
ಬೆಂಗಳೂರು, (ನ.25) ಕರ್ನಾಟಕದ ಪಾಲಿಗೆ ನಿನ್ನೆ ಕರಾಳ ಶನಿವಾರ. ಮಂಡ್ಯ ಬಸ್ ದುರಂತದಲ್ಲಿ 30 ಜನರನ್ನು ಕಳೆದುಕೊಂಡ ರಾಜ್ಯ, ಅದೇ ದಿನ ರಾತ್ರಿಯ ವೇಳೆಗೆ ಕನ್ನಡ ಚಿತ್ರರಂಗದ ಹಿರಿಯಣ್ಣ ನನ್ನು ಕಳೆದುಕೊಂಡಿದೆ.
ಖಡಕ್ ಮಾತಿನ ಹೃದಯವಂತಿಕೆಯ ಕನ್ವರ್ಲಾಲ್, ರೆಬಲ್ ಸ್ಟಾರ್ ಇನ್ನಿಲ್ಲ ಎಂಬ ಸುದ್ದಿಯನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಅಗಲಿದ ಕರ್ನಾಟಕ ಕರ್ಣ ಅಂಬರೀಶ್ ಸಂಕ್ಷಿಪ್ತ ಪರಿಚಯ
ರಾಜಕೀಯ ಹಾಗೂ ಚಿತ್ರರಂಗದಲ್ಲಿ ತಮ್ಮದೇಯಾದ ಛಾಪು ಮೂಡಿಸಿರುವ ಅಂಬಿ, ತಾವು ಎರಡು ಕನಸುಗಳನ್ನ ಕಂಡಿದ್ದರು. ವಿಧಿಯಾಟದಿಂದ ಅಂಬಿಯ ಆ ಎರಡು ಕನಸುಗಳು ನನಸಾಗದೇ ಕನಸಾಗಿಯೇ ಉಳಿದುಕೊಂಡಿವೆ.
ಹಾಗಾದ್ರೆ ಮಂಡ್ಯದ ಗಂಡು ಅಂಬರೀಶ್ ಬಿಟ್ಟು ಹೋದ ಆ ಎರಡು ಕನಸುಗಳಾವುವು? ಇಲ್ಲಿವೆ ನೋಡಿ.
ಅಂಬಿ ಕನಸು ನಂ.1: ಅಂಬರೀಶ್ ತಮ್ಮ ಪುತ್ರ ಅಭಿಷೇಕ್ ನ ಚೊಚ್ಚಲ ಚಿತ್ರ "ಅಮರ್" ಚಿತ್ರವನ್ನ ನೋಡಬೇಕು ಎನ್ನುವು ಬಹಳ ಕನಸು ಕಂಡಿದ್ದರು. ಮಗನನ್ನು ಹೀರೋ ಪಾತ್ರದಲ್ಲಿ ನೋಡಿ ಕಣ್ತುಂಬಿಕೊಳ್ಳಬೇಕೆನ್ನುವ ಮಹಾದಾಸೆ ಅಂಬಿದಾಗಿತ್ತು. ಆದ್ರೆ, ವಿಧಿ ಅಂಬಿಯ ಕನಸನ್ನಕೊನೆಗೂ ಈಡೇರಿಸಲಿಲ್ಲ.
ಅಂಬಿ ಕನಸು ನಂ.2: ಅಂಬಿಯ ಎರಡನೇ ಕನಸು ಅಂದ್ರೆ ಅದು ಕುಚುಕು ಗೆಳೆಯ ಡಾ. ವಿಷ್ಣುವರ್ಧನ್ ಅವರ ಸಮಾಧಿಯನ್ನ ನೋಡುವುದು ವಿಷ್ಣು ಸಮಾಧಿ ಎಲ್ಲಿ ನಿರ್ಮಾಣ ಮಾಡಬೇಕು ಎನ್ನುವುದರಲ್ಲಿಯೇ ದಿನಗಳು ಕಳೆದು ಹೋದವು. ಇದ್ರಿಂದ ಅಂಬಿ ಕಂಡಿದ್ದ ಈ ಕನಸು ಕನಸಾಗಿಯೇ ಉಳಿಯಬೇಕಾಯಿತು.
ಒಟ್ಟಿನಲ್ಲಿ ಅಂಬಿ ಕಂಡಿದ್ದ ಈ ಎರಡು ಕನಸುಗಳನ್ನ ಬಿಟ್ಟು ಹೋಗಿರುವುದು ವಿಪರ್ಯಾಸ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ