ವಿವಿಧ ಹುದ್ದೆಗಳಿಗೆ ಗ್ರಾಮೀಣಾಭಿವೃದ್ಧಿ ಇಲಾಖೆ ಅರ್ಜಿ ಆಹ್ವಾನ

By Web DeskFirst Published Jun 7, 2019, 3:09 PM IST
Highlights

ಪರಿಸರ ಕ್ಷೇತ್ರದಲ್ಲಿ ಅನುಭವವಿದ್ದು ಪರಿಸರದ ಉಳಿಸುವಿಕೆಗೆ ಸಂಬಂಧಿಸಿದಂತೆ ಕೆಲಸ ನಿರ್ವಹಿಸಲು ನಿಮಗೆ ಆಸಕ್ತಿ ಇದೆಯೆ? ಹಾಗಿದ್ದರೆ ಇದೊಂದು ನಿಮಗೆ ಸುವರ್ಣಾವಕಾಶ. ಇಂದೇ ಅರ್ಜಿ ಸಲ್ಲಿಸಿ. ಹೆಚ್ಚಿನ ವಿವರಗಳಿಗಾಗಿ ಮುಂದೆ ಓದಿ..

ಬೆಂಗಳೂರು, (ಜೂನ್.07):  ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.

 ಉದ್ಯೋಗಗಳ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಈ ಬಗ್ಗೆ  ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ  ಫೇಸ್‌ ಬುಕ್ ಖಾತೆಯಲ್ಲಿ ಈ ಕುರಿತು ಗುರುವಾರ ಪ್ರಕಟಣೆ ನೀಡಿದೆ.  ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಲು ಜೂನ್ 14 ಕೊನೆಯ ದಿನವಾಗಿದೆ.

ಯಾವ-ಯಾವ ಹುದ್ದೆಗಳು?
 * ಅರಣ್ಯೀಕರಣ ಸಮಾಲೋಚಕರು 
* ಜಲಾನಯನ ಸಮಾಲೋಚಕರು
 * ಸಮುದಾಯ ಸಮನ್ವಯಕಾರರು 
* ಸಿಎಸ್ಆರ್‌ ಮತ್ತು ಔಟ್ ರಿಚ್ ಸಮಾಲೋಚಕರು
 * ಐಟಿ ಸಮಾಲೋಚಕರು

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹೆಚ್ಚಿನ ವಿವರಗಳಿಗಾಗಿ ಕಚೇರಿಯ ವೆಬ್ ಸೈಟ್‌ ನಲ್ಲಿ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

click me!