
ಬೆಂಗಳೂರು, (ಜೂನ್.07): ರಾಜ್ಯದಲ್ಲಿ ಮಹಾಮಾರಿ ಕೊರೋನಾ ವೈರಸ್ ಪ್ರಕರಣಗಳ ಸಂಖ್ಯೆ ಮತ್ತಷ್ಟು ಏರಿಕೆಯಾಗಿದ್ದು, ಇಂದು (ಭಾನುವಾರ) ಸಹ ಬರೋಬ್ಬರಿ 239 ಮಂದಿಗೆ ಕೊವಿಡ್-19 ಪಾಸಿಟಿವ್ ದೃಢಪಟ್ಟಿದೆ.
239 ಪ್ರಕರಣಗಳ ಪೈಕಿ 183 ಅಂತಾರಾಜ್ಯ ಮತ್ತು 9 ವಿದೇಶಿದಿಂದ ಬಂದವರಿಗೆ ಕೊರೋನಾ ಅಟ್ಯಾಕ್ ಆಗಿದೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 5452ಕ್ಕೆ ಏರಿಕೆಯಾಗಿದೆ.
ಕೊರೋನಾ ಹಾಗೂ ಮಾಲಿನ್ಯ ತಡೆಯುವ ಸ್ವದೇಶಿ ಮಾಸ್ಕ್ ನಿರ್ಮಿಸಿದ ವಿದ್ಯಾರ್ಥಿಗಳು!
ರಾಜ್ಯದಲ್ಲಿ ಕೊರೋನಾದಿಂದ ಇದುವರೆಗೆ 61 ಮಂದಿ ಮೃತಪಟ್ಟಿದ್ದು, 2132 ಮಂದಿ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಟಾರ್ಜ್ ಆಗಿದ್ದಾರೆ.
ಇನ್ನು 3,257 ಮಂದಿ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಕರ್ನಾಟಕ ಆರೋಗ್ಯ ಇಲಾಖೆ ಪ್ರಕಟಿಸಿದ ಹೆಲ್ತ್ ಬುಲೆಟಿನಲ್ಲಿ ಉಲ್ಲೇಖಿಸಲಾಗಿದೆ.
ಶನಿವಾರದ ಜಿಲ್ಲಾವಾರು ಮಾಹಿತಿ
ಕಲಬುರಗಿ-39
ಯಾದಗಿರಿ-39
ಬೆಳಗಾವಿ-38
ಬೆಂಗಳೂರು ನಗರ-23
ದಕ್ಷಿಣ ಕನ್ನಡ-17
ದಾವಣಗೆರೆ-17
ಉಡುಪಿ-13
ಶಿವಮೊಗ್ಗ-12
ವಿಜಯಪುರ-09
ಬೀದರ್--07
ಬಳ್ಳಾರಿ-06
ಬೆಂಗಳೂರು ಗ್ರಾಮಾಂತರ-05
ಹಾಸನ-05
ಧಾರವಾಡ-03
ಗದಗ-02
ಉತ್ತರ ಕನ್ನಡ-02
ಮಂಡ್ಯ- 01
ರಾಯಚೂರು-01
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ