ವೀರೂ ಟೀಂ ಇಂಡಿಯಾ ಕೋಚ್ ಆಗಲಿಲ್ಲ ಯಾಕೆ?: ಎರಡು ಎಡವಟ್ಟುಗಳಿಂದ ಕೈತಪ್ಪಿದ ಕೋಚ್ ಹುದ್ದೆ!

Published : Jul 17, 2017, 02:15 PM ISTUpdated : Apr 11, 2018, 12:51 PM IST
ವೀರೂ ಟೀಂ ಇಂಡಿಯಾ ಕೋಚ್ ಆಗಲಿಲ್ಲ ಯಾಕೆ?: ಎರಡು ಎಡವಟ್ಟುಗಳಿಂದ ಕೈತಪ್ಪಿದ ಕೋಚ್ ಹುದ್ದೆ!

ಸಾರಾಂಶ

ಟೀಂ ಇಂಡಿಯಾದಗೆ ರವಿ ಶಾಸ್ತ್ರಿ ಮುಖ್ಯಾ ಕೋಚ್​​ ಆಗಿ ಪ್ರವೇಶ ಕೊಟ್ಟಾಗಿದೆ. ಕೊಹ್ಲಿ ಹುಡುಗರ ಮೇಷ್ಟ್ರೂ ಆಗಿದ್ದಾರೆ. ಆದರೆ ಇಂದಿಗೂ ಭಾರತದ ಕೋಟ್ಯಾಂತರ ಜನಕ್ಕೆ ಕಾಡುತ್ತಿರುವ ಒಂದೇ ಒಂದು ಪ್ರಶ್ನೆ ಅಂದರೆ ವಿರೇಂದ್ರ ಸೆಹ್ವಾಗ್​ ಯಾಕೆ ಕೋಚ್​​ ಆಗಲಿಲ್ಲ ಎನ್ನುವುದು. ಬಿಸಿಸಿಐ ಸಲಹಾ ಸಮಿತಿಗೆ ಸೆಹ್ವಾಗ್​ ಹತ್ತಿರದವರಾದರೂ ಕೋಚ್​ ಯಾಕೆ ಆಗಲಿಲ್ಲ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.

ಮುಂಬೈ(ಜು.17): ಟೀಂ ಇಂಡಿಯಾದಗೆ ರವಿ ಶಾಸ್ತ್ರಿ ಮುಖ್ಯಾ ಕೋಚ್​​ ಆಗಿ ಪ್ರವೇಶ ಕೊಟ್ಟಾಗಿದೆ. ಕೊಹ್ಲಿ ಹುಡುಗರ ಮೇಷ್ಟ್ರೂ ಆಗಿದ್ದಾರೆ. ಆದರೆ ಇಂದಿಗೂ ಭಾರತದ ಕೋಟ್ಯಾಂತರ ಜನಕ್ಕೆ ಕಾಡುತ್ತಿರುವ ಒಂದೇ ಒಂದು ಪ್ರಶ್ನೆ ಅಂದರೆ ವಿರೇಂದ್ರ ಸೆಹ್ವಾಗ್​ ಯಾಕೆ ಕೋಚ್​​ ಆಗಲಿಲ್ಲ ಎನ್ನುವುದು. ಬಿಸಿಸಿಐ ಸಲಹಾ ಸಮಿತಿಗೆ ಸೆಹ್ವಾಗ್​ ಹತ್ತಿರದವರಾದರೂ ಕೋಚ್​ ಯಾಕೆ ಆಗಲಿಲ್ಲ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.

ಸಲಹಾ ಸಮಿತಿಯ ಫೇವರಾಗಿದ್ದರೂ ಸೆಹ್ವಾಗ್​ ಯಾಕೆ ನೇಮಕವಾಗಲಿಲ್ಲ..?

ಇದೊಂದು ಪ್ರಶ್ನೆ ಸದ್ಯ ಎಲ್ಲರನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಟೀಂ ಇಂಡಿಯಾದ ಕೋಚ್​​​ ಆಗುವ ಎಲ್ಲಾ ಅರ್ಹತೆ ಸೆಹ್ವಾಗ್​​'ರಲ್ಲಿ ಇದ್ದರೂ ಯಾಕೆ ಕೋಚ್​​​ ಆಗಲಿಲ್ಲ, ಸಲಹಾ ಸಮಿತಿಯಲ್ಲಿರುವ ಸಚಿನ್​ ತೆಂಡೂಲ್ಕರ್​​​, ವಿವಿಎಸ್​​​ ಲಕ್ಷ್ಮಣ್​​​ ಮತ್ತು ಸೌರವ್​ ಗಂಗೂಲಿರೊಂದಿಗೆ ಸೆಹ್ವಾಗ್​​ ಉತ್ತಮ ಭಾಂಧವ್ಯ ಹೊಂದಿದ್ದರೂ ಸೆಹ್ವಾಗ್​ರನ್ನ ಯಾಕೆ ನೇಮಕ ಮಾಡಲಿಲ್ಲ, ಸ್ವತಃ ಬಿಸಿಸಿಐಯೇ ಬಲವಂತವಾಗಿ ಅರ್ಜಿ ಸಲ್ಲಿಸಲು ಹೇಳಿತ್ತು. ಆದ್ರೂ ಕೋಚ್​​​ ಹುದ್ದೆಗೆ ಸೆಹ್ವಾಗ್​​ರನ್ನ ಯಾಕೆ ಕೋಚ್​​​​ ಆಗಿ ನೇಮಿಸಲಿಲ್ಲ ಎಂಬ ಪ್ರಶ್ನೆಗಳು ಸದ್ಯ ಎಲ್ಲರನ್ನೂ ಕಾಡುತ್ತಿದೆ. ಆದರೆ ಅದಕೆಲ್ಲಾ ಉತ್ತರ ಸ್ವತಃ ಸೆಹ್ವಾಗ್​.

​​​ತಮ್ಮ ತಲೆಯ ಮೇಲೆ ತಾವೇ ಕಲ್ಲು ಚಪ್ಪಡಿ ಎಳೆದುಕೊಂಡ್ರು

​​​ಅಂದು ಸೆಹ್ವಾಗ್​​ ಸರಿಯಾಗಿ ಇದ್ದಿದ್ದರೆ, ಇಂದು ರವಿಶಾಸ್ತ್ರಿ ಬದಲಿಗೆ ವಿರೇಂದ್ರ ಸೆಹ್ವಾಗ್​ ಟೀಂ ಇಂಡಿಯಾದ ಕೋಚ್​​​ ಆಗುತ್ತಿದ್ದರು. ಅವಮಾನ ತಪ್ಪಿಸಿಕೊಳ್ಳಲು ದೇಶ ಬಿಟ್ಟು ಹೋಗುವ ಸಂಧರ್ಭ ಬರುತ್ತಿರಲಿಲ್ಲ. ಸೆಹ್ವಾಗ್​​ ಮಾಡಿದ 2 ಎಡವಟ್ಟು ಇಂದು ಅವರಿಗೆ ಈ ಪರಿಸ್ಥಿತಿ ತಂದೊಡ್ಡಿದೆ.

ವಿರೂ ಮಾಡಿದ್ದ ಯಡವಟ್ಟುಗಳ ಬಗ್ಗೆ ಹೇಳುವುದಕ್ಕೂ ಮೊದಲು ಒಂದು ಇಂಟರೆಸ್ಟಿಂಗ್​ ವಿಷ್ಯವನ್ನು ಹೇಳಲೇಬೇಕು. ಸೆಹ್ವಾಗ್​​ ಇದೇ ತಿಂಗಳ 10ರಂದು ಸಲಹಾ ಸಮಿತಿ ಎದುರು ಸಂದರ್ಶನಕ್ಕೆ ತೆರಳುವುದಕ್ಕೂ ಮೊದಲು ಟೀಂ ಇಂಡಿಯಾ ನಾಯಕ ವಿರಾಟ್​​ ಕೊಹ್ಲಿಯನ್ನು ಸಂಪರ್ಕಿಸಿದ್ದರಂತೆ. ಕೊಹ್ಲಿಗೆ ಫೋನ್​ ಮಾಡಿ ತಾವು ಕೋಚ್​ ಆದರೆ ನಿನಗೇನು ಅಭಯಂತ್ರ ಇಲ್ಲವೇ ಎಂದು ಕೇಳಿದ್ದರಂತೆ. ಅದಕ್ಕೆ ಕೊಹ್ಲಿ ನಾನು ಕೋಚ್​​​ ನೇಮಕದ ವಿಷ್ಯಕ್ಕೆ ತಲೆ ಹಾಕುವುದಿಲ್ಲ ಎಂದಿದ್ದಾರಂತೆ. ಕೊಹ್ಲಿ ಹೀಗಂದ ಮೇಲೆನೇ ಸೆಹ್ವಾಗ್​ ಸಂದರ್ಶನಕ್ಕೆ ಹಾಜಾರಾಗಿದ್ದಂತೆ.

​​​ಸಂದರ್ಶನದಲ್ಲಿ ವೀಕ್​​​ ಪರ್ಫಾಮೆನ್ಸ್​​​..!

ಸೆಹ್ವಾಗ್​​ ಕೋಚ್​​​ ಸ್ಥಾನ ಕೈ ತಪ್ಪಲು ಮುಖ್ಯ ಕಾರಣವೆಂದರೆ ಸಂದರ್ಶನದಲ್ಲಿ ವಿಫಲರಾಗಿದ್ದು. ಕೊಹ್ಲಿಯಿಂದ ಗ್ರೀನ್​ ಸಿಗ್ನಲ್​ ಸಿಕ್ಕಿದ ಮೇಲೆ ಸಂದರ್ಶನಕ್ಕೆ ಹೋದ ವಿರೂ ಸಂದರ್ಶನದಲ್ಲಿ ಸಲಹಾ ಸಮಿತಿ ಕೇಳಿದ ಪ್ರಶ್ನೆಗೆ ಸರಿಯಾಗಿ ಉತ್ತರಿಸಲಿಲ್ಲವಂತೆ. ರವಿ ಶಾಸ್ತ್ರಿ ಮತ್ತು ಟಾಮ್​ ಮೂಡಿಗೆ ಹೋಲಿಸಿದ್ರೆ ಸೆಹ್ವಾಗ್​ ಪ್ರೆಸೆಂಟೇಷನ್​​ ತುಂಬಾನೆ ಕಳಪೆಯಾಗಿತ್ತಂತೆ. ವಿರೂರ ಪ್ರೆಸೆಂಟೇಷನ್ ಸಲಹಾ ಸಮಿತಿಗೂ ಬೇಸರ ತಂದಿತ್ತಂತೆ.

​​​ಸೆಹ್ವಾಗ್​​ ಜೊತೆ ಅವರ ತಂಡವನ್ನೂ ಕರೆತರಲು ಪ್ಲಾನ್​​​

ವಿರೂಗೆ ಕೋಚ್​​​ ಸ್ಥಾನ ಕೈ ತಪ್ಪಲು ಎರಡನೇ ಮುಖ್ಯ ಕಾರಣವಾಗಿದ್ದೆ ಅವರ ಒಂದು ಕಂಡಿಷನ್​. ತಾವು ಕೋಚ್​​ ಆಗಿ ನೇಮಕವಾದರೆ ಅವರದ್ದೇ ಅದ ಸಪೋರ್ಟಿಂಗ್​ ಸ್ಟಾಫ್​​ರನ್ನ ಕರೆತರುವ ಪ್ಲಾನ್​ ಮಾಡಿದ್ದರಂತೆ. ಅದನ್ನ ಬಿಸಿಸಿಐ ಬಳಿಯೂ ಪ್ರಸ್ತಾಪಿಸಿದ್ದರಂತೆ. ಅವರ ಪ್ಲಾನ್​ ಪ್ರಕಾರ ಫಿಸಿಯೋ ಆಗಿ ಅಮಿತ್​​​ ತ್ಯಾಗಿಯನ್ನು ನೇಮಕ ಮಾಡಬೇಕಿತ್ತಂತೆ, ಸಹಾಯಕ ಕೋಚ್​​ ಆಗಿ ಮಿಥುನ್​ ಮನಾಸ್​​​ರನ್ನ ನೇಮಿಸಬೇಕಿತ್ತಂತೆ. ಈ ಷರತ್ತು ಬಿಸಿಸಿಐಗೆ ಇಷ್ಟವಾಗಲಿಲ್ಲ. ಇದು ಸೆಹ್ವಾಗ್​​ ಕೋಚ್​​​​ ನೇಮಕಕ್ಕೆ ಭಾರಿ ಹಿನ್ನಡೆಯಾಯಿತು.

ಇವೆರಡು ಕಾರಣಗಳಿಂದ ಸೆಹ್ವಾಗ್​​ ತಮ್ಮ ಕೋಚ್​​​ ಸ್ಥಾನವನ್ನು ಕಳೆದುಕೊಂಡರಂತೆ. ಸದ್ಯ ಕೋಚ್​​​ ಹುದ್ದೆ ಕೈ ತಪ್ಪಿದ ಬೇಸರದಲ್ಲಿರುವ ವಿರೂ ವಿದೇಶಕ್ಕೆ ಹಾರಿದ್ದಾರೆ. ತಮ್ಮ ನೋವನ್ನ ಮರೆಯಲು ಕೆನಡಾಗೆ ಹೋಗಿದ್ದಾರೆ. ಇಷ್ಟರಲ್ಲಾಗಲೇ ಸೆಹ್ವಾಗ್​ಗೆ ತಮ್ಮ ತಪ್ಪಿನ ಅರಿವಾಗಿರುತ್ತೆ. ತಮ್ಮ ತಲೆಯ ಮೇಲೆ ತಾವೆ ಕಲ್ಲು ಚಪ್ಪಡಿ ಎಳದುಕೊಂಡಿರೋದು ತಿಳಿದಿರುತ್ತೆ. ಆದ್ರೆ ಕಾಲ ಮೀರಿದ್ದಾಗಿದೆ. ಈಗ ಚಿಂತಿಸಿ ಪ್ರಯೋಜನವಿಲ್ಲ. ಇನ್ನೂ ಮುಂದಾದರೂ ಯೋಚಿಸಿ ಮುನ್ನಡೆಯುವುದು ಉತ್ತಮ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಹೃತಿಕ್‌ ರೋಶನ್‌ 'ಕ್ರಿಶ್‌' ಸಿನಿಮಾದಲ್ಲಿ ಬಾಲನಟಿಯಾಗಿದ್ರಾ ಧೋನಿ ಪತ್ನಿ ಸಾಕ್ಷಿ?
T20I ನೂರು ಸಿಕ್ಸರ್ ಕ್ಲಬ್ ಸೇರಿದ ಹಾರ್ದಿಕ್ ಪಾಂಡ್ಯ; ರೋಹಿತ್ ರೆಕಾರ್ಡ್ ಮುರಿತಾರಾ ಈ ಆಲ್ರೌಂಡರ್?