ಶುಕ್ರವಾರ ಕರ್ನಾಟಕದಲ್ಲಿ ಕೊರೋನಾ ಸೋಂಕಿತರಿಗಿಂತ ಗುಣಮುಖರಾದವರೇ ಅತಿ ಹೆಚ್ಚು

Published : Sep 11, 2020, 08:47 PM ISTUpdated : Sep 11, 2020, 08:51 PM IST
ಶುಕ್ರವಾರ ಕರ್ನಾಟಕದಲ್ಲಿ ಕೊರೋನಾ ಸೋಂಕಿತರಿಗಿಂತ ಗುಣಮುಖರಾದವರೇ ಅತಿ ಹೆಚ್ಚು

ಸಾರಾಂಶ

ಶುಕ್ರವಾರ ಕರ್ನಾಟಕದಲ್ಲಿ ಕೊರೋನಾ ಸೋಂಕಿತರಿಗಿಂತ ಗುಣಮುಖರಾದವರೇ ಅತಿ ಹೆಚ್ಚಾಗಿರುವುದು ಹೊಸ ಆಶಾಭಾವಣೆ ಮೂಡಿಸಿದೆ. ಹಾಗಾದ್ರೆ, ಯಾವ ಜಿಲ್ಲೆಯಲ್ಲಿ ಎಷ್ಟು ಕೇಸ್..?

ಬೆಂಗಳೂರು, (ಸೆ.11) : ರಾಜ್ಯದಲ್ಲಿ ಇಂದು (ಶುಕ್ರವಾರ) ಹೊಸದಾಗಿ 9,464 ಜನರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದ್ದು, 130 ಮಂದಿ ಸಾವನ್ನಪ್ಪಿದ್ದಾರೆ.

 ಈ ಮೂಲಕ ಸೋಂಕಿತರ ಸಂಖ್ಯೆ 4,40,411 ಕ್ಕೆ ಏರಿಕೆಯಾದ್ರೆ, ಸೋಂಕಿಗೆ ಬಲಿಯಾದವ ಸಂಖ್ಯೆ 7,067.  ಇನ್ನು ಸಮಾಧಾನದ ಸಂಗತಿ ಶುಕ್ರವಾರ ಸೋಂಕಿತರಿಗಿಂತಲೂ ಗುಣಮುಖರಾದವರ ಸಂಖ್ಯೆಯೇ ಹೆಚ್ಚಿದೆ. 

DCJI ನೋಟಿಸ್‌ ಹಿನ್ನೆಲೆ ಭಾರತದಲ್ಲೂ ಆಕ್ಸ್‌ಫರ್ಡ್‌ ಲಸಿಕೆ ಪರೀಕ್ಷೆಗೆ ಬ್ರೇಕ್‌

ಅಂದ್ರೆ ಕಳೆದ 24 ಗಂಟೆಗಳಲ್ಲೇ ಬರೋಬ್ಬರಿ 12,545 ಜನರು ಕೊರೋನಾ ಮಹಾಮಾರಿಯಿಂದ ಗುಣಮುಖರಾಗಿದ್ದಾರೆ. ಇದರೊಂದಿಗೆ 3,34,99 ಸೋಂಕಿತರು ಸಂಪೂರ್ಣವಾಗಿ ಗುಣಮುಖರಾದಂತಾಗಿದ್ದು, ರಾಜ್ಯದಲ್ಲಿ 98,326 ಸಕ್ರೀಯ ಕೇಸ್‌ಗಳಿವೆ. ಎಂದು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಜಿಲ್ಲಾವಾರು ಕೊರೋನಾ ಕೇಸ್
ಬಾಗಲಕೋಟಿ - 188, ಬಳ್ಳಾರಿ - 382, ಬೆಳಗಾವಿ - 244, ಬೆಂಗಳೂರು ಗ್ರಾಮಾಂತರ - 146, ಬೆಂಗಳೂರು ನಗರ - 3426, ಬೀದರ್ - 61, ಚಾಮರಾಜನಗರ - 45, ಚಿಕ್ಕಬಳ್ಳಾಪುರ - 131, ಚಿಕ್ಕಮಗಳೂರು - 89, ಚಿತ್ರದುರ್ಗ - 247, ದಕ್ಷಿಣ ಕನ್ನಡ - 446, ದಾವಣಗೆರೆ - 297, ಧಾರವಾಡಿ - 203, ಗದಗ - 195, ಹಾಸನ - 305, ಹಾವೇರಿ - 240, ಕಲಬುರ್ಗಿ - 261, ಕೊಡಗು - 18, ಕೋಲಾರ - 70, ಕೊಪ್ಪಳ - 171, ಮಂಡ್ಯ - 131, ಮೈಸೂರು - 676, ರಾಯಚೂರು - 200, ರಾಮನಗರ - 76, ಶಿವಮೊಗ್ಗ - 349, ತುಮಕೂರು - 395, ಉಡುಪಿ - 168, ಉತ್ತರ ಕನ್ನಡ - 114, ವಿಜಯಪುರ - 92 ಮತ್ತು ಯಾದಗಿರಿ - 98 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ದಶದಿಕ್ಕುಗಳಿಂದ ಕರ್ನಾಟಕಕ್ಕೆ ಡ್ರಗ್ಸ್‌ ಗಂಡಾಂತರ
Karnataka News Live: ವೈದ್ಯರ ವರದಿ ಬಳಿಕ ಜೈಲಿನಲ್ಲಿ ನಟ ದರ್ಶನ್‌ಗೆ ಫಿಸಿಯೋಥೆರಪಿ ಚಿಕಿತ್ಸೆ ಸ್ಥಗಿತ