Mekedatu Padayatre: ಡಿಕೆ ಸೋದರರಿಗೆ ಅದ್ಧೂರಿ ಸ್ವಾಗತ: ಮೊದಲ ದಿನ 15 ಕಿಮೀ ನಡಿಗೆ, 8000 ಜನ ಭಾಗಿ!

Published : Jan 10, 2022, 05:36 PM IST
Mekedatu Padayatre: ಡಿಕೆ ಸೋದರರಿಗೆ ಅದ್ಧೂರಿ ಸ್ವಾಗತ:  ಮೊದಲ ದಿನ 15 ಕಿಮೀ ನಡಿಗೆ, 8000 ಜನ ಭಾಗಿ!

ಸಾರಾಂಶ

*ಅಡ್ಡಿ-ಆತಂಕವಿಲ್ಲದೆ ಮೇಕೆದಾಟು ಪಾದಯಾತ್ರೆ ಶುಭಾರಂಭ *ಸಂಗಮದಿಂದ ಹೊರಟು ಡಿಕೆಶಿ ಹುಟ್ಟೂರು ದೊಡ್ಡಾಲಹಳ್ಳಿಗೆ ಆಗಮನ  

ರಾಮ​ನ​ಗರ (ಜ. 10): ರಾಜ್ಯ ಸರ್ಕಾರದ ಕೋವಿಡ್‌ ಕಠಿಣ ನಿರ್ಬಂಧಗಳಿಗೆ (Covid 19 Restrictions) ಸಡ್ಡು ಹೊಡೆದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ (DK Shivakumar) ನೇತೃತ್ವದಲ್ಲಿ ನಮ್ಮ ನೀರು, ನಮ್ಮ ಹಕ್ಕು ಘೋಷಣೆಯೊಂದಿಗೆ ಆರಂಭವಾದ ಕಾಂಗ್ರೆಸ್‌ನ ಮೇಕೆದಾಟು ಪಾದಯಾತ್ರೆ ಮೊದಲ ದಿನವಾದ ಭಾನುವಾರ ಯಾವುದೇ ಅಡ್ಡಿ-ಆತಂಕಗಳಿಲ್ಲದೆ ಸುಮಾರು 15 ಕಿ.ಮೀ. ಕ್ರಮಿಸಿತು. ಕಾವೇರಿ ನದಿ ನೀರಿನ ನೀನಾದ ಹಿಮ್ಮೇ​ಳ, ಜಾನ​ಪದ ಕಲೆಗಳ ಮುಮ್ಮೇ​ಳ​ದೊಂದಿಗೆ ಐತಿ​ಹಾ​ಸಿಕ ಪಾದ​ಯಾ​ತ್ರೆ ಮೊದಲ ದಿನ ಮೇಕೆದಾಟು ಸಮೀಪದ ಸಂಗಮದಿಂದ ಡಿ.ಕೆ.ಶಿವಕುಮಾರ್‌ ಅವರ ಹುಟ್ಟೂರಾದ ದೊಡ್ಡಾಲಹಳ್ಳಿವರೆಗೆ ಹೆಜ್ಜೆಹಾಕಿತು. ರಾಜ್ಯದ ವಿವಿಧ ಕಡೆ​ಗ​ಳಿಂದ ಆಗ​ಮಿ​ಸಿದ್ದ ಡೊಳ್ಳು ಕುಣಿತ, ಕಂಸಾಳೆ, ಪೂಜಾ ಕುಣಿತ ಸೇರಿ​ ವಿವಿಧ ಜಾನ​ಪದ ಕಲಾ ತಂಡ​ಗಳು ಕಲಾ ಪ್ರದ​ರ್ಶನ ನೀಡುವ ಮೂಲಕ ಕಳೆ​ಕ​ಟ್ಟಿ​ದವು.

"

ಉತ್ಸಾ​ಹ​ದಿಂದ ಹೆಜ್ಜೆ ಮೇಲೆ ಹೆಜ್ಜೆ

ಪಾದ​ಯಾ​ತ್ರೆಯಲ್ಲಿ ಎಲ್ಲಾ ನಾಯ​ಕರು ಒಟ್ಟಾಗಿ ತೆರ​ಳದೆ ಹಲವು ತಂಡ​ಗಳ ಮೂಲಕ ಪ್ರತ್ಯೇಕವಾಗಿ ಹೆಜ್ಜೆ ಹಾಕಿ​ದರು. ಮಾಜಿ ಸಿಎಂ ಸಿದ್ದ​ರಾ​ಮಯ್ಯ ಮತ್ತು ಕೆಪಿ​ಸಿಸಿ ಅಧ್ಯಕ್ಷ ಡಿ.ಕೆ.​ಶಿ​ವ​ಕು​ಮಾರ್‌ ಪ್ರತ್ಯೇಕ ತಂಡ​ಗ​ಳಲ್ಲಿ ಮುನ್ನ​ಡೆ​ದು ಕಾರ್ಯ​ಕ​ರ್ತ​ರಲ್ಲಿ ಜೋಶ್‌ ತುಂಬು​ತ್ತಿ​ದ್ದರು. ಹಿರಿಯರೂ ಆದ ರಾಜ್ಯಸಭೆ ಪ್ರತಿ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕಾರಿ​ನಲ್ಲಿ ತೆರ​ಳಿ​ದರು. ಕಾಂಗ್ರೆಸ್‌ನ ​ಘ​ಟಾ​ನು​ಘಟಿ ಹಿರಿಯ ನಾಯಕರು, ಸಂಸದರು, ಶಾಸಕರು, ಮಹಿಳಾ ಪ್ರತಿನಿಧಿಗಳು ಸೇರಿ ಸು​ಮಾರು 8 ರಿಂದ 10 ಸಾವಿರ ಕಾರ್ಯಕರ್ತರು ಪಾದ​ಯಾ​ತ್ರೆ​ಯಲ್ಲಿ ಭಾಗಿಯಾಗಿದ್ದರು. ಹೆಚ್ಚಿನ ನಾಯ​ಕರು ಮಾಸ್ಕ್‌ ಧರಿ​ಸದೆ ಕೋವಿಡ್‌ ನಿಯಮಗಳನ್ನು ಗಾಳಿಗೆ ತೂರಿದ್ದು ಎದ್ದು ಕಾಣುತ್ತಿತ್ತು.

ಇದನ್ನೂ ಓದಿ: Mekedatu Politics: ಕಾಂಗ್ರೆಸ್ಸಿನದ್ದು ರಾಜಕೀಯಪ್ರೇರಿತ ಪಾದಯಾತ್ರೆ: ಬೊಮ್ಮಾಯಿ ಕಿಡಿ

ಹೆಗ್ಗೂರಲ್ಲಿ ಭೋಜನ:ಸುಮಾರು 6.5 ಕಿ.ಮೀ ಸಾಗಿದ ಪಾದಯಾತ್ರಿಕರು ಹೆಗ್ಗ​ನೂರು ಗ್ರಾಮದಲ್ಲಿ ಭೋಜನ ಸ್ವೀಕರಿಸಿ, ವಿಶ್ರಾಂತಿ ಪಡೆದರು. ನಂತರ ಸಂಜೆ 5ಕ್ಕೆ ಮತ್ತೆ ನಡಿಗೆ ಆರಂಭಿದರು. ಈ ವೇಳೆ ನಟಿ ಉಮಾಶ್ರೀ ತಮಟೆ ಸದ್ದಿಗೆ ಡ್ಯಾನ್ಸ್‌ ಮಾಡಿದ್ದು ವಿಶೇಷವಾಗಿತ್ತು. ಅವ​ರನ್ನು ಅನು​ಕ​ರಿ​ಸಿದ ಮಹಿಳಾ ಕಾಂಗ್ರೆ​ಸ್ಸಿ​ಗರು ಡೊಳ್ಳು-ತಮಟೆ ನಾದಕ್ಕೆ ತಾಳ ಹಾಕುತ್ತಾ ದೊಡ್ಡಾ​ಲ​ಹ​ಳ್ಳಿ ವರೆಗಿನ ಪ್ರಯಾಣಕ್ಕೆ ಉತ್ಸಾಹ ತುಂಬಿದರು. ವೀಕೆಂಡ್‌ ಕರ್ಫ್ಯೂ ಕಾರ​ಣ ಪಾದಯಾತ್ರೆಗೆ ಜಿಲ್ಲಾಡಳಿತ ಹಾಗೂ ಪೊಲೀಸರು ತಡೆ ಒಡ್ಡಬಹುದೆಂಬ ನಿರೀಕ್ಷೆ ಇತ್ತು.

 

 

11.15ಕ್ಕೆ ನಡಿಗೆ ಆರಂಭ

11.15ರ ಸುಮಾರಿಗೆ ಸಂಗಮದಿಂದ ಆರಂಭ, ಮಧ್ಯಾಹ್ನ 3.30ರ ವೇಳೆಗೆ ಹೆಗ್ಗ​ನೂರು ದೊಡ್ಡಿಗೆ ಆಗಮನ, ಭೋಜನ ಸೇವಿ​ಸಿ, ಕೆಲ​ಹೊತ್ತು ವಿಶ್ರಾಂತಿ. 5ಗಂಟೆಗೆ ಹೊರಟು ಸಂಜೆ 7 ಗಂಟೆಗೆ ದೊಡ್ಡಾ​ಲ​ಹ​ಳ್ಳಿ ಪ್ರವೇಶ. ರಾತ್ರಿ ವಾಸ್ತವ್ಯ.

ಇಂದು ಕನಕಪುರಕ್ಕೆ ಆಗಮನ

2ನೇ ದಿನ ದೊಡ್ಡಾಲಹಳ್ಳಿಯಿಂದ 8 ಕಿ.ಮೀ. ಸಾಗಿ ಮಾದಪ್ಪನದೊಡ್ಡಿ ಬಳಿ ವಿಶ್ರಾಂತಿ, ಊಟ ಮುಗಿಸಿ ಮತ್ತೆ 8 ಕಿ.ಮೀ. ಸಾಗಿ ಕನಕಪುರ ತಾಲೂಕು ಕೇಂದ್ರ ಪ್ರವೇಶ. ರಾತ್ರಿ ಕನಕಪುರದಲ್ಲಿ ಪಾದಯಾತ್ರಿಗಳು ವಾಸ್ತವ್ಯ.

ಇದನ್ನೂ ಓದಿ: Mekedatu padayatra ನನ್ನನ್ನು ಮತ್ತೆ ಜೈಲಿಗೆ ಹಾಕಿಸಲು ಷಡ್ಯಂತ್ರ, ಸ್ವಗ್ರಾಮದಲ್ಲಿ ಡಿಕೆಶಿ ಭಾವನಾತ್ಮಕ ಭಾಷಣ

ಡಿಕೆ ಸೋದರರಿಗೆ ಅದ್ಧೂರಿ ಸ್ವಾಗತ

ರಾಮ​ನ​ಗರ: ಪಾದಯಾತ್ರೆಯಲ್ಲಿ ಆಗಮಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಸೋದರ ಹಾಗೂ ಸಂಸದ ಡಿ.ಕೆ.ಸುರೇಶ್‌ ಅವರಿಗೆ ಹುಟ್ಟೂರು ದೊಡ್ಡಾ​ಲ​ಹ​ಳ್ಳಿ​ಯಲ್ಲಿ ಭರ್ಜರಿ ಸ್ವಾಗತ ದೊರೆ​ಯಿತು. ಸಂಜೆ 8 ಗಂಟೆ ವೇಳೆಗೆ ಆಗ​ಮಿ​ಸಿದ ಸೋದರರಿಗೆ ಗ್ರಾಮಸ್ಥರು ಹೂವಿನ ಮಳೆಯ ಸ್ವಾಗತ ನೀಡಿದರು, ಆರತಿ ಬೆಳ​ಗಿದರು. ಈ ವೇಳೆ ಗ್ರಾಮದ ಯುವ​ಕರು ಪಟಾಕಿ ಸಿಡಿಸಿ ಜೈಕಾರ ಹಾಕಿ ಪಾದ​ಯಾ​ತ್ರೆಗೆ ಶುಭ ಕೋರಿ​ದರು. ಇದಕ್ಕೂ ಮೊದಲು ಬೆಂಡ​ಗೋಡು ಗ್ರಾಮದ ದ್ವಾರ​ದಲ್ಲಿ ಹೆಣ್ಣು ಮಕ್ಕಳು ಕಳಸ ಹಿಡಿದು ಅದ್ಧೂ​ರಿ​ಯಾಗಿ ಸ್ವಾಗತಿಸಿ​ದರೆ, ಮಹಿ​ಳೆ​ಯರು ಬೆಲ್ಲ​ದಾ​ರತಿ ಮಾಡಿದರು. ಏಳ​ಗಳ್ಳಿ ಬಳಿಯೂ ನೂರಾರು ಜನರು ಡಿ.ಕೆ.​ಶಿ​ವ​ಕು​ಮಾರ್‌ಗೆ ಆರತಿ ಬೆಳಗಿ ಸ್ವಾಗತಿಸಿ​ದ​ರು. ಮೊದಲ ದಿನದ ಪಾದ​ಯಾತ್ರೆ ದೊಡ್ಡಾ​ಲ​ಹ​ಳ್ಳಿ​ಯಲ್ಲೇ ಮುಕ್ತಾ​ವಾ​ಗಿದ್ದು, ಪಾದ​ಯಾ​ತ್ರಿ​ಗ​ಳಿಗೆ ಇಲ್ಲಿ ವಾಸ್ತ​ವ್ಯದ ವ್ಯವಸ್ಥೆ ಮಾಡ​ಲಾ​ಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಾಜ್ಯದಲ್ಲಿ ಅಂತರ್ಜಾತಿ ವಿವಾಹ ಹೆಚ್ಚಾಗಬೇಕು, ಆದ್ರೆ ಒಂದರಿಂದ 2 ಮಕ್ಕಳನ್ನ ಮಾಡಿಕೊಳ್ಳಿ; ಸಿಎಂ ಸಿದ್ದರಾಮಯ್ಯ
1ನೇ ತರಗತಿ ದಾಖಲಾತಿಗೆ 6 ವರ್ಷ ಕಡ್ಡಾಯ, ಇಂಗ್ಲೀಷ್ ಶಾಲೆಗಳ ಪೋಷಕರಿಂದ ಸಡಿಲಿಕೆಗೆ ಮನವಿ