
ಪುಣೆ[ಮೇ.22]: ಸಿಎಸ್ಕೆ ನಾಯಕ ಎಂ.ಎಸ್. ಧೋನಿ ಮತ್ತೊಮ್ಮೆ ಅಭಿಮಾನಿಗಳ ಮನಗೆದ್ದಿದ್ದಾರೆ. ಚೆನ್ನೈನಲ್ಲಿ ಪ್ರತಿಭಟನೆಯಾದ ಬಳಿಕ ತವರನ್ನು ಪುಣೆಗೆ ಸ್ಥಳಾಂತರಿಸಿಕೊಂಡಿದ್ದ ಸೂಪರ್ ಕಿಂಗ್ಸ್ ಭಾನುವಾರ ತನ್ನ 2ನೇ ತವರಿನಲ್ಲಿ ಈ ಆವೃತ್ತಿಯ ಕೊನೆ ಪಂದ್ಯವನ್ನಾಡಿತು.
ಪಂದ್ಯದ ಬಳಿಕ ಇಲ್ಲಿನ ಎಂಸಿಎ ಕ್ರೀಡಾಂಗಣದ ಮೈದಾನ ಸಿಬ್ಬಂದಿಗೆ ಧೋನಿ, ಚೆನ್ನೈ ತಂಡದ ವತಿಯಿಂದ ತಲಾ ₹20,000 ಉಡುಗೊರೆ ಕೊಡಿಸಿದರು. ಕಡಿಮೆ ಅವಧಿಯಲ್ಲಿ ಚೆನ್ನೈನ ತವರು ಪಂದ್ಯಗಳಿಗೆ ಆತಿಥ್ಯ ವಹಿಸಲು ಸಾಕಷ್ಟು ಶ್ರಮಿಸಿದ ಮೈದಾನ ಸಿಬ್ಬಂದಿಯನ್ನು ಧೋನಿ ಅಭಿನಂದಿಸಿದರು.
ಇಲ್ಲಿ 6 ಪಂದ್ಯಗಳನ್ನಾಡಿದ ಚೆನ್ನೈ ಸೂಪರ್’ಕಿಂಗ್ಸ್ 5ರಲ್ಲಿ ಗೆದ್ದಿತ್ತು
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.