ಗಿಲ್‌ ಕಾರಿಗೆ ಅಡ್ಡ ಬಂದ ಮೂವರ ದುರ್ಮ​ರ​ಣ

Published : Sep 22, 2019, 03:16 PM IST
ಗಿಲ್‌ ಕಾರಿಗೆ ಅಡ್ಡ ಬಂದ ಮೂವರ ದುರ್ಮ​ರ​ಣ

ಸಾರಾಂಶ

ಕಾರು ರ‍್ಯಾಲಿ ವೇಳೆ ಅರ್ಜುನ ಪ್ರಶಸ್ತಿ ವಿಜೇತ ಗೌರವ್ ಗಿಲ್ ಕಾರಿಗೆ ಸಿಕ್ಕಿ ಮೂವರು ಮೃತರಾದ ಧಾರುಣ ಘಟನೆ ಶನಿವಾರ ಸಂಭವಿಸಿದೆ. ಪರಿಣಾಮ ಮೋಟಾರ್‌ ರ‍್ಯಾಲಿಯನ್ನೇ ಸ್ಥಗಿತಗೊಳಿಸಲಾಗಿದೆ. ಈ ಕುರಿತಾದ ವರದಿ ಇಲ್ಲಿದೆ...

ಬಾರ್ಮರ್‌ (ಸೆ.22): ಭಾರ​ತದ ಖ್ಯಾತ ಮೋಟಾರ್‌ ರ‍್ಯಾಲಿ ಚಾಂಪಿ​ಯನ್‌ ಗೌರವ್‌ ಗಿಲ್‌ ಕಾರಿಗೆ ಅಡ್ಡ ಬಂದ ಮೂವರು ಸಾವ​ನ್ನ​ಪ್ಪಿದ ಘಟನೆ ಶನಿ​ವಾರ ಇಲ್ಲಿ ರಾಷ್ಟ್ರೀಯ ರ‍್ಯಾಲಿ ಚಾಂಪಿ​ಯನ್‌ಶಿಪ್‌ ವೇಳೆ ಸಂಭ​ವಿ​ಸಿದೆ. 

ದಕ್ಷಿಣ ಡೇರ್ ರ‍್ಯಾಲಿ: ಗೌರವ್ ಗಿಲ್ ಮಡಿಲಿಗೆ ಚಾಂಪಿಯನ್ ಪ್ರಶಸ್ತಿ!

ಮೋಟಾರ್‌ಸ್ಪೋಟ್ಸ್‌’ನಲ್ಲಿ ಅರ್ಜುನ ಪ್ರಶಸ್ತಿ ಪಡೆದ ಹೆಗ್ಗ​ಳಿಕೆಗೆ ಪಾತ್ರ​ರಾ​ಗಿದ್ದ ಗಿಲ್‌ ಸಹ ಅಪ​ಘಾತದಲ್ಲಿ ಗಾಯ​ಗೊಂಡಿದ್ದು ಆಸ್ಪತ್ರೆಗೆ ದಾಖ​ಲಾ​ಗಿ​ದ್ದಾರೆ. ದುರ್ಘ​ಟನೆಯಲ್ಲಿ ಪ್ರಾಣ ಕಳೆ​ದು​ಕೊಂಡ​ರ​ವ​ನ್ನು ನರೇಂದ್ರ, ಪುಷ್ಪಾ ಹಾಗೂ ಇವ​ರಿ​ಬ್ಬರ ಮಗ ಜಿತೇಂದ್ರ ಎಂದು ಗುರು​ತಿ​ಸ​ಲಾ​ಗಿದೆ. 

ಕಮಿಷನರ್ ಸಾಹೇಬ್ರೇ... ಇದೇನಾ ಟ್ರಾಫಿಕ್ ಪೊಲೀಸಿಂಗ್ ಅಂದ್ರೆ?

ರ‍್ಯಾಲಿ ಕಾರಣ ರಸ್ತೆ ಬಂದ್‌ ಮಾಡ​ಲಾ​ಗಿತ್ತು. ಆದರೂ ಭದ್ರತಾ ಸಿಬ್ಬಂದಿ ಜತೆ ವಾಗ್ವಾದ ನಡೆಸಿ ದ್ವಿಚಕ್ರ ವಾಹ​ನ​ದಲ್ಲಿ ರಸ್ತೆಗಿಳಿದ ನರೇಂದ್ರ ಕುಟುಂಬ, 145 ಕಿ.ಮೀ ವೇಗದಲ್ಲಿ ಆಗ​ಮಿ​ಸು​ತ್ತಿದ್ದ ಕಾರಿಗೆ ಡಿಕ್ಕಿ ಹೊಡೆದು ಸ್ಥಳ​ದಲ್ಲೇ ಪ್ರಾಣ ಬಿಟ್ಟಿತು ಎಂದು ಪ್ರತ್ಯಕ್ಷದರ್ಶಿ​ಗಳು ತಿಳಿ​ಸಿ​ದ್ದಾರೆ. ಈ ಘಟನೆಯಿಂದಾಗಿ ರ‍್ಯಾಲಿ ರದ್ದು​ಗೊ​ಳಿ​ಸ​ಲಾ​ಯಿತು.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

IPL Playoffs: ಒಂದೇ ಸ್ಥಾನ, 4 ತಂಡಗಳ ಫೈಟ್! ಯಾರಿಗೆ ಸಿಗಲಿದೆ ಕೊನೆಯ ಚಾನ್ಸ್?
ಚೇಸ್ ಮಾಡಿ ಗೆಲ್ಲೋ ಚಾನ್ಸ್ ಇದ್ದರೂ 166 ರನ್ ದಾಟಿಸಲು ಪ್ರಯತ್ನಿಸಿ ಸೋಲು ಕಂಡಿತಾ ಆರ್‌ಸಿಬಿ?