ಪಾಕಿಸ್ತಾನ ಜತೆ ಕ್ರಿಕೆಟ್‌ ಸಾಧ್ಯವಿಲ್ಲ: ಐಪಿಎಲ್ ಚೇರ್ಮೆನ್

Published : Feb 19, 2019, 09:30 AM IST
ಪಾಕಿಸ್ತಾನ ಜತೆ ಕ್ರಿಕೆಟ್‌ ಸಾಧ್ಯವಿಲ್ಲ: ಐಪಿಎಲ್ ಚೇರ್ಮೆನ್

ಸಾರಾಂಶ

ಪಾಕಿಸ್ತಾನ ವಿರುದ್ಧದ ದ್ವಿಪಕ್ಷೀಯ ಸರಣಿ ಸಾಧ್ಯವೇ ಇಲ್ಲ ಎಂದು ಐಪಿಎಲ್ ಚೇರ್ಮೆನ್ ರಾಜೀವ್ ಶುಕ್ಲಾ ಹೇಳಿದ್ದಾರೆ. ಪುಲ್ವಾಮ ದಾಳಿ ಬಳಿಕ ರಾಜೀವ್ ಶುಕ್ಲಾ ಹೇಳಿದ್ದೇನು? ಇಲ್ಲಿದೆ ವಿವರ.  

ಮುಂಬೈ(ಫೆ.19): ಪಾಕಿಸ್ತಾನ ಪ್ರಾಯೋಜಿತ ಉಗ್ರ ಚಟುವಟಿಕೆಗಳು ನಿಲ್ಲುವವರೆಗೂ ಆ ದೇಶದ ವಿರುದ್ಧ ಭಾರತ ಕ್ರಿಕೆಟ್‌ ಸರಣಿಗಳನ್ನು ಆಡುವುದಿಲ್ಲ ಎಂದು ಐಪಿಎಲ್‌ ಅಧ್ಯಕ್ಷ ರಾಜೀವ್‌ ಶುಕ್ಲಾ ಹೇಳಿದ್ದಾರೆ. ‘ಈ ಹಿಂದೆಯೇ ನಾವು ಪಾಕ್‌ ವಿರುದ್ಧ ಸರಣಿಗಳನ್ನು ಆಡದಿರಲು ನಿರ್ಧರಿಸಿದ್ದೆವು. ಆ ನಿರ್ಧಾರಕ್ಕೆ ಈಗಲೂ ಬದ್ಧರಾಗಿದ್ದೇವೆ’ ಎಂದು ಶುಕ್ಲಾ ಹೇಳಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನ ಚಿನ್ನಸ್ವಾಮಿಯಲ್ಲೂ ಪಾಕ್‌ ಕ್ರಿಕೆಟಿಗರ ಫೋಟೋ ತೆರವು!

2008ರ ಮುಂಬೈ ದಾಳಿ ಬಳಿಕ ಪಾಕಿಸ್ತಾನ ಜೊತೆಗಿನ ದ್ವಿಪಕ್ಷೀಯ ಸರಣಿ ಕೈಬಿಡಲಾಯ್ತು. ಚೊಚ್ಚಲ ಐಪಿಎಲ್ ಆವೃತ್ತಿಯಲ್ಲಿ ಪಾಕಿಸ್ತಾನ ಕ್ರಿಕೆಟಿಗರು ಪಾಲ್ಗೊಂಡಿದ್ದರು. ಆದರೆ ಮುಂಬೈ ದಾಳಿ ಬಳಿಕ ಐಪಿಎಲ್ ಟೂರ್ನಿಯಿಂದಲೂ ಪಾಕಿಸ್ತಾನ ಕ್ರಿಕೆಟಿಗರಿಗೆ ಬಹಿಷ್ಕಾರ ಹಾಕಲಾಯ್ತು.

ಇದನ್ನೂ ಓದಿ: ತೆಲಂಗಾಣ ರಾಯಭಾರಿ: ಸಾನಿಯಾ ಮಿರ್ಜಾ ಬೇಡವೆಂದ ಬಿಜೆಪಿ ಮುಖಂಡ

2012ರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ಸರಣಿ ಮತ್ತೆ ಆರಂಭಗೊಂಡಿತು.  ತ್ರಿಸದಸ್ಯತ್ವ ಪಡೆಯುವ  ನಿಟ್ಟಿನಲ್ಲಿ ಬಿಸಿಸಿಐ ಅಂದಿನ ಅಧ್ಯಕ್ಷ ಎನ್.ಶ್ರೀನಿವಾಸನ್ ಪಾಕ್ ಜೊತೆ ಒಪ್ಪಂದಕ್ಕೆ ಸಹಿ ಹಾಕಿದ್ದರು. ಹೀಗಾಗಿ ಒಂದು ಬಾರಿ ದ್ವಿಪಕ್ಷೀಯ ಸರಣಿ ಆಯೋಜಿಸಿತ್ತು. ಬಳಿಕ ಗಡಿಯಲ್ಲಿ ಪಾಕ್ ಪ್ರಚೋದಿತ ದಾಳಿ ಹೆಚ್ಚಾದ ಹಿನ್ನಲೆಯಲ್ಲಿ ಮತ್ತೆ ಪಾಕ್ ಜೊತೆಗಿನ ಸರಣಿ ರದ್ದಾಯಿತು.  ಇದೀಗ ಪುಲ್ವಾಮ ದಾಳಿಯಿಂದ ಪಾಕಿಸ್ತಾನ ಜೊತೆಗಿನ ಕ್ರಿಕೆಟ್ ಸರಣಿ ಸಾಧ್ಯವೇ ಇಲ್ಲಎನ್ನವಂತಾಗಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಟೂರ್ನಿಯಲ್ಲಿ ಏಳನೇ ಸೋಲು ಕಾಣುತ್ತಿದ್ದಂತೆಯೇ ಅಚ್ಚರಿ ಹೇಳಿಕೆ ಕೊಟ್ಟ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ!
ಸಿಕ್ಸ್‌, ಫೋರ್‌ ಸುರಿಮಳೆ ಸುರಿಸಿರೋ ವೈಭವ್‌ ಸೂರ್ಯವಂಶಿ; ಸಾಕ್ಷಿ ಸಮೇತ Unprofessional ಎಂದ ಜಿತೇಶ್‌ ಶರ್ಮಾ!