ನಾಳೆ ಬೆಂಗಳೂರಿನಲ್ಲಿ ಭಾರತ-ಆಸೀಸ್ ಕದನ: 2ನೇ ತವರಿನಲ್ಲಿ ಚಹಲ್ ಮತ್ತೆ ಮಾಡ್ತಾರಾ ಮ್ಯಾಜಿಕ್

Published : Sep 27, 2017, 02:54 PM ISTUpdated : Apr 11, 2018, 01:05 PM IST
ನಾಳೆ ಬೆಂಗಳೂರಿನಲ್ಲಿ ಭಾರತ-ಆಸೀಸ್ ಕದನ: 2ನೇ ತವರಿನಲ್ಲಿ ಚಹಲ್ ಮತ್ತೆ ಮಾಡ್ತಾರಾ ಮ್ಯಾಜಿಕ್

ಸಾರಾಂಶ

ಆತ ಹರ್ಯಾಣ ಬೌಲರ್​. ಆದ್ರೂ ಆತನಿಗೆ ಬೆಂಗಳೂರು 2ನೇ ತವರು. ಚಿನ್ನಸ್ವಾಮಿ ಸ್ಟೇಡಿಯಂನಲ್ಲೇ ಆತ 6 ವಿಕೆಟ್ ಪಡೆದು ಆಂಗ್ಲರ ಬೇಟೆಯಾಡಿದ್ದ. ನಾಳೆ ಕಾಂಗರೂ ಬೇಟೆಯಾಡಲು ರೆಡಿಯಾಗಿದ್ದಾನೆ. ಆತನೇ 4ನೇ ಪಂದ್ಯದ ಬೌಲಿಂಗ್ ಟ್ರಂಪ್​ಕಾರ್ಡ್​

ಯುಜವೇಂದ್ರ ಚಹಲ್ ಇತ್ತೀಚೆಗೆ ಟೀಂ ಇಂಡಿಯಾ ಬೌಲಿಂಗ್ ಟ್ರಂಪ್​ಕಾರ್ಡ್​ ಆಗ್ತಿದ್ದಾರೆ. ಆಡಿರೋದು ಕೇವಲ 17 ಇಂಟರ್​ನ್ಯಾಷನಲ್ ಮ್ಯಾಚ್. ಆಗ್ಲೇ ಎದುರಾಳಿ ಬೌಲರ್​ಗಳನ್ನ ಇನ್ನಿಲ್ಲದಂತೆ ಕಾಡ್ತಿದ್ದಾರೆ. ಪ್ರತಿ ಪಂದ್ಯದಲ್ಲೂ ವಿಕೆಟ್ ಪಡೆಯೋ ಮೂಲ್ಕ ಬ್ಯಾಟ್ಸ್​ಮನ್​ಗಳ ನಿದ್ದೆಗೆಡಿಸಿದ್ದಾರೆ. ಬೆಂಗಳೂರಿನಲ್ಲಿ ನಡೆಯುವ ಭಾರತ-ಆಸೀಸ್ 4ನೇ ಪಂದ್ಯದಲ್ಲಿ ಅವರೇ ಬೌಲಿಂಗ್ ಟ್ರಂಪ್​ಕಾರ್ಡ್​.

ಚಹಲ್ ಮ್ಯಾಜಿಕ್​ಗೆ ಕಾಂಗರೂ ಉಡೀಸ್: ಯುಜವೇಂದ್ರಗೆ 3 ಪಂದ್ಯದಿಂದ 6 ವಿಕೆಟ್

ಆಸ್ಟ್ರೇಲಿಯಾ ವಿರುದ್ಧ ರಿಸ್ಟ್ ಸ್ಪಿನ್ನರ್ ಅದ್ಭುತ ಪ್ರದರ್ಶನ ನೀಡ್ತಿದ್ದಾರೆ. ಮೂರು ಮ್ಯಾಚ್​ನಿಂದ 6 ವಿಕೆಟ್ ಪಡೆಯೋ ಮೂಲ್ಕ ಕಾಂಗರೂಗಳ ಬೇಟೆಯಾಡಿದ್ದಾರೆ. ಚೆನ್ನೈನಲ್ಲಿ 3 ವಿಕೆಟ್ ಕಬಳಿಸಿದ್ದ ಚಹಲ್, ಕೋಲ್ಕತ್ತಾದಲ್ಲಿ 2 ವಿಕೆಟ್ ಉರುಳಿಸಿದ್ದರು. ಇಂದೋರ್​ನಲ್ಲಿ ಏಕೈಕ ವಿಕೆಟ್ ಪಡೆದಿದ್ದರು. ಎಲ್ಲ ಮೂರು ಪಂದ್ಯದಲ್ಲೂ ಗ್ಲೇನ್ ಮ್ಯಾಕ್ಸ್​​ವೆಲ್ ವಿಕೆಟ್ ಪಡೆದಿರೋದು ವಿಶೇಷ.

ಬೆಂಗಳೂರಿನಲ್ಲಿ ಆಂಗ್ಲರ ಬೇಟೆಯಾಡಿದ್ದ ಚಹಲ್: ಭಾರತದ ಪರ ಬೆಸ್ಟ್​ ವಿಕೆಟ್ ಟೇಕರ್ ಆಗಿದ್ದು ಬೆಂಗಳೂರಿನಲ್ಲೇ

ಬೆಂಗಳೂರಿನಲ್ಲಿ ಇದೇ ವರ್ಷ ಫೆಬ್ರವರಿ 1ರಂದು ಭಾರತ-ಇಂಗ್ಲೆಂಡ್ ಟಿ20 ಪಂದ್ಯದಲ್ಲಿ ಮುಖಾಮುಖಿಯಾಗಿದ್ದವು. ಆ ಪಂದ್ಯದಲ್ಲಿ ಟೀಂ  ಇಂಡಿಯಾ 202 ರನ್​ ಬಾರಿಸಿತ್ತು. ಇಂಗ್ಲೆಂಡ್ ಸಹ ಉತ್ತಮವಾಗಿ ಚೇಸ್ ಮಾಡ್ತಿತ್ತು. ಆದ್ರೆ ಆಂಗ್ಲರ ಓಟಕ್ಕೆ ಬ್ರೇಕ್ ಹಾಕಿದ್ದು ಇದೇ ಯುಜವೇಂದ್ರ ಚಹಲ್. ಅಂದು 6 ವಿಕೆಟ್ ಪಡೆಯೋ ಮೂಲ್ಕ ಆಂಗ್ಲರ ಬೇಟೆಯಾಡಿಬಿಟ್ಟಿದ್ದರು. 4 ಓವರ್​ನಲ್ಲಿ 25 ರನ್ ನೀಡಿ 6 ವಿಕೆಟ್ ಪಡೆದು, ಟೀಂ  ಇಂಡಿಯಾ ಪರ ಬೆಸ್ಟ್​ ಬೌಲರ್ ಎನಿಸಿಕೊಂಡಿದ್ದರು.

ಹರ್ಯಾಣ ಬೌಲರ್​ಗೆ ಬೆಂಗಳೂರು 2ನೇ ತವರು. ಐಪಿಎಲ್​​ನಲ್ಲಿ ಆರ್​ಸಿಬಿ ಪರ ಆಡುವ ಚಹಲ್, ಬೆಂಗಳೂರು ಪಿಚ್​ನಲ್ಲಿ ಉತ್ತಮ ಪ್ರದರ್ಶನ ನೀಡ್ತಾರೆ. ಸದ್ಯ ಅದ್ಭುತ ಫಾರ್ಮ್​ನಲ್ಲಿರುವ ಚಹಾಲ್, ಇಲ್ಲೂ ಕಾಂಗರೂ ಬೇಟೆಯಾಡಲು ಸಜ್ಜಾಗಿದ್ದಾರೆ. ಬೆಂಗಳೂರಿನಲ್ಲಿ ಚಹಲ್ ಫರ್ಫಾಮೆನ್ಸ್ ನೋಡಿ ಆಗ್ಲೇ ಆಸ್ಟ್ರೇಲಿಯನ್ನರು ಬೆಚ್ಚಿಬಿದ್ದಿದ್ದಾರೆ. ಈಗ ಏನಿದ್ದರೂ ಚಹಲ್ ಮ್ಯಾಜಿಕ್ ನೋಡೋದೊಂದೇ ಬಾಕಿ.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಂಡರ್ 19 ಏಷ್ಯಾಕಪ್ ಫೈನಲ್: ಪಾಕ್ ಎದುರು ಮುಗ್ಗರಿಸಿದ ಭಾರತ; ವೈಭವ್ ಸೂರ್ಯವಂಶಿ ಕನಸು ನುಚ್ಚುನೂರು!
2026ರ ಟಿ20 ವಿಶ್ವಕಪ್‌ಗೆ ಭಾರತ ತಂಡದಲ್ಲಿ ಒಂದಲ್ಲ ಎರಡಲ್ಲ ಬರೋಬ್ಬರಿ 7 ಬದಲಾವಣೆ!