
ನವದೆಹಲಿ(ಆ.30): ಭಾರತೀಯ ಕುಸ್ತಿಪಟು ಯೋಗೇಶ್ವರ್ ದತ್ ಅವರಿಗೀಗ ಬೆಳ್ಳಿ ಯೋಗ ಒಲಿದು ಬಂದಿದೆ. 2012ರ ಲಂಡನ್ ಒಲಿಂಪಿಕ್ಸ್'ನಲ್ಲಿ ಕಂಚಿನ ಪದಕ ಗೆದ್ದಿದ್ದ ಯೋಗೇಶ್ವರ್ ಅವರ ಎದುರಾಳಿ ರಷ್ಯಾದ ಬೆಸಿಕ್ ಕುಡುಖೋವ್ ಅವರು ನಿಷೇಧಿತ ಪದಾರ್ಥ ಸೇವಿಸಿದ್ದು ಖಚಿತವಾದ ಹಿನ್ನೆಲೆಯಲ್ಲಿ ಬೆಳ್ಳಿ ಪದಕ ಭಾರತೀಯ ಕುಸ್ತಿಪಟುವಿನ ಪಾಲಾಗಲಿದೆ.
ಈ ಸಂತೋಷದ ಸುದ್ದಿಯನ್ನು ಟ್ವಿಟ್ಟರ್'ನಲ್ಲಿ ಭಾರತೀಯ ಮಾಜಿ ಆಟಗಾರ, ಸ್ಫೋಟಕ ಬ್ಯಾಟ್ಸ್'ಮನ್ ವಿರೇಂದ್ರ ಸೆಹ್ವಾಗ್ ಹಂಚಿಕೊಂಡಿದ್ದು ಹೀಗೆ:
'ವಾವ್ ಅಮೇರಿಕಾದಲ್ಲಿ ಕ್ರಿಕೆಟ್ ಅಪ್'ಗ್ರೇಡ್ ಆಯ್ತು, ನೆಹ್ರಾ ಸ್ಮಾರ್ಟ್'ಫೋನ್'ಗೆ ಅಪ್'ಗ್ರೇಡ್ ಆದ್ರು, ಈಗ ಯೋಗೇಶ್ವರ್ ದತ್ ಕಂಚಿನಿಂದ ಬೆಳ್ಳಿಗೆ ಅಪ್'ಗ್ರೇಡ್ ಆಗಲಿದ್ದಾರೆ' ಎಂದು ಟ್ವಿಟ್ ಮಾಡಿದ್ದಾರೆ.
ಆದರೆ, ವಿಶ್ವ ಕುಸ್ತಿ ಒಕ್ಕೂಟವು ಈ ಬಗ್ಗೆ ಭಾರತೀಯ ಕುಸ್ತಿ ಸಂಸ್ಥೆಗೆ ಅಧಿಕೃತವಾಗಿ ಲಿಖಿತ ಪತ್ರದ ಮೂಲಕ ದೃಢಪಡಿಸಬೇಕಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.