ಭಾನುವಾರ ರಾಜ್ಯದಲ್ಲಿ ಕೊರೋನಾ ಅಟ್ಟಹಾಸ, ಚೇತರಿಕೆ ಪ್ರಮಾಣದಲ್ಲೂ ಹೆಚ್ಚಳ

By Suvarna NewsFirst Published Aug 16, 2020, 8:50 PM IST
Highlights

ಕರ್ನಾಟಕದಲ್ಲಿ ಭಾನುವಾರ ಕೊರೋನಾ ಸೋಂಕು ಅಟ್ಟಹಾಸ ಮೆರೆದಿದ್ದು, ಚೇತರಿಕೆ ಪ್ರಮಾಣದಲ್ಲೂ ಸಹ ಹೆಚ್ಚಳವಾಗಿದೆ.

ಬೆಂಗಳೂರು, (ಆ.16): ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ಒಟ್ಟು 7,040 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಆ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 2,26,966ಕ್ಕೆ ಏರಿಕೆಯಾಗಿದೆ. 

ಇನ್ನು 124 ಜನರು ಮೃತಪಟ್ಟಿದ್ದು, ಒಟ್ಟಾರೆ ಸಾವಿನ ಸಂಖ್ಯೆ 3,945ಕ್ಕೇರಿದೆ. ಇದರಿಂದ  ಒಟ್ಟಾರೆ ಮರಣ ಪ್ರಮಾಣ ಶೇ.1,74 ಆದಂತಾಗಿದೆ. 

ಕೊರೋನಾ ಅಟ್ಟಹಾಸದ ಮಧ್ಯೆ ಸಮಾಧಾನಕರ ಸುದ್ದಿ: ಸಾವಿನ ಪ್ರಮಾಣದಲ್ಲಿ ಇಳಿಕೆ..!

ಚೇತರಿಕೆ ಪ್ರಮಾಣದಲ್ಲೂ ಶೇ. 62.34ಕ್ಕೆ ಏರಿದ್ದು, ಭಾನುವಾರ ಕೊರೋನಾ ಸೋಂಕಿನಿಂದ 6,683 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಸದ್ಯ 83,191 ಸಕ್ರಿಯ ಪ್ರಕರಣಗಳಿವೆ.

ಬೆಂಗಳೂರು ವರದಿ
ಬೆಂಗಳೂರಿನಲ್ಲಿ ಇಂದು (ಭಾನುವಾರ) 2231 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. 2359 ಜನ ಡಿಸ್ಚಾರ್ಜ್ ಆಗಿದ್ದಾರೆ. ಬೆಂಗಳೂರಿನಲ್ಲಿ ಇಂದು 49 ಮಂದಿ ಸಾವನ್ನಪ್ಪಿದ್ದಾರೆ. 34,583 ಸಕ್ರಿಯ ಪ್ರಕರಣಗಳಿವೆ.

Karnataka crossed 20 lakh tests today. So far we conducted 20,37,386 tests across 100 labs in the state. 7,040 cases were reported in the state today & 6,683 recoveries. 2,131 new cases reported in Bengaluru & 2,359 recoveries. State's recovery rate stands at 62.34%. pic.twitter.com/Jz9wK3Tc8H

— Dr Sudhakar K (@mla_sudhakar)
click me!