ನಿವೃತ್ತಿ ಹಿಂಪಡೆದ ರಾಯುಡುಗೆ ಜಾಕ್‌ಪಾಟ್..!

Published : Sep 15, 2019, 04:52 PM IST
ನಿವೃತ್ತಿ ಹಿಂಪಡೆದ ರಾಯುಡುಗೆ ಜಾಕ್‌ಪಾಟ್..!

ಸಾರಾಂಶ

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿ ಆ ಬಳಿಕ ನಿವೃತ್ತಿ ತೀರ್ಮಾನದಿಂದ ಹಿಂದೆ ಸರಿದಿದ್ದ ಅಂಬಟಿ ರಾಯುಡು ಅದೃಷ್ಟ ಖುಲಾಯಿದೆ. ಅಷ್ಟಕ್ಕೂ ಏನಾಯ್ತು, ನೀವೇ ನೋಡಿ... 

ಹೈದ​ರಾ​ಬಾದ್‌[ಸೆ.15]: ಐಸಿಸಿ ಏಕ​ದಿನ ವಿಶ್ವ​ಕಪ್‌ಗೆ ಆಯ್ಕೆಯಾಗದಕ್ಕೆ ಬೇಸರಗೊಂಡು ಅಂತಾ​ರಾ​ಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದ ಅಂಬಟಿ ರಾಯು​ಡು, ಇತ್ತೀ​ಚೆಗಷ್ಟೇ ನಿವೃ​ತ್ತಿ​ಯಿಂದ ಹೊರ​ಬಂದಿ​ದ್ದರು. ಅವರಿಗೀಗ ಅದೃಷ್ಟ ಕೂಡಿಬಂದಿದೆ.

ವಿದಾಯ ನಿರ್ಧಾರ ಬದಲು; 2 ತಿಂಗಳ ಬಳಿಕ U ಟರ್ನ್ ಹೊಡೆದ ರಾಯುಡು!

ಹೌದು, ಮುಂಬ​ರುವ ವಿಜಯ್‌ ಹಜಾರೆ ಟ್ರೋಫಿ​ಯಲ್ಲಿ ಅಂಬಟಿ ರಾಯುಡುಗೆ ಹೈದ​ರಾ​ಬಾದ್‌ ತಂಡ​ದ ನಾಯಕತ್ವ ಪಟ್ಟ ನೀಡಲಾಗಿದೆ. ಅಕ್ಷತ್‌ ರೆಡ್ಡಿ ಬದ​ಲಿಗೆ ರಾಯು​ಡು ನಾಯ​ಕ​ನಾಗಿ ನೇಮ​ಕ​ಗೊಂಡಿ​ದ್ದಾರೆ. ‘ರಾ​ಯುಡು ಅವ​ರಲ್ಲಿ ಇನ್ನೂ 5 ವರ್ಷ ಕ್ರಿಕೆಟ್‌ ಬಾಕಿ ಇದೆ’ ಎಂದು ಹೈದ​ರಾ​ಬಾದ್‌ ಕ್ರಿಕೆಟ್‌ ಸಂಸ್ಥೆಯ ಆಯ್ಕೆಗಾರ ನೋಲ್‌ ಡೇವಿಡ್‌ ಹೇಳಿ​ದ್ದಾರೆ. ಈ ತಿಂಗಳು 24ರಿಂದ ವಿಜಯ್‌ ಹಜಾರೆ ಟೂರ್ನಿ ಆರಂಭ​ಗೊ​ಳ್ಳ​ಲಿದೆ.

ವಿಜಯ್ ಹಜಾರೆ ಟ್ರೋಫಿಗೆ ದೆಹಲಿ ಸಂಭಾವ್ಯ ತಂಡ ಪ್ರಕಟ; ಕೊಹ್ಲಿಗೆ ಸ್ಥಾನ!

ಟೀಂ ಇಂಡಿಯಾದ ದಿಗ್ಗಜ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್, ಹೈದ​ರಾ​ಬಾದ್‌ ಕ್ರಿಕೆಟ್‌ ಸಂಸ್ಥೆಯ ಆಯ್ಕೆಗಾರ ನೋಲ್‌ ಡೇವಿಡ್‌ ಹಾಗೂ ಚೆನ್ನೈ ಸೂಪರ್’ಕಿಂಗ್ಸ್ ಆಡಳಿತ ಮಂಡಳಿ ರಾಯುಡು ನಿವೃತ್ತಿ ಹಿಂಪಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ರಾಯುಡು ಭಾರತ ಪರ 55 ಏಕದಿನ ಹಾಗೂ 6 ಟಿ20 ಪಂದ್ಯಗಳನ್ನಾಡಿದ್ದಾರೆ. 
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ
ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?