ಪ್ರೊ ಕಬಡ್ಡಿ 2018: ಬೆಂಗಳೂರು ತಂಡಕ್ಕೆ ಮೊದಲ ಸೋಲು!

Published : Oct 22, 2018, 09:24 AM IST
ಪ್ರೊ ಕಬಡ್ಡಿ 2018: ಬೆಂಗಳೂರು ತಂಡಕ್ಕೆ ಮೊದಲ ಸೋಲು!

ಸಾರಾಂಶ

ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಬೆಂಗಳೂರು ಬುಲ್ಸ್ ಮೊದಲ ಸೋಲು ಅನುಭವಿಸಿದೆ. ಗೆಲುವಿನ ಅಲೆಯಲ್ಲಿದ್ದ ಬೆಂಗಳೂರು ತಂಡಕ್ಕೆ ಪುಣೇರಿ ಪಲ್ಟಾನ್ ಹೊಡೆತ ನೀಡಿದೆ. ದ್ವಿತೀಯ ಪಂದ್ಯದಲ್ಲಿ ಡೆಲ್ಲಿ ಗೆಲುವಿನ ನಗೆ ಬೀರಿದೆ. ಇಲ್ಲಿದೆ ಪಂದ್ಯ ದ ಹೈಲೈಟ್ಸ್

ಪುಣೆ(ಅ.22): ಕೊನೆಯ ಕ್ಷಣದವರೆಗೂ ರೋಚಕತೆ ಕಾಯ್ದುಕೊಂಡ ಪಂದ್ಯದಲ್ಲಿ ಪುಣೇರಿ ಪಲ್ಟನ್ 27-25 ರಿಂದ ಬೆಂಗಳೂರು ಬುಲ್ಸ್ ವಿರುದ್ಧ ಗೆಲುವು ಸಾಧಿಸಿದೆ. ಈ ಮೂಲಕ ಪುಣೆ ತಂಡ ತವರಿನ ಅಂಕಣದಲ್ಲಿ ಹ್ಯಾಟ್ರಿಕ್ ಗೆಲುವು ಪಡೆದರೆ, ಬುಲ್ಸ್ ಕೂಟದಲ್ಲಿ ಮೊದಲ ಸೋಲುಂಡಿತು.

ಭಾನುವಾರ ಇಲ್ಲಿ ನಡೆದ ಅಂತರ ವಲಯದ 2ನೇ ಪಂದ್ಯದ ಮೊದಲನೇ ಅವಧಿಯಲ್ಲಿ 13-10 ರಿಂದ ಮುನ್ನಡೆ ಪಡೆದ ಬುಲ್ಸ್ ಎರಡನೇ ಅವಧಿಯಲ್ಲಿಯೂ ಅದ್ಭುತ ಪ್ರದರ್ಶನ ನೀಡುವ ಸೂಚನೆಯನ್ನು ಆರಂಭದಲ್ಲಿಯೇ ನೀಡಿತು. ಪುಣೆ  ಕೋರ್ಟ್‌ನಲ್ಲಿದ್ದ ಆಟಗಾರರನ್ನು ಖಾಲಿ ಮಾಡಿಸತೊಡಗಿತು. ಆದರೆ, ಇದೇ
ಹಂತದಲ್ಲಿ ಬುಲ್ಸ್‌ನ ಇಬ್ಬರು ಆಟಗಾರರು ಕೊನೆಯ ಲೈನ್‌ನ ಟಚ್ ಮಾಡಿ ಹೊರಹೋಗಿದ್ದು ಯಡವಟ್ಟಾಯಿತು.

ಅಂತೂ 29ನೇ ನಿಮಿಷದಲ್ಲಿ ಪುಣೆ ತಂಡವನ್ನು ಆಲೌಟ್ ಮಾಡುವಲ್ಲಿ ಬುಲ್ಸ್ ಯಶಸ್ವಿಯಾಯಿತು. ಈ ಸಂದರ್ಭದಲ್ಲಿ ಬುಲ್ಸ್ 22-20 ರಿಂದ ಮುನ್ನಡೆ ಪಡೆದಿತ್ತು.
ಪಂದ್ಯ ಮುಂದೆ ಏನೂ ಬೇಕಾದರೂ ಆಗಬಹುದಾಗಿತ್ತು. ಅಂಕಗಳಿಕೆಯಲ್ಲೂ ಎರಡು ತಂಡಗಳು ಸಮಬಲದ ಹೋರಾಟ ಪ್ರದರ್ಶಿಸುತ್ತಿದ್ದವು. 

ಪಂದ್ಯ ಮುಗಿಯಲು 5 ನಿಮಿಷ ಇರುವಾಗ ಉಭಯ ತಂಡಗಳು 23-23 ಅಂಕಗಳಿಸಿರುವುದೇ ರೋಚಕ ಹೋರಾಟಕ್ಕೆ ಸಾಕ್ಷಿ. ಇನ್ನೇನು ಬುಲ್ಸ್ ಕೋರ್ಟ್ ಖಾಲಿ ಆಗುತ್ತೆ ಅನ್ನುವಾಗ ಪುಣೆಯ ನಿತೀನ್ ತೋಮರ್ ಸೂಪರ್ ಟ್ಯಾಕಲ್‌ಗೆ ಸಿಲುಕಿ ಬುಲ್ಸ್ ಗೆಜೀವಬಂತು. ಕೊನೆಯ 1 ನಿಮಿಷ ಬಾಕಿ ಇರುವಾಗ ಬುಲ್ಸ್ 25-26 ರಿಂದ ಅಲ್ಪ ಹಿನ್ನಡೆಯಲ್ಲಿತ್ತು. ಕೊನೆಯ ರೈಡಿಂಗ್‌ನಲ್ಲಿ ಕಾಶಿಲಿಂಗ್ ಅಡಕೆ ಔಟ್ ಆಗಿದ್ದು ಬುಲ್ಸ್ ಗೆಲುವಿನ ಓಟಕ್ಕೆ ಅಡ್ಡಿಯಾಯಿತು.

ಬೆಂಗಾಲ್ ವಿರುದ್ದ ಡೆಲ್ಲಿ ಗೆಲುವಿನ ಸಂಭ್ರಮ:
ಅಂತರ ವಲಯದ ಮೊದಲ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ವಿರುದ್ಧ ಡೆಲ್ಲಿ ಡೇರ್ ಡೆವಿಲ್ಸ್ 30-29 ಅಂಕಗಳಿಂದ ಗೆಲುವು ಸಾಧಿಸಿತು.ಡೆಲ್ಲಿಯ ಚಂದ್ರನ್ ರಂಜಿತ್‌ರ ಭರ್ಜರಿ ರೈಡಿಂಗ್ ಫಲದಿಂದಾಗಿ ಡೆಲ್ಲಿ ಲೀಗ್‌ನಲ್ಲಿ 2ನೇ ಜಯ ದಾಖಲಿಸಿತು. ಮೊದಲ ಅವಧಿಯಲ್ಲಿ ಡೆಲ್ಲಿ 16-13 ರಿಂದ ಮುನ್ನಡೆ ಪಡೆದುಕೊಂಡು ಆತ್ಮವಿಶ್ವಾಸದಲ್ಲಿತ್ತು. 

ಟರ್ನಿಂಗ್ ಪಾಯಿಂಟ್: ಪೈಪೋಟಿಯಿಂದ ಕೂಡಿದ್ದ ಪಂದ್ಯದಲ್ಲಿ 25ನೇ ನಿಮಿಷದಲ್ಲಿ ಡೆಲ್ಲಿ ತಂಡದ ಚಂದ್ರನ್ ರಂಜಿತ್ ಸೂಪರ್ ರೈಡ್ ಮಾಡುವ ಮೂಲಕ ಬೆಂಗಾಲ್ ತಂಡವನ್ನು 2ನೇ ಬಾರಿ ಆಲೌಟ್ ಮಾಡಿದ್ದು ಡೆಲ್ಲಿ ಜಯದಲ್ಲಿ ಮಹತ್ವದ ಪಾತ್ರವಹಿಸಿತು. 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಂಡರ್ 19 ಏಷ್ಯಾಕಪ್‌ ಭಾರತ-ಶ್ರೀಲಂಕಾ ಸೆಮಿಫೈನಲ್ ರದ್ದಾದ್ರೆ ಫೈನಲ್‌ಗೇರೋದು ಯಾರು?
ಸಯ್ಯದ್‌ ಮುಷ್ತಾಕ್‌ ಅಲಿ ಟಿ20: ಜಾರ್ಖಂಡ್‌ಗೆ ಚೊಚ್ಚಲ ಕಿರೀಟ, ಶತಕ ಚಚ್ಚಿ ಅಪರೂಪದ ದಾಖಲೆ ಬರೆದ ಇಶಾನ್ ಕಿಶನ್!