ಪ್ರವಾಹ ಸಂತ್ರಸ್ತರ ನೆರವಿಗೆ ನಡಾಲ್-ದಿಗ್ಗಜ ಟೆನಿಸ್ ಪಟು ಈಗ ಜನರ ಸೇವಕ!

Published : Oct 11, 2018, 07:48 PM IST
ಪ್ರವಾಹ ಸಂತ್ರಸ್ತರ ನೆರವಿಗೆ ನಡಾಲ್-ದಿಗ್ಗಜ ಟೆನಿಸ್ ಪಟು ಈಗ ಜನರ ಸೇವಕ!

ಸಾರಾಂಶ

ಟೆನಿಸ್ ಕ್ಷೇತ್ರದ ದಿಗ್ಗಜ ರಾಫೆಲ್ ನಡಾಲ್ ಇದೀಗ ಜನರ ಸೇವಕನಾಗಿದ್ದಾರೆ. ಪ್ರವಾಹಕ್ಕೆ ಸಿಲುಕಿ ತತ್ತರಿಸಿರುವ ಜನರ ರಕ್ಷಣೆಗೆ ಸ್ವತಃ ನಡಾಲ್ ಧಾವಿಸಿದ್ದಾರೆ. ಇಲ್ಲಿದೆ ನಡಾಲ್ ಮಾನವೀಯತೆಯ ಸ್ಟೋರಿ.

ಮೋಜೋರ್ಕಾ(ಅ.11): ಟೆನಿಸಿ ದಿಗ್ಗಜ ರಾಫೆಲ್ ನಡಾಲ್ ಮೈದಾನದಲ್ಲಿ ಅಗ್ರೆಸ್ಸಿವ್ ಕ್ರೀಡಾಪಟು. ಆದರೆ ಮೈದಾನದ ಹೊರಗೆ ಮಾನವೀಯತೆಯ ಪ್ರತಿರೂಪ. ಇತ್ತೀಚೆಗೆ ಸುರಿದ ಭೀಕರ ಮಳೆಗೆ 10ಕ್ಕೂ ಹೆಚ್ಚು ಜನ ಸಾವೀಗೀಡಾಗಿದ್ದರೆ, ಹಲವರು ಆಶ್ರಯ ತಾಣಗಳ ಮೊರೆ ಹೋಗಿದ್ದಾರೆ. ಇದೀಗ ಪ್ರವಾಹದಿಂದ ತತ್ತರಿಸಿರುವ ಜನರ ರಕ್ಷಣೆಗೆ ಸ್ವತಃ ಟೆನಿಸ್ ದಿಗ್ಗಜ ರಾಫೆಲ್ ನಡಾಲ್ ಧಾವಿಸಿದ್ದಾರೆ.

ಪ್ರವಾಹದಲ್ಲಿ ಮನೆ ಕಳೆದುಕೊಂಡ ಜನರನ್ನ ಕೆರದುಕೊಂಡು ಬಂದು ತಮ್ಮ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ಆಶ್ರಯ ನೀಡಿದ್ದಾರೆ. ಅವರಿಗೆ ಊಟ ವಸತಿ ಸೇರಿದಂತೆ ಇತರ ಸೌಲಭ್ಯಗಳನ್ನ ನೀಡಿದ್ದಾರೆ.

ಮೋಜಾರ್ಕೋದಲ್ಲಿ  ಕೆಸರು ನೀರು ನುಗ್ಗಿದ ಮನೆಗಳಿಗೆ ರಕ್ಷಣಾ ಪಡೆಯೊಂದಿಗೆ ತೆರಳಿದ ನಡಾಲ್ ಸ್ವಚ್ಚತಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಸ್ಪೇನ್ ಪ್ರವಾಹ ಸಂತ್ರಸ್ಥರ ಹೊಸ ಬದುಕು ಕಟ್ಟಿಕೊಡಲು ನಡಾಲ್ ಅವಿರತ ಪ್ರಯತ್ನ ಮಾಡುತ್ತಿದ್ದಾರೆ. ಈ ಟೆನಿಸ್ ದಿಗ್ಗಜ ಇದೀಗ ಜನರ ಸೇವಕನಾಗಿ ದುಡಿಯುತ್ತಿದ್ದಾರೆ. 
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

U19 Asia Cup ವೈಭವ್ ಸೂರ್ಯವಂಶಿ ದ್ವಿಶತಕ ಜಸ್ಟ್‌ ಮಿಸ್; ಉದ್ಘಾಟನಾ ಪಂದ್ಯದಲ್ಲೇ ಬೃಹತ್ ಮೊತ್ತ ಗಳಿಸಿದ ಭಾರತ!
U19 Asia Cup: ಮತ್ತೆ ಸಿಕ್ಸರ್ ಸುರಿಮಳೆ ಹರಿಸಿ ಸ್ಪೋಟಕ ಶತಕ ಚಚ್ಚಿದ ವೈಭವ್ ಸೂರ್ಯವಂಶಿ!