೀರಾತು ಫಲಕಗಳಾದ ಬ್ಯಾನರ್, ಬಂಟಿಂಗ್ಸ್, ಬಿಲ್ಪೋರ್ಡ್ ಪ್ರದರ್ಶನ ನಿಷಿದ್ಧವಾಗಿದೆ. ಆದರೆ, ಈಗ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಹೊಸ ಜಾಹೀರಾತು ಕಾಯ್ದೆ ಜಾರಿಗೊಳಿಸಿ, ಜಾಹೀರಾತು ಪಲಕಗಳ ಅಳವಡಿಕೆಗೆ ಅವಕಾಶ ಮಾಡಿಕೊಡಲಾಗುತ್ತಿದೆ.
ಬ್ರಾಂಡ್ ಬೆಂಗಳೂರು ಕುರಿತು ಸಾರ್ವಜನಿಕರಿಂದ ಸಲಹೆಗಳನ್ನು ಸ್ವೀಕರಿಸಿದ ನಂತರ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಬೆಂಗಳೂರು ನಿವಾಸಿಗಳ ಕ್ಷೇಮಾಭಿವೃದ್ಧಿ ಮತ್ತು ನಾಗರಿಕ ಸಂಘಗಳ ಪ್ರತಿನಿಧಿಗಳ ಜತೆ ಸಂವಾದ ನಡೆಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು. ಬೆಂಗಳೂರಿನ ಜನರಿಂದ ಅನೇಕ ಸಲಹೆ ಸೂಚನೆ ಬಂದಿದ್ದಾವೆ. ಸರ್ಕಾರ, ಖಾಸಗಿ ಸಂಸ್ಥೆಗಳಿಂದ ಸೂಚನೆಗಳು ಕೂಡ ಬಂದಿವೆ. ಫೈಬರ್ ಕನೆಕ್ಷನ್ ನಿಂದ ಬೆಂಗಳೂರು ಯಾವ ರೀತಿ ಹಾಳಾಗ್ತಿದೆ ಅನ್ನೋದ್ರ ಬಗ್ಗೆ ಹೇಳಿದ್ದಾರೆ. ಜಾಹಿರಾತು ಬೆಂಗಳೂರಿನಲ್ಲಿ ಸೌಂದರ್ಯಕ್ಕೆ ಧಕ್ಕೆ ಹಾಗೂ ಇತರೆ ಕಾರಣಗಳಿಂದಾಗಿ ಜಾಹಿರಾತು ಫಲಕಗಳನ್ನು ಅಳವಡಿಕೆ ಮಾಡುವುದನ್ನು ನಿಷೇಧಿಸಲಾಗಿದೆ. ಆದರೆ, ಈಗ ಜಾಹಿರಾತು ಹೊಸ ಪಾಲಿಸಿಯನ್ನು ಸಿದ್ಧಗೊಳಿಸಲಾಗಿದೆ. ಅದನ್ನು ನಾನು ಸ್ಟಡಿ ಮಾಡ್ತಾ ಇದ್ದೇನೆ. ಆದಷ್ಟು ಬೇಗ ಒಂದು ಹೊಸ ರೂಪ ಕೊಡ್ತೀನಿ ಎಂದು ಮಾಹಿತಿ ನೀಡಿದರು.
Bengaluru: ಸ್ಟಾರ್ ಲೈಫ್ ಮಿಸ್ ಇಂಡಿಯಾ ವಿಜೇತೆ ನಿಶಾ ನರಸಪ್ಪ, ಈಗ ವಂಚನೆ ಆರೋಪಿ
ಟ್ಯಾಕ್ಸ್ ಕಟ್ಟದವರನ್ನು ಮ್ಯಾಪಿಂಗ್ ಮಾಡಲು ಸೂಚನೆ: ಬೆಂಗಳೂರಿನ ಸಾರ್ವಜನಿಕರು ಸರ್ಕಾರ ಮತ್ತು ಬಿಬಿಎಂಪಿ ಆಡಳಿತದ ಬಗ್ಗೆ ಪಾರದರ್ಶಕತೆ ಕೇಳ್ತಾ ಇದ್ದಾರೆ, ಅದು ಅವರ ಹಕ್ಕು. ಕರೆಂಟ್ ಈ ನಡುವೆ ಡಿಸ್ಟರ್ಬ್ ಆಗ್ತಿದೆ ಅಂತ ಹೇಳಿದ್ದಾರೆ. ನಮ್ಮ ಟೆಕ್ನಾಲಜಿ ಸರಿಯಾಗಿ ಉಪಯೋಗಿಸಿಕೊಂಡು ಹೊಸ ಕಾರ್ಯಕ್ರಮ ನೀಡಬೇಕಿದೆ. ನಾನು ದುಬಾರಿ ಟ್ಯಾಕ್ಸ್ ಹಾಕಬೇಕು ಅಂತ ಇಲ್ಲ. ಯಾರು ಟ್ಯಾಕ್ಸ್ ಕಟ್ತಾ ಇಲ್ವಾ ಅವರನ್ನ ಮ್ಯಾಪಿಂಗ್ ಮಾಡಲು ಹೇಳಿದ್ದೇನೆ. ಟ್ಯಾಕ್ಸ್ ಕಟ್ಟದೆ ಕಳ್ಳಾಟ ಆಡುವವರನ್ನ ಟ್ರೇಸ್ ಮಾಡಬೇಕಿದೆ. ದಿ ವಾಯ್ಸ್ ಬೆಂಗಳೂರಿಯನ್ ಆಗಬೇಕು ಅಂತ ಇಂದು ಸಭೆ ಕರೆಯಲಾಗಿತ್ತು. ಹಿರಿಯ ಅಧಿಕಾರಿಗಳ ಮುಂದೆಯೇ ಅವರ ಸಮಸ್ಯೆ ತಿಳಿಸಬೇಕಿತ್ತು ಹಾಗಾಗಿ ಇಂದು ಸಭೆ ಕರೆಯಲಾಗಿದೆ ಎಂದು ಹೇಳಿದರು.
ಫುಟ್ಪಾತ್ ಕ್ಲಿಯರೆನ್ಸ್ ಮಾಡಲು ಸೂಚನೆ: ಫುಟ್ಪಾತ್ ಕ್ಲಿಯರೆನ್ಸ್ ಮಾಡಿ ಅಂತ ಅಧಿಕಾರಿಗಳಿಗೆ ಹೇಳಿದ್ದೇನೆ. ವೇಸ್ಟ್, ಡಬ್ರೀಸ್ ತಂದು ಸುರೀತಾ ಇದ್ದಾರೆ. ಅದನ್ನು ಸರಿ ಮಾಡುವಂತೆ ಅಧಿಕಾರಿಗಳಿಗೆ ಹೇಳಿದ್ದೇನೆ. ಡಬ್ರೀಸ್ ಲೆಕ್ಕ ಕೊಡಿ ಅಂತ ಹೇಳಿದ್ದೇನೆ. ಅದಕ್ಕಾಗಿ ಒಂದು ಸಿಸ್ಟಂ ತರಬೇಕು ಅಂತ ಹೇಳಿದ್ದೇನೆ. ಮೂರು ಮೇಜರ್ ನಿರ್ಧಾರಗಳನ್ನು ಈ ತಿಂಗಳ ಕೊನೆಯಲ್ಲಿ ಹೇಳ್ತೀನಿ. ಆಸ್ತಿ ಪತ್ರ ಗಳನ್ನು ಮನೆಗೆ ತಲುಪಿಸುವ ಕೆಲಸ ಮಾಡಿ ಎಂದು ಸೂಚಿಸಿದ್ದೇನೆ ಎಂದು ತಿಳಿಸಿದರು.
ಇನ್ನು ಡಿಸಿಎಂ ಡಿ.ಕೆ. ಶಿವಕುಮಾರ್ ಸಂವಾದ ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಬಿಬಿಎಂಪಿಯ ಎಲ್ಲ ಝೋನಲ್ ಕಮಿಷನರ್ ಗಳು ಭಾಗಿಯಾಗಿದ್ದರು. ಇನ್ನು ಜಯನಗರ ಕ್ಷೇತ್ರದ ಮಾಜಿ ಶಾಸಕಿ ಸೌಮ್ಯರೆಡ್ಡಿ ಕೂಡ ಉಪಸ್ಥಿತರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ