ಡಬ್ಲ್ಯುಎಫ್‌ಐಗೆ ಅಧ್ಯಕ್ಷರ ಆಯ್ಕೆ, ಪದ್ಮಶ್ರಿ ಪ್ರಶಸ್ತಿ ಪ್ರಧಾನಿಗೆ ವಾಪಸ್‌ ನೀಡಲು ಬಂದ ಭಜರಂಗ್‌ ಪೂನಿಯಾ!

By Santosh NaikFirst Published Dec 22, 2023, 6:46 PM IST
Highlights

ಭಾರತೀಯ ಕುಸ್ತಿ ಫೆಡರೇಷನ್‌ಗೆ ಮತ್ತೊಮ್ಮೆ ಬ್ರಿಜ್‌ ಭೂಷನ್‌ ಶರನ್‌ ಸಿಂಗ್‌ ಅವರ ಆಪ್ತರೇ ಅಧ್ಯಕ್ಷರಾಗಿರುವ ಹಿನ್ನಲೆಯಲ್ಲಿ ಅಸಮಾಧಾನಗೊಂಡಿರುವ ಟೋಕಿಯೋ ಒಲಿಂಪಿಕ್‌ ಪದಕ ವಿಜೇತ ಭಜರಂಗ್‌ ಪೂನಿಯಾ ತಮಗೆ ಸರ್ಕಾರ ನೀಡಿದ್ದ ಪದ್ಮಶ್ರೀ ಪ್ರಶಸ್ತಿಯನ್ನು ವಾಪಾಸ್‌ ನೀಡುವುದಾಗಿ ಘೋಷಣೆ ಮಾಡಿದ್ದಾರೆ.

ನವದೆಹಲಿ (ಡಿ.22): ಭಾರತದ ಕುಸ್ತಿ ಒಕ್ಕೂಟದ (ಡಬ್ಲ್ಯುಎಫ್‌ಐ) ನೂತನ ಮುಖ್ಯಸ್ಥರಾಗಿ ನಿರ್ಗಮಿತ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ನಿಕಟವರ್ತಿ ಸಂಜಯ್ ಸಿಂಗ್ ಅವರನ್ನು ಆಯ್ಕೆ ಆಗಿದ್ದಕ್ಕೆ ಅಗುತ್ತಿರುವ ಪ್ರತಿಭಟನೆಗಳ ಮಧ್ಯೆ ಭಾರತದ ಟೋಕಿಯೊ ಒಲಿಂಪಿಕ್ ಪದಕ ವಿಜೇತ ಭಜರಂಗ್ ಪುನಿಯಾ ಅವರು ತಮ್ಮ ಪದ್ಮಶ್ರೀ ಪ್ರಶಸ್ತಿಯನ್ನು ಹಿಂದಿರುಗಿಸುವ ತೀರ್ಮಾನ ಮಾಡಿದ್ದಾರೆ. ಪ್ರಶಸ್ತಿಯನ್ನು ಪ್ರಧಾನಿಗೆ ವಾಪಸ್‌ ನೀಡುವ ನಿಟ್ಟಿನಲ್ಲಿ ಪ್ರಧಾನ ಮಂತ್ರಿ ಕಚೇರಿಗೆ ಅವರು ಹೋಗುತ್ತಿದ್ದ ವೇಳೆ ದೆಹಲಿ ಪೊಲೀಸರು ಅವರನ್ನು ತಡೆದಿರುವ ವಿಡಿಯೋ ಕೂಡ ವೈರಲ್‌ ಆಗಿದೆ. WFI ಮುಖ್ಯಸ್ಥರಾಗಿ ಸಂಜಯ್ ಸಿಂಗ್ ಆಯ್ಕೆಯಾದ ಕಾರಣ ಸಾಕ್ಷಿ ಮಲಿಕ್ ರೆಸ್ಲಿಂಗ್‌ಅನ್ನು ತ್ಯಜಿಸಲು ನಿರ್ಧರಿಸಿದ ಒಂದು ದಿನದ ನಂತರ ಪೂನಿಯಾ ಅವರ ನಿರ್ಧಾರ ಬಂದಿದೆ.

ਪਹਿਲਵਾਨ ਬਜਰੰਗ ਪੂਨੀਆ ਨੇ ਵਾਪਸ ਕੀਤਾ ਪਦਮਸ਼੍ਰੀ ਪੁਰਸਕਾਰ, ਪੀਐਮ ਮੋਦੀ ਨੂੰ ਲਿਖੀ ਚਿੱਠੀ pic.twitter.com/yUwGLHuf8I

— Gurpreet Singh (@TheGurpreetLive)

ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡ ವಿವರವಾದ ಪತ್ರದಲ್ಲಿ, "ಆತ್ಮೀಯ ಪ್ರಧಾನ ಮಂತ್ರಿ ನೀವು ಚೆನ್ನಾಗಿ ಕೆಲಸ ಮಾಡುತ್ತಿದ್ದೀರಿ ಎಂದು ಭಾವಿಸುತ್ತೇವೆ. ನೀವು ದೇಶಕ್ಕಾಗಿ ಕೆಲಸ ಮಾಡುವಲ್ಲಿ ನಿರತರಾಗಿರಬೇಕು. ಆದರೆ ಈ ಎಲ್ಲದರ ನಡುವೆ, ನಾನು ದೇಶದ ಕುಸ್ತಿಪಟುಗಳತ್ತ ನಿಮ್ಮ ಗಮನವನ್ನು ಸೆಳೆಯಲು ಬಯಸುತ್ತೇನೆ. ನೀವು ತಿಳಿದಿರಬೇಕು. ಬ್ರಿಜ್‌ ಭೂಷಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪದ ಮೇಲೆ ದೇಶದ ಮಹಿಳಾ ಕುಸ್ತಿಪಟುಗಳು ಈ ವರ್ಷದ ಜನವರಿಯಲ್ಲಿ ಪ್ರತಿಭಟನೆಯನ್ನು ಪ್ರಾರಂಭಿಸಿದರು, ನಾನು ಕೂಡ ಅವರ ಪ್ರತಿಭಟನೆಗೆ ಸೇರಿಕೊಂಡೆ. ಸರ್ಕಾರವು ಕಠಿಣ ಕ್ರಮದ ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ನಿಲ್ಲಿಸಲಾಗಿತ್ತು' ಎಂದು ಭಜರಂಗ್‌ ಬರೆದಿದ್ದಾರೆ.

ಪ್ರತಿಭಟನೆ ನಡೆಸಿದ ಮೂರು ತಿಂಗಳ ನಂತರವೂ ಬ್ರಿಜ್ ಭೂಷಣ್ ವಿರುದ್ಧ ಯಾವುದೇ ಎಫ್‌ಐಆರ್ ದಾಖಲಾಗಿರಲಿಲ್ಲ ಮತ್ತು ಏಪ್ರಿಲ್‌ನಲ್ಲಿ ನಾವು ಮತ್ತೆ ಬೀದಿಗಿಳಿದಿದ್ದೇವೆ, ಆದ್ದರಿಂದ ಪೊಲೀಸರು ಕನಿಷ್ಠ ಅವರ ವಿರುದ್ಧ ಎಫ್‌ಐಆರ್ ದಾಖಲಿಸಬೇಕು. ಆದರೆ ಅದು ಸಂಭವಿಸಲಿಲ್ಲ, ಆದ್ದರಿಂದ ನಾವು ನ್ಯಾಯಾಲಯದ ಮೊರೆ ಹೋಗಬೇಕಾಯಿತು. ಎಫ್‌ಐಆರ್ ಈಗ ದಾಖಲು ಮಾಡಲಾಗದೆ. ಜನವರಿಯಲ್ಲಿ 19 ದೂರುದಾರರಿದ್ದರು ಆದರೆ ಏಪ್ರಿಲ್ ವೇಳೆಗೆ ಸಂಖ್ಯೆ 7 ಕ್ಕೆ ಇಳಿದಿದೆ. ಇದರರ್ಥ ಬ್ರಿಜ್ ಭೂಷಣ್ 12 ಮಹಿಳಾ ಕುಸ್ತಿಪಟುಗಳ ಮೇಲೆ ತನ್ನ ಪ್ರಭಾವವನ್ನು ಬೀರಿದ್ದಾರೆ, ”ಎಂದು ಭಜರಂಗ್ ಪುನಿಯಾ ಬರೆದಿದ್ದಾರೆ.

ಬ್ರಿಜ್‌ ಭೂಷಣ್‌ ಆಪ್ತ ಸಂಜಯ್‌ ಸಿಂಗ್‌ ಕುಸ್ತಿ ಫೆಡರೇಷನ್‌ ಅಧ್ಯಕ್ಷ, ಸುದ್ದಿಗೋಷ್ಠಿಯಲ್ಲೇ ಕಣ್ಣೀರಿಟ್ಟ ಸಾಕ್ಷಿ ಮಲೀಕ್‌!

ನಮ್ಮ ಪ್ರತಿಭಟನೆಯು 40 ದಿನಗಳ ಕಾಲ ನಡೆಯಿತು ಮತ್ತು ಮತ್ತೊಬ್ಬ ಮಹಿಳಾ ಕುಸ್ತಿಪಟು ಹಿಂದೆ ಸರಿದರು ಎಂದು ಪುನಿಯಾ ಹೇಳಿದರು. "ನಮಗೆ ಸಾಕಷ್ಟು ಒತ್ತಡ ಹೇರಲಾಯಿತು. ನಮ್ಮ ಪ್ರತಿಭಟನಾ ಸ್ಥಳವನ್ನು ಧ್ವಂಸ ಮಾಡಿದ್ದರು. ನಮ್ಮನ್ನು ದೆಹಲಿಯಿಂದ ಹೊರಹಾಕಲಾಯಿತು ಮತ್ತು ಪ್ರತಿಭಟನೆ ಮಾಡದಂತೆ ತಡೆಯಲಾಯಿತು. ಆಗ ಏನು ಮಾಡಬೇಕು ಎನ್ನುವುದು ಗೊತ್ತಾಗದ ಕಾರಣ ನಾವು ನಮ್ಮ ಪದಕಗಳನ್ನು ಗಂಗಾ ನದಿಯಲ್ಲಿ ಎಸೆಯಲು ತೀರ್ಮಾನ ಮಾಡಿದ್ದೆವು' ಎಂದು ಪೂನಿಯಾ ಹೇಳಿದ್ದಾರೆ.

WFI Elections: ಕೊನೆಗೂ ಸುಪ್ರೀಂ ಕೋರ್ಟ್‌ ಹಸಿರು ನಿಶಾನೆ

"ನಾವು ನಮ್ಮ ಹೃದಯದಿಂದ ಹೋರಾಡಿದ್ದೇವೆ ಆದರೆ ಬ್ರಿಜ್ ಭೂಷಣ್ ಅವರಂತಹ ವ್ಯಕ್ತಿ, ಅವರ ವ್ಯಾಪಾರ ಪಾಲುದಾರ ಮತ್ತು ನಿಕಟ ಸಹಾಯಕರು ಡಬ್ಲ್ಯುಎಫ್‌ಐ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ನಾನು ಕುಸ್ತಿಯನ್ನು ತ್ಯಜಿಸುವ ನಿರ್ಧಾರ ಮಾಡಿದ್ದೇನೆ. ಇಂದಿನಿಂದ ನೀವು ನನ್ನನ್ನು ಮ್ಯಾಟ್‌ನ ಮೇಲೆ ನೋಡುವುದಿಲ್ಲ' ಎಂದು ನೋವಿನಿಂದ ಬರೆದುಕೊಂಡಿದ್ದಾರೆ.
 

click me!