ನನ್ನ ಬಳಿ ಇರುವ ದಾಖಲೆಗಳನ್ನು ಬಹಿರಂಗ ಪಡಿಸಿದರೆ 6-7 ಸಚಿವರು ರಾಜೀನಾಮೆ ನೀಡ್ತಾರೆ: ಎಚ್‌ಡಿಕೆ ಬಾಂಬ್‌..!

By Kannadaprabha NewsFirst Published Sep 29, 2024, 4:32 AM IST
Highlights

ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಮಂತ್ರಿಗಳಾದ ಎಚ್‌.ಡಿ. ದೇವೇಗೌಡ ಅವರ ಕಣ್ಣಲ್ಲಿ ನೀರು ಹಾಕಿಸಿದವರು ಉಳಿಯುವುದಿಲ್ಲ. ದೇವೇಗೌಡ ಅವರು ಶಿವನ ಮೇಲೆನಂಬಿಕೆ ಇಟ್ಟು ಬದುಕು ನಡೆಸುತ್ತಿದ್ದಾರೆ. ಅವರ ನೋವಿನಲ್ಲಿ ಈ ಸರ್ಕಾರ ಭಸ್ಮವಾಗಲಿದೆ ಎಂಬುದನ್ನು ಭಗವಂತ ತೋರಿಸುತ್ತಾನೆ: ಕೇಂದ್ರ ಬೃಹತ್ ಕೈಗಾರಿಕೆ ಸಚಿವ ಎಚ್. ಡಿ.ಕುಮಾರಸ್ವಾಮಿ 
 

ಬೆಂಗಳೂರು(ಸೆ.29):  ತಮ್ಮ ಬಳಿ ಇರುವ ದಾಖಲೆಗಳನ್ನು ಬಹಿರಂಗ ಪಡಿಸಿದರೆ ಕಾಂಗ್ರೆಸ್ ಸರ್ಕಾರದ ಆರೇಳು ಸಚಿವರು ರಾಜೀನಾಮೆ ನೀಡಬೇಕಾಗುತ್ತದೆ ಎಂದು ಕೇಂದ್ರ ಬೃಹತ್ ಕೈಗಾರಿಕೆ ಸಚಿವ ಎಚ್. ಡಿ.ಕುಮಾರಸ್ವಾಮಿ ಹೇಳಿದ್ದು, ಶೀಘ್ರದಲ್ಲೇ ದಾಖಲೆಗಳನ್ನು ಬಹಿರಂಗ ಮಾಡುವುದಾಗಿಯೂ 'ಬಾಂಬ್' ಸಿಡಿಸಿದ್ದಾರೆ. 

ಶನಿವಾರ ಜೆಡಿಎಸ್‌  ಕಚೇರಿ ಜೆ.ಪಿ.ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ವಿರುದ್ಧ 40 ಪರ್ಸೆಂಟ್ ಆರೋಪ ಮಾಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಅದಕ್ಕಿಂತ ಹೆಚ್ಚಿನ ಪರ್ಸೆಂಟ್ ಪಡೆದು ಕೊಳ್ಳುತ್ತಿದೆ. ಕಾಂಗ್ರೆಸ್ ಸರ್ಕಾರದ ಸಂಪುಟದಲ್ಲಿ ಒಬ್ಬರಿಗಿಂತ ಒಬ್ಬರು ಪೈಪೋಟಿಯಲ್ಲಿ ಲೂಟಿ ಮಾಡುತ್ತಿದ್ದಾರೆ.  ನನ್ನ ಬಳಿ ಇರುವ ದಾಖಲೆಗಳನ್ನು ಬಯಲು ಮಾಡಿದರೆ 6-7 ಸಚಿವರು ರಾಜೀನಾಮೆ ನೀಡಬೇಕಾಗುತ್ತದೆ. ಶೀಘ್ರದಲ್ಲಿಯೇ ಎಲ್ಲಾ ದಾಖಲೆಗಳನ್ನು ಬಹಿರಂಗ ಮಾಡುವೆ ಎಂದು ತಿಳಿಸಿದರು. 

Latest Videos

ತನಿಖೆ ಮಾಡುವವರ ವಿರುದ್ಧ ಆರೋಪ ಮಾಡುವುದು ಎಷ್ಟು ಸರಿ: ಎ.ಎಸ್.ಪೊನ್ನಣ್ಣ ಅಸಮಾಧಾನ

ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಮಂತ್ರಿಗಳಾದ ಎಚ್‌.ಡಿ. ದೇವೇಗೌಡ ಅವರ ಕಣ್ಣಲ್ಲಿ ನೀರು ಹಾಕಿಸಿದವರು ಉಳಿಯುವುದಿಲ್ಲ. ದೇವೇಗೌಡ ಅವರು ಶಿವನ ಮೇಲೆನಂಬಿಕೆ ಇಟ್ಟು ಬದುಕು ನಡೆಸುತ್ತಿದ್ದಾರೆ. ಅವರ ನೋವಿನಲ್ಲಿ ಈ ಸರ್ಕಾರ ಭಸ್ಮವಾಗಲಿದೆ ಎಂಬುದನ್ನು ಭಗವಂತ ತೋರಿಸುತ್ತಾನೆ ಎಂದು ಹೇಳಿದರು.
 

click me!