
ಬೆಂಗಳೂರು, (ಜೂನ್.25): ರಾಜ್ಯದಲ್ಲಿ ಕೊರೋನಾ ಮತ್ತಷ್ಟು ಇಳಿಮುಖವಾಗಿದ್ದು, ಇಂದು (ಶುಕ್ರವಾರ) 3310 ಜನರಿಗೆ ಸೋಂಕು ತಗಲಿದೆ. 114 ಮಂದಿ ಮೃತಪಟ್ಟಿದ್ದಾರೆ.
ಒಟ್ಟು ಸೋಂಕಿತರ ಸಂಖ್ಯೆ 28,26,754 ಕ್ಕೆ ಏರಿಕೆಯಾಗಿದ್ರೆ, ಇದುವರೆಗೆ 34 539 ಸೋಂಕಿತರು ಸಾವನ್ನಪ್ಪಿದ್ದಾರೆ ಎಂದು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ರಾಜ್ಯದಲ್ಲಿ 2 ಡೆಲ್ಟಾಪ್ಲಸ್ ಕೇಸ್ ಪತ್ತೆ, ಇಬ್ಬರೂ ಗುಣ
ಇವತ್ತು 6524 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇದರೊಂದಿಗೆ ಇದುವರೆಗೆ 26,84,997 ಜನ ಗುಣಮುಖರಾಗಿದ್ದಾರೆ. 1,07,195 ಸಕ್ರಿಯ ಪ್ರಕರಣಗಳಿದ್ದು, ಪಾಸಿಟಿವಿಟಿ ದರ ಶೇ.2.09 ರಷ್ಟು ಇದೆ.
ಇನ್ನು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಳೆದ 24 ಗಂಟೆಗಳಲ್ಲಿ 614 ಜನರಿಗೆ ಸೋಂಕು ತಗಲಿದ್ದು, 17 ಸೋಂಕಿತರು ಸಾವನ್ನಪ್ಪಿದ್ದಾರೆ. 1401 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, 66,232 ಸಕ್ರಿಯ ಪ್ರಕರಣಗಳಿವೆ.
ಜಿಲ್ಲಾವಾರು ಪ್ರಕರಣಗಳ ಸಂಖ್ಯೆ :
ಬಾಗಲಕೋಟೆ-08, ಬಳ್ಳಾರಿ-29, ಬೆಳಗಾವಿ-87, ಬೆಂಗಳೂರು ಗ್ರಾಮಾಂತರ-80, ಬೆಂಗಳೂರು ನಗರ-614, ಬೀದರ್-06, ಚಾಮರಾಜನಗರ-71, ಚಿಕ್ಕಬಳ್ಳಾಪುರ-47, ಚಿಕ್ಕಮಗಳೂರು-39, ಚಿತ್ರದುರ್ಗ-13,ದಕ್ಷಿಣ ಕನ್ನಡ-377, ದಾವಣಗೆರೆ-89, ಧಾರವಾಡ-34, ಗದಗ-23, ಹಾಸನ-399, ಹಾವೇರಿ-29. ಕಲಬುರಗಿ-14, ಕೊಡಗು-183, ಕೋಲಾರ-140, ಕೊಪ್ಪಳ-21, ಮಂಡ್ಯ-119, ಮೈಸೂರು-367, ರಾಯಚೂರು-14, ರಾಮನಗರ-11, ಶಿವಮೊಗ್ಗ-212, ತುಮಕೂರು-80, ಉಡುಪಿ-92, ಉತ್ತರ ಕನ್ನಡ-99, ವಿಜಯಪುರ-08, ಯಾದಗಿರಿ-05.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ