
ಮುಂಬೈ(ಮೇ.18): ಐಪಿಎಲ್ ಟೂರ್ನಿ ವೇಳೆ ಇಂಜುರಿಗೆ ತುತ್ತಾದ ಟೀಂ ಇಂಡಿಯಾ ಬ್ಯಾಟ್ಸ್ಮನ್ ಕೇದಾರ್ ಜಾಧವ್ ವಿಶ್ವಕಪ್ ಟೂರ್ನಿಗೆ ಅನುಮಾನ ಅನ್ನೋ ಮಾತುಗಳು ಕೇಳಿ ಬರುತ್ತಿತ್ತು. ಇದೀಗಿ ಬಿಸಿಸಿಐ ಕೇದಾರ್ ದಾಧವ್ ಫಿಟ್ನೆಸ್ ರಿಪೋರ್ಟ್ ಬಹಿರಂಗ ಪಡಿಸಿದೆ. ಕೇದಾರ್ ಜಾಧವ್ ಸಂಪೂರ್ಣ ಫಿಟ್ ಆಗಿದ್ದು, ವಿಶ್ವಕಪ್ ಟೂರ್ನಿ ಆಡಲಿದ್ದಾರೆ ಎಂದು ಹೇಳಿದೆ.
ಇದನ್ನೂ ಓದಿ: ವಿಶ್ವಕಪ್ ಟ್ರೋಫಿ ಕಹಾನಿ: ಈ ಹಿಂದೆ ಹೇಗಿತ್ತು? ಈ ಬಾರಿ ಹೇಗಿರತ್ತೇ?
ಚೆನ್ನೈ ಸೂಪರ್ ಕಿಂಗ್ಸ್ ಪರ ಅದ್ಬುತ ಪ್ರದರ್ಶನ ನೀಡುತ್ತಿದ್ದ ಕೇದಾರ್ ಫೀಲ್ಡಿಂಗ್ ವೇಳೆ ಭುಜಕ್ಕೆ ಗಾಯ ಮಾಡಿಕೊಂಡಿದ್ದರು. ತಕ್ಷಣವೇ ಕ್ರೀಡಾಂಗಣದಿಂದ ಹೊರನಡೆದ ಕೇದಾರ್, ಬಾಕಿ ಉಳಿದ ಐಪಿಎಲ್ ಪಂದ್ಯದಿಂದ ಹೊರಗುಳಿದಿದ್ದರು. ಇದೀಗ ಸಂಪೂರ್ಣ ಚೇತರಿಸಿಕೊಂಡಿರುವ ಕೇದಾರ್ ಜಾಧವ್, ಮೇ. 22 ರಂದು ಟೀಂ ಇಂಡಿಯಾ ಜೊತೆ ಇಂಗ್ಲೆಂಡ್ಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಬಿಸಿಸಿಐ ಹೇಳಿದೆ.
ಇದನ್ನೂ ಓದಿ: ವಿಶ್ವಕಪ್ 2019: ಪಾಕ್ ತಂಡಕ್ಕೆ ಮಾರಕ ವೇಗಿ ಆಯ್ಕೆ- ಶುರುವಾಯ್ತು ನಡುಕ!
ಬಿಸಿಸಿಐ ವರದಿ ಬಿಡುಗಡೆಯಾಗುತ್ತಿದ್ದಂತೆ ಅಂಬಾಟಿ ರಾಯುಡುಗೆ ನಿರಾಸೆಯಾಗಿದೆ. ವಿಶ್ವಕಪ್ ತಂಡದ ಆಯ್ಕೆ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದ ರಾಯುಡುಗೆ ಕೇದಾರ್ ಇಂಜುರಿಯಿಂದ ಸ್ಥಾನ ಸಿಗೋ ನಿರೀಕ್ಷೆಯಲ್ಲಿದ್ದರು. ಇಷ್ಟೇ ಅಲ್ಲ ಕೇದಾರ್ ಬದಲಿ ಆಟಗಾರನಾಗಿ ಆಯ್ಕೆ ಸಮಿತಿ ರಾಯುಡು ಸೂಚಿಸಿತ್ತು. ಇದೀಗ ಕೇದಾರ್ ಸಂಪೂರ್ಣ ಫಿಟ್ ಆಗಿರೋದು ರಾಯುಡು ಅವಕಾಶವನ್ನು ತಪ್ಪಿಸಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.