
ನವದೆಹಲಿ(ಜೂ.07): ಟೀಂ ಇಂಡಿಯಾದ ಅನುಭವಿ ಆಫ್ ಸ್ಪಿನ್ನರ್ ಆರ್.ಅಶ್ವಿನ್ ಅವರನ್ನು ವಿರೇಂದ್ರ ಸೆಹ್ವಾಗ್ ಬೆಚ್ಚಿಬೀಳಿಸಿದ ಕುತೂಹಲಕಾರಿ ಮಾಹಿತಿಯನ್ನು ಹೊರಹಾಕಿದ್ದಾರೆ.
ಹೌದು ಒಮ್ಮೆ ಅಶ್ವಿನ್ ನೆಟ್'ನಲ್ಲಿ ಬೌಲಿಂಗ್ ಮಾಡುವ ವೇಳೆ ಸೆಹ್ವಾಗ್ ತಮ್ಮ ಆತ್ಮಸ್ಥೈರ್ಯಗೆಡಿಸಿದ್ದರು ಎನ್ನುವ ವಿಷಯವನ್ನು ಬಹಿರಂಗಪಡಿಸಿದ್ದಾರೆ. ‘ವಾಟ್ ದ ಡಕ್' ಕಾರ್ಯಕ್ರಮದಲ್ಲಿ ಮಾತನಾಡಿರುವ ಅಶ್ವಿನ್, ಶ್ರೀಲಂಕಾ ಪ್ರವಾಸವೊಂದರಲ್ಲಿ ಅಭ್ಯಾಸದ ವೇಳೆ ಸೆಹ್ವಾಗ್ ತಾವು ಬೌಲ್ ಮಾಡಿದ ಎಲ್ಲಾ ಎಸೆತಗಳನ್ನೂ ಬೌಂಡರಿ ಬಾರಿಸುತ್ತಿದ್ದರು ಎಂದಿದ್ದಾರೆ.
ಪ್ರತಿ ಎಸೆತವನ್ನು ಬೇರೆ-ಬೇರೆ ರೀತಿ ಹಾಕಿದರೂ ಅನಾಯಾಸವಾಗಿ ಬೌಂಡರಿ ಬಾರಿಸುವ ಮೂಲಕ ನನ್ನನ್ನು ವೀರೂ ತಬ್ಬಿಬ್ಬು ಮಾಡಿದ್ದರು ಎಂದು ಚೆನ್ನೈ ಸ್ಪಿನ್ನರ್ ಬಹುದಿನದ ಗುಟ್ಟೊಂದನ್ನು ಹೊರಗೆಡುವಿದ್ದಾರೆ.
ಒಂದುವೇಳೆ ಸಚಿನ್ ಇಲ್ಲವೇ ಧೋನಿ ಬಳಿ ಸಲಹೆ ಕೇಳಿದ್ದರೆ, ರಚನಾತ್ಮಕ ಸಲಹೆ ನೀಡುತ್ತಿದ್ದರು, ಆದರೆ ವೀರೂ ಮಾತ್ರ ಹೇಳಿದ್ದು ಹೀಗೆ ಎಂದಿದ್ದಾರೆ.
‘ಅಭ್ಯಾಸದ ಬಳಿಕ ನಾನು ವೀರೂ ಬಳಿ ಕೇಳಿದೆ, ಬೌಲಿಂಗ್'ನಲ್ಲಿ ಏನು ಬದಲಾವಣೆ ಮಾಡಿಕೊಳ್ಳಬೇಕು ಎಂದು. ಅದಕ್ಕೆ ಅವರು ಆಫ್ ಸ್ಪಿನ್ನರ್'ಗಳನ್ನು ನಾನು ಬೌಲರ್'ಗಳೆಂದೇ ಪರಿಗಣಿಸುವುದಿಲ್ಲ ಎಂದು ನನ್ನ ಆತ್ಮಸ್ಥೈರ್ಯ ಕುಗ್ಗಿಸಿದ್ದರು' ಎಂದು ಹೇಳಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.