
ಬೆಂಗಳೂರು, (ಅ.02): ರಾಜ್ಯದಲ್ಲಿ ಕಳೆದ ಎರಡ್ಮೂರು ದಿನಗಳ ಕೊರೋನಾ ಪಾಸಿಟಿವ್ ಕೇಸ್ಗಳನ್ನ ನೋಡಿದ್ರೆ, ಮೂರನೇ ಭೀತಿ ಶುರುವಾಯ್ತು ಎನ್ನಲಾಗಿತ್ತು. ಆದ್ರೆ, ಇದೀಗ ದಿಢೀರ್ ಕೊರೋನಾ ಇಳಿಮುಖವಾಗಿರುವುದು ಜನರು ನಿಟ್ಟುಸಿರು ಬಿಡುವಂತಾಗಿದೆ.
ಹೌದು.. ರಾಜ್ಯದಲ್ಲಿ ಇಂದು (ಅ.02) 1,33,030 ಪರೀಕ್ಷೆ ನಡೆಸಲಾಗಿದ್ದು, ಈ ಪೈಕಿ 1,285 ಜನರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಹಾಗೇ 25 ಜನರು ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಕೊರೋನಾ ತಡೆಯಲು ರಣತಂತ್ರ: ಗಡಿಯಲ್ಲಿ ಕಠಿಣ ನಿಯಮ ಜಾರಿ
ಈ ಮೂಲಕ ಕರ್ನಾಟಕದಲ್ಲಿ ಒಟ್ಟು ಕೊರೋನಾ ಸಂಖ್ಯೆ 2908284ಕ್ಕೆ ಏರಿಕೆಯಾಗಿದ್ರೆ, 36612 ಜನರು ಮಹಾಮಾರಿಯಿಂದ ಸಾವನ್ನಪ್ಪಿದ್ದಾರೆ.
ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 1,383 ಜನರು ಗುಣಮುಖರಾದ ಕಾರಣದಿಂದಾಗಿ, ಇದೀಗ ಸಕ್ರೀಯ ಸೋಂಕಿತರ ಸಂಖ್ಯೆ 24,021 ಆಗಿದೆ. ಇದರಿಂದ ಪಾಸಿಟಿವಿಟಿ ದರ 0.96ಕ್ಕೆ ಕುಸಿದಿದೆ. ಕಳೆದ ಎರಡ್ಮೂರು ದಿನಗಳ ಹಿಂದೆ ಪಾಸಿಟಿವಿಟಿ ದರ ಒಂದರ ಮೇಲೆ ಹೋಗಿತ್ತು.
ಇನ್ನು ಕೊರೋನಾ ಹಾಟ್ಸ್ಪಾಟ್ ಆಗಿದ್ದ ಬೆಂಗಳೂರು ನಗರದಲ್ಲಿ 290 ಜನರಿಗೆ ಕೊರೋನಾ ಕೇಸ್ ಪತ್ತೆಯಾಗಿದ್ದು, 5 ಸೋಂಕಿತರು ಸಾವನ್ನಪ್ಪಿದ್ದಾರೆ. 168 ಸೋಂಕಿತರು ಗುಣಮುಖರಾಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ