ಒಂದುವೇಳೆ ಮಳೆಯಿಂದ ಇಂದು ಪಂದ್ಯ ರದ್ದಾದರೆ ಏನಾಗಲಿದೆ..?

By Suvarna Web DeskFirst Published May 19, 2017, 5:28 PM IST
Highlights

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಬ್ ಏರ್ ವ್ಯವಸ್ಥೆಯಿದ್ದ ಮಳೆ ನಿಂತ ಕೆಲ ಸಮಯದಲ್ಲೇ ಪಂದ್ಯ ನಡೆಸಲು ಅವಕಾಶವಿದೆ.

ಬೆಂಗಳೂರು(ಮೇ.19): ಮಳೆಯಿಂದಾಗಿ ಮೂರು ಗಂಟೆಗೂ ಹೆಚ್ಚುಕಾಲ ಸ್ಥಗಿತಗೊಂಡಿದ್ದ ಎಲಿಮನೇಟರ್ ಪಂದ್ಯ ಕಡೇ ಕ್ಷಣದಲ್ಲಿ ಆರಂಭವಾಗಿ ಫಲಿತಾಂಶ ನೀಡಿತ್ತು.

ಇಂದಿನ ಮುಂಬೈ ಇಂಡಿಯನ್ಸ್ ಹಾಗೂ ಕೋಲ್ಕತಾ ನೈಟ್'ರೈಡರ್ಸ್ ನಡುವಿನ ಪಂದ್ಯಕ್ಕೂ ಮಳೆ ಭೀತಿ ಎದುರಾಗಿದೆ. ಇಂದಿನ ಪಂದ್ಯಕ್ಕೂ ಯಾವುದೇ ಮೀಸಲು ದಿನ ಇಲ್ಲದಿರುವುದರಿಂದ ಕೆಕೆಆರ್ ತಂಡ ಆತಂಕಕ್ಕೆ ಒಳಗಾಗಿದೆ.

ಒಂದುವೇಳೆ ಇಂದಿನ ಪಂದ್ಯ ಮಳೆಯಿಂದ ರದ್ದಾದರೆ, ಅಂಕಪಟ್ಟಿಯಲ್ಲಿ ಉತ್ತಮ ಸ್ಥಾನದಲ್ಲಿರುವ ಮುಂಬೈ ಇಂಡಿಯನ್ಸ್ ತಂಡ ಅನಾಯಾಸವಾಗಿ ಫೈನಲ್ ತಲುಪಲಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಬ್ ಏರ್ ವ್ಯವಸ್ಥೆಯಿದ್ದ ಮಳೆ ನಿಂತ ಕೆಲ ಸಮಯದಲ್ಲೇ ಪಂದ್ಯ ನಡೆಸಲು ಅವಕಾಶವಿದೆ. ಆದರೆ ನಿರಂತರ ಮಳೆ ಸುರಿದರೆ, ಪಂದ್ಯ ನಡೆಸುವ ಸಾಧ್ಯತೆ ಕಡಿಮೆಯಿರುತ್ತದೆ.

click me!