ಐಪಿಎಲ್ ಬೆಟ್ಟಿಂಗ್: ಅರ್ಬಾಜ್ ಖಾನ್ ಬಳಿಕ ಮತ್ತಿಬ್ಬರು ಬಾಲಿವುಡ್ ನಿರ್ಮಾಪಕರಿಗೆ ಸಮನ್ಸ್

Published : Jun 04, 2018, 08:10 PM ISTUpdated : Jun 04, 2018, 08:12 PM IST
ಐಪಿಎಲ್ ಬೆಟ್ಟಿಂಗ್: ಅರ್ಬಾಜ್ ಖಾನ್ ಬಳಿಕ ಮತ್ತಿಬ್ಬರು ಬಾಲಿವುಡ್ ನಿರ್ಮಾಪಕರಿಗೆ ಸಮನ್ಸ್

ಸಾರಾಂಶ

ಐಪಿಎಲ್ ಬೆಟ್ಟಿಂಗ್ ಪ್ರಕರಣದಲ್ಲಿ ನಟ, ನಿರ್ಮಾಪಕ ಅರ್ಬಾಜ್ ಖಾನ್ ತಪ್ಪೋಪ್ಪಿಕೊಂಡ ಬೆನ್ನಲ್ಲೇ, ಮತ್ತಿಬ್ಬರು ಬಾಲಿವುಡ್ ನಿರ್ಮಾಪಕರಿಗೆ ಪೊಲೀಸರು ಸಮನ್ಸ್ ನೀಡಲಾಗಿದೆ.  ಇದೀಗ ಐಪಿಎಲ್ ಬೆಟ್ಟಿಂಗ್ ಪ್ರಕರಣದಲ್ಲಿ ಮತ್ತಷ್ಟು ಬಾಲಿವುಡ್ ದಿಗ್ಗಜರು ಪಾಲ್ಗೊಂಡಿರುವ ಶಂಕೆ ವ್ಯಕ್ತವಾಗಿದೆ.

ಮುಂಬೈ(ಜೂನ್.4) ಐಪಿಎಲ್ ಬೆಟ್ಟಿಂಗ್ ಪ್ರಕರಣದಲ್ಲಿ ಬಾಲಿವುಡ್ ನಿರ್ಮಾಪಕ ಅರ್ಬಾಜ್ ಖಾನ್ ಪೊಲೀಸರ ಮುಂದೆ ವಿಚಾರಣಗೆ ಹಾಜರಾದ ಬೆನ್ನಲ್ಲೇ, ಇದೀಗ ಮತ್ತಿಬ್ಬರು ಬಾಲಿವುಡ್ ನಿರ್ಮಾಪಕರಿಗೆ ಥಾಣೆ ವಿಶೇಷ ದಳದ ಪೊಲೀಸರು ಸಮನ್ಸ್ ನೀಡಿದ್ದಾರೆ. 

ಐಪಿಎಲ್ ಬೆಟ್ಟಿಂಗ್ ಆರೋಪಡಿ ಅರ್ಬಾಜ್ ಖಾನ್ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಿದ್ದರು. ಐಪಿಎಲ್ ಬೆಟ್ಟಿಂಗ್ ನಡೆಸಿರೋದನ್ನ ತಪ್ಪಿಕೊಂಡಿರುವ ಅರ್ಬಾಜ್, ಮತ್ತಷ್ಟು ಮಾಹಿತಿಗಳನ್ನ ಪೊಲೀಸರಿಗೆ ಬಾಯ್ಬಿಬಿಟ್ಟಿದ್ದಾರೆ. ಈ ಮಾಹಿತ ಆಧಾರದಡಿ ಇದೀಗ ಪೊಲೀಸರು ಬಾಲಿವುಡ್ ನಿರ್ಮಾಪಕರಾದ ಪರಾಗ್ ಸಾಂಗ್ವಿ ಹಾಗೂ ಮುರಾದ್ ಖೈತಾನ್‌ಗೆ ಸಮನ್ಸ್ ನೀಡಲಾಗಿದೆ. ಜೂನ್ 5 ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.

ಐಪಿಎಲ್ ಬೆಟ್ಟಿಂಗ್: ತಪ್ಪೊಪ್ಪಿಕೊಂಡ ಅರ್ಬಾಜ್..!

ಮೇ 16ರಂದು ಮುಂಬೈನ ಥಾಣೆ ಪೊಲೀಸರು ಐಪಿಎಲ್ ಬೆಟ್ಟಿಂಗ್ ನಡೆಯುತ್ತಿದೆ ಎಂಬ ಮಾಹಿತಿ ಮೇರೆಗೆ ದೊಂಬಿವಿಲಿಯಲ್ಲಿರುವ ಕಟ್ಟದ ಮೇಲೆ ದಾಳಿ ನಡೆಸಿ ಮೂವರನ್ನ ಬಂಧಿಸಿದ್ದರು. ಇವರ ವಿಚಾರಣೆ ಬಳಿಕ ಇಬ್ಬರು ಬುಕ್ಕಿಗಳನ್ನ ಬಂಧಿಸಲಾಗಿತ್ತು. ಇನ್ನು ಮೇ 29 ರಂದು ಥಾಣೆಯ ಕಲ್ಯಾಣ್ ಸೆಷನ್ಸ್ ಆವರಣದಲ್ಲಿ ಪ್ರಮುಖ ಬುಕ್ಕಿ ಸೋನು ಜಲನ್‌ನನ್ನು ಬಂಧಿಸಿದ್ದರು. ವಿಚಾರಣೆ ವೇಳೆ ಜಲನ್ ಅರ್ಬಾಜ್ ಖಾನ್ ಹೆಸರು ಬಾಯ್ಬಿಬಿಟ್ಟಿದ್ದ. ಹೀಗಾಗಿ ಥಾಣೆ ಪೊಲೀಸರು ಅರ್ಬಾಜ್ ಖಾನ್‌ಗೆ ಸಮನ್ಸ್ ಜಾರಿ ಮಾಡಿದ್ದರು. 

ಅರ್ಬಾಜ್ ಖಾನ್ ಸಂಸಾರಕ್ಕೆ ಬೆಂಕಿ ಇಟ್ಟಿದ್ದು ಇದೇ ಐಪಿಎಲ್ ಬೆಟ್ಟಿಂಗ್!

ಜೂನ್ 2 ರಂದು ಪೊಲೀಸರ ಮುಂದೆ ವಿಚಾರಣೆಗೆ ಹಾಜರಾದ ಅರ್ಬಾಜ್ ಖಾನ್ ಐಪಿಎಲ್ ಬೆಟ್ಟಿಂಗ್ ನಡೆಸಿರೋದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಕಳೆದ 6 ವರ್ಷಗಳಿಂದ ಬೆಟ್ಟಿಂಗ್ ನಡೆಸುತ್ತಿರೋದಾಗಿ ಅರ್ಬಾಜ್ ಹೇಳಿದ್ದಾರೆ. ಇಷ್ಟೇ ಅಲ್ಲ ಬೆಟ್ಟಿಂಗ್‌ನಿಂದ 2.8 ಕೋಟಿ ರೂಪಾಯಿ ಕಳೆದುಕೊಂಡಿರುವುದಾಗಿ ಹೇಳಿದ್ದಾರೆ. ಅರ್ಬಾಜ್ ಖಾನ್ ಹೇಳಿಕೆಗಳನ್ನ ದಾಖಲಿಸಿಕೊಂಡಿರುವ ಥಾಣೆ ಪೊಲೀಸರು ತನಿಖೆಯನ್ನ ಮತ್ತಷ್ಟು ಚುರುಕುಗೊಳಿಸಿದ್ದಾರೆ. ಐಪಿಎಲ್ ಬೆಟ್ಟಿಂಗ್ ಪ್ರಕರಣ ಅಗೆದಷ್ಟು ಸ್ಫೋಟಕ ಮಾಹಿತಿಗಳು ಬಹಿರಂಗವಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ಬೆಟ್ಟಿಂಗ್ ಪ್ರಕರಣ ಮತ್ತಷ್ಟು ತಿರುವು ಪಡೆದುಕೊಳ್ಳುವುದರಲ್ಲಿ ಅನುಮಾನವಿಲ್ಲ.


 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ
ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?