
ಮುಂಬೈ(ಸೆ.01): ಫ್ಲೋರಿಡಾದಲ್ಲಿ ನಡೆದ ಭಾರತ-ವಿಂಡೀಸ್ ಎರಡನೇ ಟಿ20 ಪಂದ್ಯ ರದ್ದಾಗಲು ಪಂದ್ಯದ ನೇರ ಪ್ರಸಾರದ ಗುತ್ತಿಗೆ ಪಡೆದಿದ್ದ ಟಿವಿ ಚಾನೆಲ್ ಕಾರಣವೆಂಬ ಆರೋಪ ಕೇಳಿಬಂದಿದೆ.
ಮಳೆಯಿಂದಾಗಿ ಭಾರತ ಮತ್ತು ವೆಸ್ಟ್ ಇಂಡೀಸ್ ಪಂದ್ಯ ರದ್ದಾಗಿತ್ತು. ಆದರೆ ಟಿವಿ ಸಂಸ್ಥೆಯ ತಾಂತ್ರಿಕ ಕಾರಣಗಳಿಂದಾಗಿ ನಿಗದಿತ ಸಮಯಕ್ಕಿಂತ ತಡವಾಗಿ ಪಂದ್ಯ ಆರಂಭಗೊಂಡಿತು.
ನಂತರ ಮಳೆ ಬಂದಿದ್ದರಿಂದ ಮೈದಾನ ಸಂಪೂರ್ಣವಾಗಿ ಒದ್ದೆಯಾಗಿದ್ದರಿಂದ ಪಂದ್ಯವನ್ನು ರದ್ದು ಮಾಡಲಾಯಿತು. ಸರಿಯಾಗಿ ಪ್ರಾರಂಭವಾಗಿದಿದ್ದರೆ ಆಗ ಭಾರತ ಕನಿಷ್ಠ 5 ಓವರ್ಗಳನ್ನು ಮುಗಿಸುತ್ತಿತ್ತು.
ಈ ವೇಳೆ ಡಕ್ ವರ್ತ್ ಲೂಯಿಸ್ ನಿಯಮದ ಅನ್ವಯ ಲೆಕ್ಕಾಚಾರ ಹಾಕಿ ಫಲಿತಾಂಶ ಕಂಡುಹಿಡಿಯಬಹುದಿತ್ತು. ಆದರೆ ಪಂದ್ಯ ಪ್ರಸಾರ ತಡವಾಗಿದ್ದರಿಂದ ಭಾರತದ ಸರಣಿ ಸೋಲಿಗೆ ಟಿವಿ ಚಾನೆಲ್ ಕಾರಣವಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.