2023ರ ಚುನಾವಣೆ ನನ್ನ ಕೊನೇ ಹೋರಾಟ: ಕುಮಾರಸ್ವಾಮಿ

Published : Jan 12, 2021, 09:23 AM IST
2023ರ ಚುನಾವಣೆ ನನ್ನ ಕೊನೇ ಹೋರಾಟ: ಕುಮಾರಸ್ವಾಮಿ

ಸಾರಾಂಶ

 ಸಂಕ್ರಾಂತಿ ಮರು ದಿನ ಪಕ್ಷ ಸಂಘ​ಟ​ನೆಗೆ ಚಾಲನೆ | ರಾಮನಗರದಿಂದಲೇ ಆರಂಭ: ಮಾಜಿ ಸಿಎಂ

ರಾಮ​ನ​ಗರ(ಜ.12): ರಾಜ್ಯ​ದಲ್ಲಿ 2023ರಲ್ಲಿ ನಡೆ​ಯುವ ವಿಧಾ​ನ​ಸಭಾ ಚುನಾ​ವಣೆ ನನ್ನ ಜೀವ​ನದ ಕೊನೆಯ ಹೋರಾಟ. ಜೆಡಿ​ಎಸ್‌ ಸ್ವತಂತ್ರ​ವಾಗಿ ಅಧಿ​ಕಾ​ರಕ್ಕೆ ಬರು​ವಂತೆ ಪಕ್ಷ ಸಂಘ​ಟಿ​ಸಲು ಸಂಕ್ರಾಂತಿ ಮರು​ದಿ​ನ ರಾಮ​ನ​ಗರ ಕ್ಷೇತ್ರ​ದಿಂದಲೇ ಚಾಲನೆ ನೀಡುತ್ತೇನೆ ಎಂದು ಮಾಜಿ ಮುಖ್ಯ​ಮಂತ್ರಿ ಎಚ್‌.ಡಿ.​ಕು​ಮಾ​ರ​ಸ್ವಾಮಿ ಹೇಳಿ​ದರು.

ನಗ​ರದ ವಿಶ್ವ​ನಾಥ ಕಲ್ಯಾಣ ಮಂಟ​ಪ​ದಲ್ಲಿ ರಾಮ​ನ​ಗರ ಕ್ಷೇತ್ರ ವ್ಯಾಪ್ತಿಯ ಗ್ರಾಪಂ ಚುನಾ​ವ​ಣೆ​ಯಲ್ಲಿ ಜೆಡಿಎಸ್‌ ಬೆಂಬ​ಲಿತ ಅಭ್ಯ​ರ್ಥಿ​ಗ​ಳ ಅಭಿ​ನಂದನಾ ಸಮಾ​ರಂಭ ಉದ್ಘಾ​ಟಿಸಿ ಮಾತ​ನಾ​ಡಿ​ದರು.

ಶ್ರೀರಂಗಪಟ್ಟಣದಲ್ಲಿ 1600 ಟನ್‌ ಲಿಥಿಯಂ ನಿಕ್ಷೇಪ!

ರಾಮ​ನ​ಗರ ನನಗೆ ರಾಜ​ಕೀ​ಯ​ವಾಗಿ ಪುನರ್‌ ಜನ್ಮ ನೀಡಿದ ಕ್ಷೇತ್ರ. ಹೀಗಾಗಿ ಜಾಲ​ಮಂಗ​ಲದ ಲಕ್ಷ್ಮೀ ನರ​ಸಿಂಹಸ್ವಾಮಿ ದೇವಾ​ಲ​ಯ​ದಲ್ಲಿ ನನ್ನಿಂದಾ​ಗಿ​ರುವ ಅಪ​ಚಾರ ಮನ್ನಿ​ಸು​ವಂತೆ ಕುಟುಂಬ ಸಮೇ​ತ​ಪ್ರಾರ್ಥಿಸಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಹೊಸ ರಾಜ​ಕೀಯ ಆರಂಭಿ​ಸು​ತ್ತೇನೆ ಎಂದರು.

ಬದ​ಲಾದ ರಾಜ​ಕೀಯ ಸನ್ನಿ​ವೇ​ಶ​ದಲ್ಲಿ ವಿಧಿ​ಯಿ​ಲ್ಲದೆ ಕಾಂಗ್ರೆಸ್‌ ಜತೆ​ ಕೈಜೋ​ಡಿಸಿ ಮೈತ್ರಿ ಸರ್ಕಾರ ರಚಿಸಿದೆವು. ದೋಸ್ತಿ ಸರ್ಕಾರ ಅಧಿ​ಕಾ​ರಕ್ಕೆ ಬಂದ ಒಂದೇ ತಿಂಗ​ಳಲ್ಲಿ ನಾನು ವೇದಿ​ಕೆ​ಯಲ್ಲಿ ಸಾರ್ವ​ಜ​ನಿ​ಕ​ವಾಗಿ ಕಣ್ಣೀರು ಹಾಕುವ ಸನ್ನಿ​ವೇಶ ಬಂತು. ಬಹುಶಃ ರಾಜ​ಕೀ​ಯ ಇತಿ​ಹಾಸದಲ್ಲಿ ಮುಖ್ಯ​ಮಂತ್ರಿ​ಯಾದ ಒಂದೇ ತಿಂಗ​ಳಲ್ಲಿ ಕಣ್ಣೀರು ಹಾಕಿದವನು ನಾನೊ​ಬ್ಬನೇ ಇರ​ಬೇಕು. ಕಾಂಗ್ರೆಸ್‌ ಜತೆ ಕೈಜೋ​ಡಿಸಿ ಮೈತ್ರಿ ಸರ್ಕಾರ ರಚಿಸಿದ್ದರಿಂದಾದ ತಪ್ಪಿನ ಅರಿ​ವಾ​ಗಿದೆ. ದೋಸ್ತಿ ಸರ್ಕಾ​ರಕ್ಕೆ ಬಂಡೆ ರೀತಿ ಆಸ​ರೆ​ಯಾ​ಗಿ ನಿಂತಿ​ದ್ದೇ​ವೆಂದು ಪರೋ​ಪ​ಕಾರ ಮಾಡಿ​ದ​ವ​ರಂತೆ ಪ್ರಚಾರ ಪಡೆ​ದ​ವರೇ ನನ್ನ ಮೇಲೆ ಕಲ್ಲು ಚಪ್ಪಡಿ ಎಳೆ​ದರು ಎಂದು ಕೆಪಿ​ಸಿಸಿ ಅಧ್ಯಕ್ಷ ಡಿ.ಕೆ.​ಶಿ​ವ​ಕು​ಮಾರ್‌ ವಿರುದ್ಧ ಪರೋ​ಕ್ಷ​ವಾಗಿ ವಾಗ್ದಾಳಿ ನಡೆ​ಸಿ​ದರು ಕುಮಾರಸ್ವಾಮಿ.

KR ಮಾರ್ಕೆಟ್‌ಗೆ ಸ್ಮಾರ್ಟ್‌ ಲುಕ್‌: ಪಾರ್ಕಿಂಗ್‌ ವ್ಯವಸ್ಥೆ, ಲಿಫ್ಟ್‌, ಎಸ್ಕಲೇಟರ್‌ ಅಳವಡಿಕೆ

ಜೆಡಿ​ಎಸ್‌ ಬಲಿ​ಷ್ಠ​ವಾ​ಗಿದ್ದ ಕ್ಷೇತ್ರ​ಗ​ಳಲ್ಲೇ ಮೈತ್ರಿ ಸರ್ಕಾ​ರದ ಅವ​ಧಿ​ ದುರು​ಪ​ಯೋಗ ಪಡಿ​ಸಿ​ಕೊಂಡ ಕಾಂಗ್ರೆಸ್‌ ಪ್ರಾಬಲ್ಯ ಕಂಡು​ಕೊ​ಳ್ಳಲು ವೇದಿಕೆ ಸಿದ್ಧ​ಪ​ಡಿ​ಸಿ​ಕೊಂಡಿತು. ಇದೇ ಕಾರಣಕ್ಕೆ ಪಕ್ಷಕ್ಕೆ ಚುನಾ​ವ​ಣೆ​ಗ​ಳಲ್ಲಿ ಹಿನ್ನ​ಡೆ​ಯಾ​ಗು​ತ್ತಿದೆ. ನಾವು​ ಮಾಡಿದ ಲೋಪ​ಗ​ಳಿಗೆ ಪಕ್ಷದ ಮುಖಂಡರು, ಕಾರ್ಯ​ಕ​ರ್ತರು ದೋಷಿ​ಗ​ಳಿಲ್ಲ. ನನ್ನಿಂದಾ​ಗಿ​ರುವ ತಪ್ಪಿನ ಆತ್ಮಾ​ವ​ಲೋ​ಕನ ಮಾಡಿ​ಕೊಳ್ಳು​ತ್ತಿ​ದ್ದೇನೆ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಅಪರೂಪದ ಕೋತಿ ಪ್ರಭೇದ ಬ್ಯಾಗ್‌ನಲ್ಲಿಟ್ಟು ವಿದೇಶದಿಂದ ಅಕ್ರಮ ಸಾಗಾಟ, ಬೆಂಗಳೂರು ಏರ್ಪೋರ್ಟ್‌ನಲ್ಲಿ ಸಿಕ್ಕಿಬಿದ್ದ ಪ್ರಯಾಣಿಕ!
ಡೆವಿಲ್ ಇನ್ ಟ್ರಬಲ್: ನಟ ದರ್ಶನ್‌ನಿಂದ ಒಂದು ಗನ್ ಕಿತ್ತುಕೊಂಡರೂ ಮತ್ತೊಂದು .22mm ರೈಫಲ್ ಮರೆತ ಪೊಲೀಸರು