ಸ್ಮಿತ್ ಪಡೆ ಎಚ್ಚರಿಸಿದ ಪಂಟರ್

Published : Jan 27, 2017, 12:58 PM ISTUpdated : Apr 11, 2018, 12:43 PM IST
ಸ್ಮಿತ್ ಪಡೆ ಎಚ್ಚರಿಸಿದ ಪಂಟರ್

ಸಾರಾಂಶ

ನಮ್ಮ ನೆಲದಲ್ಲಿ ಭಾರತವನ್ನು ಮಣಿಸಿದೆವಾದರೂ, ಭಾರತ ಪ್ರವಾಸ ಮಾತ್ರ ಅವರಿಗೆ ಕಬ್ಬಿಣದ ಕಡಲೆಯಾಗಲಿದೆ ಆಸೀಸ್ ಪರ ಎರಡು ವಿಶ್ವಕಪ್ ಗೆದ್ದುಕೊಟ್ಟ ಪಾಂಟಿಂಗ್ ಹೇಳಿದ್ದಾರೆ.

ಮೆಲ್ಬೋರ್ನ್(ಜ.27): ಮುಂಬರುವ ಭಾರತ ಪ್ರವಾಸದಲ್ಲಿ ಆಸ್ಟ್ರೇಲಿಯಾ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ ಎಂದು ತವರಿನ ತಂಡವನ್ನು ಮಾಜಿ ನಾಯಕ ರಿಕಿ ಪಾಂಟಿಂಗ್ ಎಚ್ಚರಿಸಿದ್ದಾರೆ.

‘‘ಮುಂದಿನ ತಿಂಗಳು ಸ್ಟೀವ್ ಸ್ಮಿತ್ ಬಳಗ ಭಾರತ ಪ್ರವಾಸ ಕೈಗೊಳ್ಳುತ್ತದೆ. ಕಳೆದ ಬಾರಿ 4-0ಯಿಂದ ನಮ್ಮ ನೆಲದಲ್ಲಿ ಭಾರತವನ್ನು ಮಣಿಸಿದೆವಾದರೂ, ಭಾರತ ಪ್ರವಾಸ ಮಾತ್ರ ಅವರಿಗೆ ಕಬ್ಬಿಣದ ಕಡಲೆಯಾಗಲಿದೆ ಆಸೀಸ್ ಪರ ಎರಡು ವಿಶ್ವಕಪ್ ಗೆದ್ದುಕೊಟ್ಟ ಪಾಂಟಿಂಗ್ ಹೇಳಿದ್ದಾರೆ.

ಭಾರತ ಪ್ರವಾಸ ಪ್ರತಿಯೊಂದು ತಂಡಕ್ಕೂ ಕಠಿಣ ಸವಾಲೇ ಸರಿ. ಆರಂಭದಲ್ಲಿ ಬ್ಯಾಟಿಂಗ್ ಸ್ನೇಹಿಯಾದರೂ ನಂತರದ ದಿನಗಳಲ್ಲಿ ಪಿಚ್ ತಿರುವು ಪಡೆದುಕೊಳ್ಳಲಿದೆ. ಇದು ಯುವ ಕ್ರಿಕೆಟಿಗರಿಗೆ ಸತ್ವ ಪರೀಕ್ಷೆಯಾಗಲಿದೆ ಎಂದು ಪಂಟರ್ ತಿಳಿಸಿದ್ದಾರೆ.

ಮುಖ್ಯವಾಗಿ ಕಳೆದ ಆಗಸ್ಟ್ ತಿಂಗಳಿನಲ್ಲಿ ಲಂಕಾ ಪ್ರವಾಸ ಕೈಗೊಂಡಿದ್ದ ಆಸೀಸ್ 0-3ರಿಂದ ಕ್ಲೀನ್‌'ಸ್ವೀಪ್ ಮುಖಭಂಗಕ್ಕೆ ಗುರಿಯಾಗಿತ್ತು. ಹೆಚ್ಚೂ ಕಮ್ಮಿ ಭಾರತದ ಪಿಚ್ ಕೂಡ ಲಂಕಾದ ಪಿಚ್‌'ನಂತೆಯೇ ಇರುವ ಹಿನ್ನೆಲೆಯಲ್ಲಿ ಸ್ಮಿತ್ ಬಳಗ ಭಾರೀ ಸವಾಲನ್ನೆದುರಿಸಬೇಕಿದೆ’’ ಎಂದು ಪಾಂಟಿಂಗ್ ಮುನ್ನೆಚ್ಚರಿಸಿದ್ದಾರೆ.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ
ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?